ಸಿನಿಮಾ ಸುದ್ದಿ

ಸುದೀಪ್ ನಿಂದ ಸ್ಫೂರ್ತಿ; ಕೆ ಪಿ ಎಲ್ ಕ್ರಿಕೆಟ್ ತಂಡ ಕೊಂಡ ರಾಗಿಣಿ

Guruprasad Narayana
ಬೆಂಗಳೂರು: ಕ್ರಿಕೆಟ್ ಮತ್ತು ಸಿನೆಮಾ ಮನರಂಜನೆ ನೀಡುವುದರಲ್ಲಿ ಎಂದಿಗೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಈಗ ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಸುದೀಪ್ ಅವರ ನಡೆಯನ್ನು ಅನುಸರಿಸಿ ನಟಿ ರಾಗಿಣಿ ದ್ವಿವೇದಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಬಳ್ಳಾರಿ ಟಸ್ಕರ್ಸ್ ತಂಡವನ್ನು ಕೊಂಡಿದ್ದಾರೆ. ಸುದೀಪ್ ಸದ್ಯಕ್ಕೆ ಶಿವಮೊಗ್ಗ ತಂಡದ ಒಡೆಯ. 
ನಟಿಸುವುದರ ಜೊತೆಗೆ ಮತ್ತೇನನ್ನಾದರೂ ಮಾಡುವ ಉತ್ಸಾಹದಲ್ಲಿದ್ದ ನಟಿ ಈಗ ಅರವಿಂದ್ ಶೆಟ್ಟಿ ಅವರ ಸಹ ಒಡೆತನದಲ್ಲಿ ತಂಡವನ್ನು ಕೊಂಡಿದ್ದಾರೆ. ಹಾಗೆಯೇ ಈ ಸರಣಿಯಿಂದ ಒದಗುವ ಧನಲಾಭವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದ್ದಾರಂತೆ. 
ರಾಗಿಣಿ ಅವರು ಬಳ್ಳಾರಿ ಟಸ್ಕರ್ ತಂಡವನ್ನು ಕೊಂಡದ್ದು ಏಕೆಂದರೆ, ತಂಡದಲ್ಲಿರುವ ಬಹುತೇಕರು ಅವರ ಗೆಳೆಯರಂತೆ. ಹಾಗೆಯೇ ಈ ತಂಡ ಪ್ರಾದೇಶಿಕ ಪ್ರತಿಭೆಗಳನ್ನು ಗುರುತಿಸಿರುವುದೂ ಕಾರಣವಂತೆ. 
ಈ ನಟಿಗೆ ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ವಿಶೇಷ ಪ್ರೀತಿ. ಕ್ರಿಕೆಟ್ ನಲ್ಲಿ ಅವರ ಸದ್ಯದ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಆದರೆ ಎಲ್ಲ ಸಮಯದ ಅವರ ನೆಚ್ಚಿನ ನಟ ರಾಹುಲ್ ದ್ರಾವಿಡ್. ದ್ರಾವಿಡ್ ಆಡಿರುವ ಎಲ್ಲಾ ಪಂದ್ಯಗಳನ್ನು ಅವರು ವೀಕ್ಷಿಸಿದ್ದಾರಂತೆ. 
ಈ ವರ್ಷದ ಕೆ ಪಿ ಎಲ್ ಸರಣಿ ಸೆಪ್ಟೆಂಬರ್ 2016 ಕ್ಕೆ ಪ್ರಾರಂಭವಾಗಲಿದೆ. 
SCROLL FOR NEXT