ಸುದೀಪ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಪುನೀತ್ ಸಿನೆಮಾಗೆ ಸುದೀಪ್ ಕಂಠ

ಈಗಾಗಲೇ ಕೆಲವು ಪರಭಾಷಾ ನಟರು ಪುನೀತ್ ರಾಜಕುಮಾರ್ ನಟಿಸುತ್ತಿರುವ 'ಚಕ್ರವ್ಯೂಹ' ಸಿನೆಮಾದಲ್ಲಿ ಹಿನ್ನಲೆ ಗಾಯಕರಾಗಿರುವ ಸುದ್ದಿಯ ಜೊತೆಗೆ

ಬೆಂಗಳೂರು: ಈಗಾಗಲೇ ಕೆಲವು ಪರಭಾಷಾ ನಟರು ಪುನೀತ್ ರಾಜಕುಮಾರ್ ನಟಿಸುತ್ತಿರುವ 'ಚಕ್ರವ್ಯೂಹ' ಸಿನೆಮಾದಲ್ಲಿ ಹಿನ್ನಲೆ ಗಾಯಕರಾಗಿರುವ ಸುದ್ದಿಯ ಜೊತೆಗೆ ಕನ್ನಡ ಸಿನೆಮಾ ಅಭಿಮಾನಿಗಳಿಗೆ ಖುಷಿ ತರುವಂತಹ ಮತ್ತೊಂದು ಸುದ್ದಿಯಲ್ಲಿ ಸುದೀಪ್ ಈ ಸಿನೆಮಾದ ಆರಂಭಿಕ ಭಾಗದಲ್ಲಿ ನಿರೂಪಕನಾಗಿ ಕಂಠದಾನ ಮಾಡಲಿದ್ದಾರೆ.

"'ಚಕ್ರವ್ಯೂಹ' ಮನರಂಜನಾ ಸಿನೆಮಾ. ಅದಕ್ಕೆ ಸುದೀಪ್ ಕಂಠದಾನ ಮಾಡುವುದು ಅತಿ ಸೂಕ್ತ ಎಂದೆನಿಸಿತ್ತು. ಅಲ್ಲದೆ ಈ ಸಿನೆಮಾದಲ್ಲಿ ಸಾಮಾಜಿಕ ಸಂದೇಶವೊಂದಿದೆ. ಅದಕ್ಕಾಗಿ ಚಿಂತಿಸಿದಾಗ, ನಮಗೆ ಹೊಳೆದದ್ದು ಸುದೀಪ್. ನಾವು ಅವರನ್ನು ಕೇಳಿಕೊಂಡಾಗ ಅವರು ಒಪ್ಪಿಕೊಂಡರು" ಎನ್ನುತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.

ಇದನ್ನು ಪುನೀತ್ ಕೂಡ ಒಪ್ಪಿದ್ದು, ಸುದೀಪ್ ಇದನ್ನು ಗೆಳೆತನದ ಸಲುವಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೂನಿಯರ್ ಎನ್ ಟಿ ಆರ್ ಮತ್ತು ಕಾಜಲ್ ಅಗರವಾಲ್ ಈ ಸಿನೆಮಾಗಾಗಿ ಹಾಡುಗಳನ್ನು ಹಾಡಿದ್ದಾರೆ.

ಚಿತ್ರೀಕರಣದ ನಂತರದ ಕೆಲಸಗಳು ಮುಂದುವರೆದಿದ್ದು, ಮಾರ್ಚ್ ೧೨ ಕ್ಕೆ ವೈಭವಯುತ ಆಡಿಯೋ ಅನಾವರಣ ಹಮ್ಮಿಕೊಳ್ಳಲು ಚಿತ್ರತಂಡ ಸಜ್ಜಾಗಿದೆ.

ಸರವಣನ್ ನಿರ್ದೇಶನದ ಈ ಸಿನೆಮಾದಲ್ಲಿ ರಚಿತಾ ರಾಮ್ ನಾಯಕ ನಟಿ. ತಮಿಳು ನಟ ಅರುಣ್ ವಿಜಯ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದು, ಎಸ್ ಎಸ್ ತಮನ್ ಸಂಗೀತ ಮತ್ತು ಷಣ್ಮುಗ ಸುಂದರಮ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT