ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ 
ಸಿನಿಮಾ ಸುದ್ದಿ

ಹಿಂದಿ ಡಬ್ 'ಕಬಾಲಿ' ಸೋತರೂ, ರಿಮೇಕ್ ನಲ್ಲಿ ಬಿಗ್ ಬಿ ನಟಿಸುವ ಸಾಧ್ಯತೆ

ವಿಶ್ವದಾದ್ಯಂತ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕಬಾಲಿ' ಸಿನೆಮಾ ಶುಕ್ರವಾರ ಬಿಡುಗಡೆಯಾಗಿದ್ದು, ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾ ಎಂಬ ವರದಿಗಳ ನಡುವೆ ಹಿಂದಿಯಲ್ಲಿ

ನವದೆಹಲಿ: ವಿಶ್ವದಾದ್ಯಂತ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕಬಾಲಿ' ಸಿನೆಮಾ ಶುಕ್ರವಾರ ಬಿಡುಗಡೆಯಾಗಿದ್ದು, ಅತಿ ಹೆಚ್ಚು ಗಳಿಕೆ ಕಂಡ ಸಿನೆಮಾ ಎಂಬ ವರದಿಗಳ ನಡುವೆ ಹಿಂದಿಯಲ್ಲಿ ಡಬ್ ಆದ ಅವತರಿಣಿಕೆ ಅಷ್ಟೇನೂ ಯಶಸ್ವಿಯಾಗಿಲ್ಲ ಎಂದು ತಿಳಿದುಬಂದಿದೆ. 
ಡಿ ಎನ್ ಇ ದಿನಪತ್ರಿಕೆಯ ವರದಿಯ ಪ್ರಕಾರ ಇದಕ್ಕೆ ಕಾರಣ ಹೇಳುವ ಮೂಲಗಳು "ಡಬ್ ಆಗಿರುವ ಹಿಂದಿ ಅವತರಿಣಿಕೆ ಉತ್ತರಭಾರತದಲ್ಲಿ ಅಷ್ಟು ಯಶಸ್ವಿಯಾಗದೆ ಇರುವುದಕ್ಕೆ ಕಾರಣ, ಆ ಸಿನೆಮಾದ ಸಾಂಸ್ಕೃತಿಕ ಮಹತ್ವ. ಮಲೇಶಿಯಾದ ತಮಿಳು ಸಮುದಾಯದ ನಡುವೆ 'ಕಬಾಲಿ' ಸಿನೆಮಾ ನಡೆಯುವುದು. ಆ ಸಂಸ್ಕೃತಿ, ಸಂಭಾಷಣೆ ಎಲ್ಲವು ತಮಿಳು ಸಮುದಾಯಕ್ಕೆ ಹೊಂದಿಕೊಳ್ಳುವಂತಹವು" ಎಂದಿದ್ದಾರೆ. 
ಮುಂಚಿನ ವರದಿಗಳಂತೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 'ಕಬಾಲಿ' ಸಿನೆಮಾದ ಹಿಂದಿ ಅವತರಿಣಿಕೆಯಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿತ್ತು. 
ರಜನಿಕಾಂತ್ ಬಗ್ಗೆ ಮಾತನಾಡಿದ್ದ 65 ವರ್ಷದ ನಟ "ರಜನಿ ಅಸಾಧಾರಣ ವ್ಯಕ್ತಿ. ಅತಿ ದೊಡ್ಡ, ಅದ್ಭುತ ಮತ್ತು ನಿಜವಾದ ಬಾಸ್. ಅವರು ಎಷ್ಟು ಎತ್ತರದ ವ್ಯಕ್ತಿ ಎಂದು ತಮಿಳುನಾಡಿನ ಹೊರಗಿನ ಜನಕ್ಕೆ ಅಷ್ಟು ತಿಳಿದಿಲ್ಲ. ಅವರ ಎಡೆಗಿರುವ ಜನರ ಪ್ರೀತಿಯನ್ನು ಯಾವುದಕ್ಕೂ ಹೋಲಿಸುವುದು ಕಷ್ಟ. ನಾವು ಗೆಳೆಯರು ಮತ್ತು ಸಹೋದ್ಯೋಗಿಗಳು. ನಾನು ಗುಣವಾಚಕಗಳನು ವಿರೋಧಿಸುತ್ತೇನೆ ಆದರೆ ಅವರಿಗಾಗಿ ಹಿಮ್ಮೆಟ್ಟುತ್ತೇನೆ. ಅವರು ನಿಜವಾಗಿಯೂ ಅಭೂತಪೂರ್ವ" ಎಂದಿದ್ದರು. 
ಈ ಹಿಂದೆ ಬಿಗ್ ಬಿ ಸಿನೆಮಾಗಳಾದ 'ದಿವಾರ್', 'ಡಾನ್', 'ನಮಕ್ ಹಲಾಲ್' ಮುಂತಾದ ಸಿನೆಮಾಗಳು ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿ ತಮಿಳಿಗೆ ರಿಮೇಕ್ ಆಗಿದ್ದವು. ಇದು ಈ ಬಾರಿ ತದ್ವಿರುದ್ಧವಾಗಿ ತಮಿಳು ಸಿನೆಮಾದ ಹಿಂದಿ ರಿಮೇಕ್ ನಲ್ಲಿ ಬಿಗ್ ಬಿ ನಟಿಸಲಿದ್ದಾರೆ ಎಂಬ ಸುದ್ದಿ ಪ್ರಚಲಿತವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

ಬಿಕ್ಲು ಶಿವ ಕೊಲೆ ಪ್ರಕರಣ: ಜೈಲುಪಾಲಾಗಿದ್ದ ಬಿಜೆಪಿ ಶಾಸಕ ಭೈರತಿ ಬಸವರಾಜ್‌ಗೆ ಜಾಮೀನು

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್! ಇಂದಿರಾ ಕ್ಯಾಂಟೀನ್ ನಡೆಯುತ್ತಾ?

SCROLL FOR NEXT