ನಟಿ ಮೇಘನಾ 
ಸಿನಿಮಾ ಸುದ್ದಿ

ಅಂಕಿಅಂಶಗಳೇ ಯಶಸ್ಸಿಗೆ ಮಾನದಂಡವಲ್ಲ; 'ಲಕ್ಷ್ಮಣ' ನಾಯಕಿ ಮೇಘನಾ ರಾಜ್

ಕಳೆದ ವರ್ಷ 'ಆಟಗಾರ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಮೇಘನಾಗೆ 'ಲಕ್ಷ್ಮಣ' ೨೦೧೬ರ ಮೊದಲ ಬಿಡುಗಡೆ. "ನಾನು ಪ್ರತಿ ಆರು ತಿಂಗಳಿಗೊಂದು ಸಿನೆಮಾ ಮಾಡುವ ಕನಸು ಕಂಡಿಲ್ಲ.

ಬೆಂಗಳೂರು: ಕಳೆದ ವರ್ಷ 'ಆಟಗಾರ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಮೇಘನಾಗೆ 'ಲಕ್ಷ್ಮಣ' ೨೦೧೬ರ ಮೊದಲ ಬಿಡುಗಡೆ. "ನಾನು ಪ್ರತಿ ಆರು ತಿಂಗಳಿಗೊಂದು ಸಿನೆಮಾ ಮಾಡುವ ಕನಸು ಕಂಡಿಲ್ಲ. ಅದು ನನ್ನ ಯೋಜನೆಯೂ ಅಲ್ಲ. ಹೀರೋಗಳು ಪ್ರತಿ ಸಿನೆಮಾಗೂ ಅಷ್ಟೊಂದು ಸಮಯ ತೆಗೆದುಕೊಳ್ಳಬಹುದಾದರೆ, ನಾಯಕ ನಟಿಗೂ ಅದೇ ಅನ್ವಯಿಸುತ್ತದೆ. ಕೊನೆಗೆ ಪ್ರೇಕ್ಷಕರಿಗೆ ನೀಡುತ್ತಿರುವ ಸಿನೆಮಾದ ಗುಣಮಟ್ಟವೇ ಮುಖ್ಯ ಎನ್ನುತ್ತಾರೆ ನಟಿ.

ಈ ವಾರ ಬಿಡುಗಡೆಯಾಗಲಿರುವ 'ಲಕ್ಷ್ಮಣ' ಚಿತ್ರೀಕರಣ ದೀರ್ಘ ಕಾಲ ಹಿಡಿದಿದ್ದು ಏಕೆಂದರೆ ಅದು ದೊಡ್ಡ ಬಜೆಟ್ ಸಿನೆಮಾ ಅಂತೆ. ಅಲ್ಲದೆ ರಾಜಕಾರಣಿ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಅವರನ್ನು ಸಿನೆಮಾಗೆ ಪರಿಚಯಿಸುತ್ತಿದ್ದಾರೆ ನಿರ್ದೇಶಕ ಆರ್ ಚಂದ್ರು.

"ಹಾಡುಗಳು ಮತ್ತು ನೃತ್ಯಗಳ ಮೇಲೆ ನಿಂತಿರುವ ಮಾಮೂಲಿ ಕಮರ್ಷಿಯಲ್ ಸಿನೆಮಾ ಅಲ್ಲ ಇದು. ಸೂಕ್ಷ್ಮತೆಯ ಸಿನೆಮಾ. ನನಗೆ ಸಾಮಾನ್ಯ ಸಿನೆಮಾಗಳಲ್ಲಿ ನಾಯಕ ನಟಿಯ ಪಾತ್ರ ವಹಿಸಲು ಇಷ್ಟ ಇಲ್ಲ. ಈ ಸಿನೆಮಾದಲ್ಲಿ ಗಟ್ಟಿ ಪಾತ್ರವನ್ನು ನಿರ್ವಹಿಸಿದ್ದೇನೆ" ಎನ್ನುತ್ತಾರೆ ಮೇಘನಾ.

ಚೊಚ್ಚಲ ನಟ ಅನೂಪ್ ಬಗ್ಗೆಯೂ ಪ್ರಶಂಸೆಯ ಮಾತುಗಳನ್ನಾಡುವ ನಟಿ "ಅನೂಪ್ ಚಲನಶೀಲ ವ್ಯಕ್ತಿ. ಅವರು ಕಲಿಯುವುದಕ್ಕೆ ಸದಾ ಉತ್ಸುಕರಾಗಿದ್ದರು. ದೊಡ್ಡ ಕುಟುಂಬದಿಂದ ಬಂದಿದ್ದರೂ ತಮ್ಮ ಪಾತ್ರಕ್ಕಾಗಿ ಕಷ್ಟ ಪಟ್ಟು ದುಡಿದರು" ಎನ್ನುತ್ತಾರೆ ಮೇಘನಾ.

ತಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವಾದ್ದರಿಂದ ಸೆಟ್ ಗೆ ಬರುತ್ತಿದ್ದ ರಾಜಕಾರಣಿ ಎಚ್ ಎಂ ರೇವಣ್ಣನವರೊಂದಿಗೆ ಮಾತುಕತೆ ಸಿನೆಮಾಗೆ ಮೀಸಲಾಗುತ್ತಿತ್ತು ಎನ್ನುವ ನಟಿ "ಒಳ್ಳೆಯ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಕ್ಕೆ ಖುಷಿಯಿದೆ. ಅವರ ಸಿನೆಮಾ ಜ್ಞಾನದ ಬಗ್ಗೆ ನನಗೆ ಅಪಾರ ಮೆಚ್ಚುಗಿಯಿದೆ. ಅನೂಪ್ ಡಬ್ಬಿಂಗ್ ಮಾಡುವ ವೇಳೆಯಲ್ಲಿ ಅವರು ಬಹಳ ಸಹಾಯ ಮಾಡಿದರು. ರಾಜಕೀಯದಲ್ಲಿ ಬಹಳ ಬ್ಯುಸಿಯಾಗಿದ್ದರೂ ನಿರ್ಮಾಪಕನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರು" ಎನ್ನುತಾರೆ ನಟಿ.

'ಲಕ್ಷ್ಮಣ' ನ ಬಿಡುಗಡೆಯ ನಂತರ 'ಭುಜಂಗ' ಮತ್ತು 'ಅಲ್ಲಮ ಪ್ರಬು' ಸಿನೆಮಾಗಳ ಬಿಡುಗಡೆಯನ್ನು ಮೇಘನಾ ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT