ನಟಿ ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

'ಕಿಚ್ಚು' ಗಾಗಿ ಸಂಕೇತ ಭಾಷೆ ಕಲಿತ ರಾಗಿಣಿ

ನಟಿ ರಾಗಿಣಿ ದ್ವಿವೇದಿ ತಮ್ಮ ಮುಂದಿನ ಚಿತ್ರ 'ಕಿಚ್ಚು'ಗಾಗಿ ತನುಮನವನ್ನೆಲ್ಲಾ ಅರ್ಪಿಸಿದ್ದಾರೆ. ಪ್ರದೀಪ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಗ್ಲ್ಯಾಮರ್ ನಿಂದ ಹೊರಬಂದಿರುವ ನಟಿ, ಸಂಕೇತ ಭಾಷೆಯನ್ನು

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ತಮ್ಮ ಮುಂದಿನ ಚಿತ್ರ 'ಕಿಚ್ಚು'ಗಾಗಿ ತನುಮನವನ್ನೆಲ್ಲಾ ಅರ್ಪಿಸಿದ್ದಾರೆ. ಪ್ರದೀಪ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಗ್ಲ್ಯಾಮರ್ ನಿಂದ ಹೊರಬಂದಿರುವ ನಟಿ, ಸಂಕೇತ ಭಾಷೆಯನ್ನು ಕೂಡ ಕಲಿತಿದ್ದಾರಂತೆ.

"ಸಿನೆಮಾದಲ್ಲಿ ನನ್ನ ಜೋಡಿ ಧ್ರುವ ಮತ್ತು ನನ್ನ ಸಹೋದರಿಯ ಪಾತ್ರ ನಿರ್ವಹಿಸುತ್ತಿರುವ ನಾಟಿಗೆ ವಾಕ್- ಶ್ರವಣ ದೋಷ ಇದೆ. ಚಿತ್ರೀಕರಣ ವೇಳೆಯಲ್ಲಿ ಅವರ ಜೊತೆಗೆ ಸಂವಹನ ಸಾಧಿಸಲು ನನಗೆ ಸಂಕೇತ ಭಾಷೆ ಕಲಿಯಬೇಕಾಗಿತ್ತು. ಅದನ್ನು ಸಿನೆಮಾದಲ್ಲೂ ಬಳಸಿದ್ದೇವೆ" ಎನ್ನುತ್ತಾರೆ ರಾಗಿಣಿ.

ರಾಗಿಣಿ ಎರಡೂ ವರೆ ವಾರಗಳ ಕಾಲ ಸಂಕೇತ ಭಾಷೆ ಕಲಿತಿದ್ದು ಧ್ರುವ್ ಅವರಿಂದಲೂ ಸಲಹೆಗಳನ್ನು ಪಡೆದಿದ್ದಾರಂತೆ. "ಸಿನಿಮಾದಲ್ಲಿರುವ ಧ್ರುವ್ ಪಾತ್ರ ನಿಜ ಜೀವನದಲ್ಲಿದ್ದಂತೆಯೇ. ನಮ್ಮಿಬ್ಬರನ್ನು ತೆರೆಯ ಮೇಲೆ ಕಾಣಲು ಹವಣಿಸುತ್ತಿದ್ದೇವೆ ಏಕೆಂದರೆ ನಮ್ಮಿಬರ ನಡುವೆ ವಿಭಿನ್ನ ರೀತಿಯ ಕೆಮಿಸ್ಟ್ರಿ ಇದೆ" ಎನ್ನುತ್ತಾರೆ ರಾಗಿಣಿ.

ಚಿಕ್ಕಮಗಳೂರು ಸಂತೆಯಲ್ಲಿ ಈ ಸಿನೆಮಾದ ಕೆಲವು ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಾಗಿಣಿ "ಕರ್ನಾಟಕ ಈ ಭಾಗದ ಜನರ ಜೀವನ ಶೈಲಿ ವಿಭಿನ್ನವಾಗಿದೆ. ಈ ಭಾಗದಲ್ಲಿ ನಾನು ಕಳೆದ ಕಡಿಮೆ ಸಮಯದಲ್ಲೇ ಅಲ್ಲಿನ ಜನರ ಮುಗ್ಧತೆ ಮತ್ತು ಶಕ್ತಿಯ ಅನಾವರಣ ನನಗಾಯಿತು. ನಗರ ಜೀವನದ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಾರೆ ಎಂದು ನಾವು ತಿಳಿದಿರುತ್ತೇವೆ ಆದರೆ ಇಲ್ಲಿನ ಭಾಗದ ಮಹಿಳೆಯರು 14 ಘಂಟೆಗೂ ಹೆಚ್ಚು ಕಾಲ ದುಡಿಯುತ್ತಾರೆ" ಎನ್ನುತ್ತಾರೆ ರಾಗಿಣಿ.

ಕಾಫಿ ಎಸ್ಟೇಟ್ ಕೆಲಸಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ "ಕಾಫಿ ಎಸ್ಟೇಟ್ ಕೆಲಸಗಾರರ ವಿವಿಧ ಮುಖಗಳನ್ನು ಸೆರೆಹಿಡಿದು ಅವರ ಜೀವನವನ್ನು ಈ ಸಿನೆಮಾ ಚರ್ಚಿಸುತ್ತದೆ" ಎನ್ನುತ್ತಾರೆ ನಟಿ.

ಸದ್ಯಕ್ಕೆ ಮಳೆ ನಿಲ್ಲುವುದಕ್ಕೆ ಕಾಯುತ್ತಿರುವ ಚಿತ್ರತಂಡ, ಚಿತ್ರೀಕರಣವನ್ನು ಪುನರಾರಂಭಿಸುವ ಉತ್ಸಾಹದಲ್ಲಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT