ಸುದೀಪ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಪುನೀತ್ ಸಿನೆಮಾಗೆ ಸುದೀಪ್ ಕಂಠ

ಈಗಾಗಲೇ ಕೆಲವು ಪರಭಾಷಾ ನಟರು ಪುನೀತ್ ರಾಜಕುಮಾರ್ ನಟಿಸುತ್ತಿರುವ 'ಚಕ್ರವ್ಯೂಹ' ಸಿನೆಮಾದಲ್ಲಿ ಹಿನ್ನಲೆ ಗಾಯಕರಾಗಿರುವ ಸುದ್ದಿಯ ಜೊತೆಗೆ

ಬೆಂಗಳೂರು: ಈಗಾಗಲೇ ಕೆಲವು ಪರಭಾಷಾ ನಟರು ಪುನೀತ್ ರಾಜಕುಮಾರ್ ನಟಿಸುತ್ತಿರುವ 'ಚಕ್ರವ್ಯೂಹ' ಸಿನೆಮಾದಲ್ಲಿ ಹಿನ್ನಲೆ ಗಾಯಕರಾಗಿರುವ ಸುದ್ದಿಯ ಜೊತೆಗೆ ಕನ್ನಡ ಸಿನೆಮಾ ಅಭಿಮಾನಿಗಳಿಗೆ ಖುಷಿ ತರುವಂತಹ ಮತ್ತೊಂದು ಸುದ್ದಿಯಲ್ಲಿ ಸುದೀಪ್ ಈ ಸಿನೆಮಾದ ಆರಂಭಿಕ ಭಾಗದಲ್ಲಿ ನಿರೂಪಕನಾಗಿ ಕಂಠದಾನ ಮಾಡಲಿದ್ದಾರೆ.

"'ಚಕ್ರವ್ಯೂಹ' ಮನರಂಜನಾ ಸಿನೆಮಾ. ಅದಕ್ಕೆ ಸುದೀಪ್ ಕಂಠದಾನ ಮಾಡುವುದು ಅತಿ ಸೂಕ್ತ ಎಂದೆನಿಸಿತ್ತು. ಅಲ್ಲದೆ ಈ ಸಿನೆಮಾದಲ್ಲಿ ಸಾಮಾಜಿಕ ಸಂದೇಶವೊಂದಿದೆ. ಅದಕ್ಕಾಗಿ ಚಿಂತಿಸಿದಾಗ, ನಮಗೆ ಹೊಳೆದದ್ದು ಸುದೀಪ್. ನಾವು ಅವರನ್ನು ಕೇಳಿಕೊಂಡಾಗ ಅವರು ಒಪ್ಪಿಕೊಂಡರು" ಎನ್ನುತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.

ಇದನ್ನು ಪುನೀತ್ ಕೂಡ ಒಪ್ಪಿದ್ದು, ಸುದೀಪ್ ಇದನ್ನು ಗೆಳೆತನದ ಸಲುವಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೂನಿಯರ್ ಎನ್ ಟಿ ಆರ್ ಮತ್ತು ಕಾಜಲ್ ಅಗರವಾಲ್ ಈ ಸಿನೆಮಾಗಾಗಿ ಹಾಡುಗಳನ್ನು ಹಾಡಿದ್ದಾರೆ.

ಚಿತ್ರೀಕರಣದ ನಂತರದ ಕೆಲಸಗಳು ಮುಂದುವರೆದಿದ್ದು, ಮಾರ್ಚ್ ೧೨ ಕ್ಕೆ ವೈಭವಯುತ ಆಡಿಯೋ ಅನಾವರಣ ಹಮ್ಮಿಕೊಳ್ಳಲು ಚಿತ್ರತಂಡ ಸಜ್ಜಾಗಿದೆ.

ಸರವಣನ್ ನಿರ್ದೇಶನದ ಈ ಸಿನೆಮಾದಲ್ಲಿ ರಚಿತಾ ರಾಮ್ ನಾಯಕ ನಟಿ. ತಮಿಳು ನಟ ಅರುಣ್ ವಿಜಯ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದು, ಎಸ್ ಎಸ್ ತಮನ್ ಸಂಗೀತ ಮತ್ತು ಷಣ್ಮುಗ ಸುಂದರಮ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!