'ಕಥಕ್ಕಳಿ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ಸೆನ್ಸಾರ್ ಮಂಡಳಿ ಕಚೇರಿ ಎದುರು 'ಕಥಕ್ಕಳಿ' ಚಿತ್ರ ತಂಡ ಪ್ರತಿಭಟನೆ

ಮಲೆಯಾಳಿ ಸಿನೆಮಾ 'ಕಥಕ್ಕಳಿ' ನಗ್ನತೆ ಮತ್ತು ಸಭ್ಯತೆಯನ್ನು ಪ್ರದರ್ಶಿಸಿದೆ ಎಂದು ಪ್ರಮಾಣ ಪತ್ರ ನೀಡಲು ನಿರಾಕರಿಸಿರುವ ಸಿನೆಮಾ ಪ್ರಮಾಣಪತ್ರ ಕೇಂದ್ರ ಮಂಡಲಿಯ (ಸಿ ಎಫ್ ಬಿ ಸಿ) ಕಚೇರಿಯ

ತಿರುವನಂತಪುರಂ: ಮಲೆಯಾಳಿ ಸಿನೆಮಾ 'ಕಥಕ್ಕಳಿ' ನಗ್ನತೆ ಮತ್ತು ಸಭ್ಯತೆಯನ್ನು ಪ್ರದರ್ಶಿಸಿದೆ ಎಂದು ಪ್ರಮಾಣ ಪತ್ರ ನೀಡಲು ನಿರಾಕರಿಸಿರುವ ಸಿನೆಮಾ ಪ್ರಮಾಣಪತ್ರ ಕೇಂದ್ರ ಮಂಡಳಿಯ (ಸಿ ಎಫ್ ಬಿ ಸಿ) ಕಚೇರಿಯ ಮುಂದೆ ಚಿತ್ರತಂಡ ಪ್ರತಿಭಟನೆ ನಡೆಸಿದೆ.

ಸೈಜೋ ಕನ್ನನೈಕ್ಕಲ್ ನಿರ್ದೇಶನದ ಈ ಚಿತ್ರದ ಕೈಮ್ಯಾಕ್ಸ್ ದೃಶ್ಯವನ್ನು ಸೇರಿದಂತೆ ಮೂರು ಕಡೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಈಗಾಗಲೇ ಕೇರಳದ ಸಿನೆಮಾ ನೌಕರರ ಸಂಘ (ಎಫ್ ಇ ಎಫ್ ಕೆ ಎ) ಹೈಕೋರ್ಟ್ ಮೆಟ್ಟಿಲು ಹತ್ತಿದ್ದು, ಈ ಪ್ರತಿಭಟನೆಗೂ ಕೈಜೋಡಿಸಿದೆ.

ಸಂಘದ ಪ್ರಧಾನ ಕಾರ್ಯದರಿ ಬಿ ಉನ್ನಿಕೃಷ್ಣನ್ ನೇತೃತ್ವದಲ್ಲಿ ಎಫ್ ಇ ಎಫ್ ಕೆ ಎ ಸದಸ್ಯರು ಸಿ ಬಿ ಎಫ್ ಸಿ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆಯನ್ನು ಸೇರಿಕೊಂಡಿದ್ದಾರೆ.

ಸಿನೆಮಾದ ಆತ್ಮದಂತಿರುವ ದೃಶ್ಯಗಳಿಗೇ ಕತ್ತರಿ ಹಾಕಲು ಸೆನ್ಸಾರ್ ಮಂಡಲಿ ಸೂಚಿಸಿದೆ ಎಂದು ೨೭ ವರ್ಷದ ಕನ್ನನೈಕ್ಕಲ್ ಆರೋಪಿಸಿದ್ದಾರೆ. ಮಂಡಳಿಯ ಈ ತೀರ್ಪು ನಿರ್ದೇಶಕನ ಸೃಜನಶೀಲ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಕೂಡ ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್ ಸಿನೆಮಾ 'ಉಡ್ತಾ ಪಂಜಾಬ್' ಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿ ೧೩ ಕಟ್ ಸುಚಿಸಿದ್ದ ಸೆನ್ಸಾರ್ ಮಂಡಳಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಒಂದು ಕಡೆ ಮಾತ್ರ ಕಟ್ ಸೂಚಿಸಿ ಸಿನೆಮಾದ ಬಿಡುಗಡೆಗೆ ಹಾದಿ ಸುಗಮಗೊಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT