ನಟಿ ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ಸುದೀಪ್ ನಿಂದ ಸ್ಫೂರ್ತಿ; ಕೆ ಪಿ ಎಲ್ ಕ್ರಿಕೆಟ್ ತಂಡ ಕೊಂಡ ರಾಗಿಣಿ

ಕ್ರಿಕೆಟ್ ಮತ್ತು ಸಿನೆಮಾ ಮನರಂಜನೆ ನೀಡುವುದರಲ್ಲಿ ಎಂದಿಗೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಈಗ ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಸುದೀಪ್ ಅವರ ನಡೆಯನ್ನು ಅನುಸರಿಸಿ ನಟಿ ರಾಗಿಣಿ ದ್ವಿವೇದಿ

ಬೆಂಗಳೂರು: ಕ್ರಿಕೆಟ್ ಮತ್ತು ಸಿನೆಮಾ ಮನರಂಜನೆ ನೀಡುವುದರಲ್ಲಿ ಎಂದಿಗೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಈಗ ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಸುದೀಪ್ ಅವರ ನಡೆಯನ್ನು ಅನುಸರಿಸಿ ನಟಿ ರಾಗಿಣಿ ದ್ವಿವೇದಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಬಳ್ಳಾರಿ ಟಸ್ಕರ್ಸ್ ತಂಡವನ್ನು ಕೊಂಡಿದ್ದಾರೆ. ಸುದೀಪ್ ಸದ್ಯಕ್ಕೆ ಶಿವಮೊಗ್ಗ ತಂಡದ ಒಡೆಯ. 
ನಟಿಸುವುದರ ಜೊತೆಗೆ ಮತ್ತೇನನ್ನಾದರೂ ಮಾಡುವ ಉತ್ಸಾಹದಲ್ಲಿದ್ದ ನಟಿ ಈಗ ಅರವಿಂದ್ ಶೆಟ್ಟಿ ಅವರ ಸಹ ಒಡೆತನದಲ್ಲಿ ತಂಡವನ್ನು ಕೊಂಡಿದ್ದಾರೆ. ಹಾಗೆಯೇ ಈ ಸರಣಿಯಿಂದ ಒದಗುವ ಧನಲಾಭವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದ್ದಾರಂತೆ. 
ರಾಗಿಣಿ ಅವರು ಬಳ್ಳಾರಿ ಟಸ್ಕರ್ ತಂಡವನ್ನು ಕೊಂಡದ್ದು ಏಕೆಂದರೆ, ತಂಡದಲ್ಲಿರುವ ಬಹುತೇಕರು ಅವರ ಗೆಳೆಯರಂತೆ. ಹಾಗೆಯೇ ಈ ತಂಡ ಪ್ರಾದೇಶಿಕ ಪ್ರತಿಭೆಗಳನ್ನು ಗುರುತಿಸಿರುವುದೂ ಕಾರಣವಂತೆ. 
ಈ ನಟಿಗೆ ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ವಿಶೇಷ ಪ್ರೀತಿ. ಕ್ರಿಕೆಟ್ ನಲ್ಲಿ ಅವರ ಸದ್ಯದ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಆದರೆ ಎಲ್ಲ ಸಮಯದ ಅವರ ನೆಚ್ಚಿನ ನಟ ರಾಹುಲ್ ದ್ರಾವಿಡ್. ದ್ರಾವಿಡ್ ಆಡಿರುವ ಎಲ್ಲಾ ಪಂದ್ಯಗಳನ್ನು ಅವರು ವೀಕ್ಷಿಸಿದ್ದಾರಂತೆ. 
ಈ ವರ್ಷದ ಕೆ ಪಿ ಎಲ್ ಸರಣಿ ಸೆಪ್ಟೆಂಬರ್ 2016 ಕ್ಕೆ ಪ್ರಾರಂಭವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT