'...ರೆ' ಸಿನೆಮಾದಲ್ಲಿ ಅನಂತನಾಗ್ 
ಸಿನಿಮಾ ಸುದ್ದಿ

ನಮ್ಮ ಜೀವನಗಳ 'ಆದರೆ'ಗಳ ನಡುವೆ ಸುತ್ತುವ '...ರೆ': ಸುನಿಲ್ ಕುಮಾರ್ ದೇಸಾಯಿ

'ತರ್ಕ', 'ಉತ್ಕರ್ಷ', 'ಸ್ಪರ್ಶ', 'ಬೆಳದಿಂಗಳ ಬಾಲೆ', 'ನಮ್ಮೂರ ಮಂದಾರ ಹೂವೆ' ಇಂತಹ ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ನೀಡಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ,

ಬೆಂಗಳೂರು: 'ತರ್ಕ', 'ಉತ್ಕರ್ಷ', 'ಸ್ಪರ್ಶ', 'ಬೆಳದಿಂಗಳ ಬಾಲೆ', 'ನಮ್ಮೂರ ಮಂದಾರ ಹೂವೆ' ಇಂತಹ ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ನೀಡಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ದೀರ್ಘ ಕಾಲದ ವಿರಾಮದ ನಂತರ '...ರೆ' ಸಿನೆಮಾದ ಮೂಲಕ ನಿರ್ದೇಶನಕ್ಕೆ ಹಿಂದಿರುಗಿದ್ದಾರೆ. ಮೂಲಗಳ ಪ್ರಕಾರ ಈ ಸಿನೆಮಾ ಬಾದಲ್ ಸರ್ಕಾರ್ ಅವರ 'ಬಲ್ಲಾಬ್ಪುರೆರ್ ರೂಪಕಥ' ನಾಟಕಕ್ಕೆ ಹೋಲಿಕೆಯಿದೆಯಂತೆ.

ನಿರ್ದೇಶಕರೇ ಹೇಳುವಂತೆ ಮೂರೂ ವರ್ಷಗಳ ಕೆಳಗೆ ತಾವು ಪ್ರಾರಂಭಿಸಿದ್ದ 'ತಂದಾನ ತಂದಾನ' ಸಿನೆಮಾವನ್ನು '...ರೆ' ಎಂದು ಮರು ಹೆಸರಿಸಲಾಗಿದೆಯಂತೆ. ಪ್ರೀತಿ, ಮದುವೆ ಹಾಗು ನಮ್ಮ ಜೀವನಗಳಲ್ಲಿ 'ಆದರೆ'ಗಳ ಸುತ್ತ ಸಿನೆಮಾ ಸುತ್ತುದಂತೆ.

"ಈ ಸಿನೆಮಾ ಜನರಿಗೆ ಅರಿವು ಮೂಡಿಸುತ್ತದೆ. ನಾನು ನನ್ನ ಸಿನೆಮಾಗಳಲ್ಲಿ ಸಂದೇಶ ನೀಡಲು ಇಷ್ಟಪಡುವುದಿಲ್ಲವಾದರು, ಜನಕ್ಕೆ ಸಂದೇಶ ಸಿಗುವುದಂತೂ ನಿಜ" ಎನ್ನುತ್ತಾರೆ ಸುನಿಲ್ ಕುಮಾರ್ ದೇಸಾಯಿ.

ಅನಂತನಾಗ್, ರಮೇಶ್ ಅರವಿಂದ್, ಲೋಕನಾಥ್, ಜಿ ಕೆ ಗೋವಿಂದರಾವ್, ಮಾಸ್ಟರ್ ಹಿರಣ್ಣಯ್ಯ, ರಮೇಶ್ ಭಟ್, ಶಿವರಾಂ, ಸುಮನ್ ನಗರ್ಕರ್, ಹರ್ಷ ಪೂಣಚ್ಚ ಹೀಗೆ ಬಹು ದೊಡ್ಡ ತಾರಾಗಣವಿರುವ ಈ ಸಿನೆಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವುದಂತೂ ನಿಜ. ಹಂಸಲೇಖ ಅವರ ಸಂಗೀತ ಕೂಡ ಸಿನೆಮಾಗಿದೆ.

"ಈ ಸಿನೆಮಾ ಗೆದ್ದರೆ, ರೋಚಕ ಥ್ರಿಲ್ಲರ್ ಸಿನೆಮಾ ಒಂದನ್ನು ಮಾಡುತ್ತೇನೆ" ಎನ್ನುತ್ತಾರೆ ಸುನಿಲ್ ಕುಮಾರ್ ದೇಸಾಯಿ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಒಬ್ಬ ರಾಜಿನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ; ಸಿಎಂ ಡಿಕೆ ಶಿವಕುಮಾರ್

Park Billiಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ: ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!