'ಸೀಜರ್' ಸಿನೆಮಾದಲ್ಲಿ ಚಿರಂಜೀವಿ ಸರ್ಜಾ 
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ ಮುಂದಿನ ಚಿತ್ರ 'ಸೀಜರ್'ಗೆ ಕ್ರೇಸಿಸ್ಟಾರ್

ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಸಿನೆಮಾಗಳನ್ನು ಮುಗಿಸುತ್ತಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ಜೊತೆಗೆ ಒಂದು ಸಿನೆಮಾ ಮಾಡುತ್ತಿರುವ ಚಿರಂಜೀವಿ ಈಗ ಮತ್ತೊಂದು ಯೋಜನೆಗೆ ಅಣಿಯಾಗಿದ್ದಾರೆ.

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸದ್ದಿಲ್ಲದೆ ಸಿನೆಮಾಗಳನ್ನು ಮುಗಿಸುತ್ತಿದ್ದಾರೆ. ನಿರ್ದೇಶಕ ಕೆ ಎಂ ಚೈತನ್ಯ ಜೊತೆಗೆ ಒಂದು ಸಿನೆಮಾ ಮಾಡುತ್ತಿರುವ ಚಿರಂಜೀವಿ ಈಗ ಮತ್ತೊಂದು ಯೋಜನೆಗೆ ಅಣಿಯಾಗಿದ್ದಾರೆ. 
ಚಿರಂಜೀವಿಯವರ 2014 ನೇ ವರ್ಷದ ಹುಟ್ಟುಹಬ್ಬದ ದಿನ ಚಾಲನೆಯಾಗಿ ನೆನೆಗುದಿಗೆ ಬಿದ್ದಿದ್ದ 'ಸೀಜರ್' ಕೊನೆಗೂ ಮುಂದುವರೆಯುತ್ತಿದೆ. ವಿನಯ್ ಕೃಷ್ಣ ನಿರ್ದೇಶನದ ಈ ಚಿತ್ರ, ಬಡ್ಡಿ ದುಡ್ಡು ಕಟ್ಟಲಾಗದೆ ಗಾಡಿಗಳನ್ನು ವಶಪಡಿಸಿಕೊಳ್ಳುವ ಕಥಾ ಹಂದರ ಹೊಂದಿದೆ. 
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಇಂತಹ ಕಥೆ ಕೇಳಿದ್ದೇನೆ ಎನ್ನುವ ಚಿರಂಜೀವಿ "ನೈಜತೆ ಮತ್ತು ಸೃಜನಶೀಲತೆ ಬೆರೆತಿರುವ ಅತಿ ಹೊಚ್ಚ ಹೊಸ ಕಥೆ ಇದು. ಅಲ್ಲದೆ ಈ ಸಿನೆಮಾ ಸೂಕ್ಷ್ಮವಾಗಿ ಭೂಗತ ಲೋಕವನ್ನು ಬೆಸೆಯುತ್ತದೆ" ಎನ್ನುತ್ತಾರೆ.
ಈ ಸಿನೆಮಾದ ಮತ್ತೊಂದು ವಿಶೇಷ ಎಂದರೆ ಚಿರಂಜೀವಿ ಸರ್ಜಾ ಮೊದಲ ಬಾರಿಗೆ ರವಿಚಂದ್ರನ್ ಜೊತೆಗೆ ಕೆಲಸ ಮಾಡುತ್ತಿರುವುದು. "ನಾನು ಅವರ ಜೊತೆಗೆ ನಟಿಸುತ್ತಿರುವುದಕ್ಕೆ ಸಂತಸಗೊಂಡಿದ್ದೇನೆ. ನನ್ನ ಜೋಡಿ ತಾಜಾತನದಿಂದ ಕೂಡಿರುತ್ತದೆ. ಅವರದ್ದು ಈ ಸಿನೆಮಾದಲ್ಲಿ ಮಾಮೂಲಿ ತಂದೆ ಅಥವಾ ಸಹೋದರನ ಪಾತ್ರವಲ್ಲ. ಹೆಸತನದಿಂದ ಕೂಡಿರುತ್ತದೆ" ಎನ್ನುತ್ತಾರೆ ಸರ್ಜಾ. 
ಪರುಲ್ ಯಾದವ್ ಕೂಡ ಸಿನೆಮಾದ ಭಾಗವಾಗುವ ಸಾಧ್ಯತೆ ಇದೆ ಇದೆ ಎಂದು ತಿಳಿದುಬಂದಿದ್ದು ನಾಯಕಿಯ ಪಾತ್ರಕ್ಕೆ ಹೊಸ ನಟಿಯ ಹುಡುಕಾಟದಲ್ಲಿದೆ ಚಿತ್ರತಂಡ. ಪ್ರಕಾಶ್ ರಾಜ್ ಕೂಡ ತಾರಾಗಣದಲ್ಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT