'ಜೈ ಮಾರುತಿ ೮೦೦' ಸಿನೆಮಾದಲ್ಲಿ ಶರಣ್ 
ಸಿನಿಮಾ ಸುದ್ದಿ

'ಜೈ ಮಾರುತಿ...' ಎಂದ ಪುನೀತ್ ರಾಜಕುಮಾರ್

ನಟ ಪುನೀತ್ ರಾಜಕುಮಾರ್ ಗಾಯಕನಾಗಿಯೂ ಕನ್ನಡ ಪ್ರೇಕ್ಷಕರ ಮನಗೆದ್ದವರು. ಈ ಅಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಹರ್ಷ, ತಮ್ಮ ನಿರ್ದೇಶನದ ಮುಂದಿನ ಚಿತ್ರದ

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಗಾಯಕನಾಗಿಯೂ ಕನ್ನಡ ಪ್ರೇಕ್ಷಕರ ಮನಗೆದ್ದವರು. ಈ ಅಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಹರ್ಷ, ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಹಾಡನ್ನು ಅವರಿಂದಲೇ ಹಾಡಿಸಿದ್ದಾರೆ.

ಚೇತನ್ ಕುಮಾರ್ ಬರದಿರುವ 'ಜೈ ಮಾರುತಿ ೮೦೦' ಸಿನೆಮಾದ ಶೀರ್ಷಿಕೆ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸೋಮವಾರ ಬೆಂಗಳೂರಿನ ಸ್ಟುಡಿಯೋ ಒಂದರಲ್ಲಿ ಪುನೀತ್ ಈ ಹಾಡನ್ನು ಹಾಡಿದ್ದಾರೆ.

"ಇದೇ ಮೊದಲ ಬಾರಿಗೆ ನನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನೆಮಾದಲ್ಲಿ ಪುನೀತ್ ಹಾಡುತ್ತಿದ್ದಾರೆ. ಹಾಡಿನ ಟ್ಯೂನ್ ಕೇಳಿದಾಗ ಪುನೀತ್ ಕೂಡ ಉತ್ಸುಕರಾಗಿದ್ದರು. ಹನುಮಾನ್ ಮೇಲೆ ಅವರು ಕೇಳಿರುವ ಅತ್ಯುತ್ತಮ ಹಾಡುಗಳಲ್ಲಿ ಇದೊಂದು ಎಂಬುದು ಅವರ ಅಭಿಪ್ರಾಯವಾಗಿತ್ತು" ಎಂದು ಭಜರಂಗಿ, ವಜ್ರಕಾಯ ಸಿನೆಮಾದ ನಿರ್ದೇಶಕ ಹೇಳಿದ್ದಾರೆ.

ಬೇಸಿಗೆಗೆ ಸಿನೆಮಾ ಬಿಡುಗಡೆ ಮಾಡಲು ಮುಂದಾಗಿರುವ ಹರ್ಷ, ಕ್ರಿಕೆಟ್ ಜ್ವರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ. "ಈ ಸಿನೆಮಾದಲ್ಲಿ ಮಕ್ಕಳ ಮನರಂಜನೆಯನ್ನು ಗುರಿಯಾಗಿಸಿಕೊಂಡಿದ್ದೇವೆ. ಬೇಸಿಗೆ ರಜೆಗೆ ಮಕ್ಕಳಿಗೆ ಇದು ಮುದ ನೀಡಲಿದೆ. ಇಡೀ ಕುಟುಂಬವೇ ಈ ಹಾಸ್ಯ ಚಿತ್ರವನ್ನು ನೋಡಿ ಖುಷಿ ಪಡಬಹುದಾಗಿದೆ" ಎನ್ನುತ್ತಾರೆ ಹರ್ಷ.

ಜಯಣ್ಣ ಕಂಬೈನ್ಸ್ ಸಂಸ್ಥೆ ನಿರ್ಮಿಸಿರುವ ಈ ಸಿನೆಮಾ ಚಿತ್ರೀಕರಣ ನಂತರದ ಕೆಲಸದಲ್ಲಿ ನಿರತವಾಗಿದೆ. ಈ ವಾರದಲ್ಲೇ ಆಡಿಯೋ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿದೆ.

"ಶರಣ್ ಮತ್ತು ಚಿಕ್ಕಣ್ಣ ಜೋಡಿಯನ್ನು ಪ್ರೇಕ್ಷಕರು ಖುಷಿಯಿಂದ ನೋಡಿದಂತೆ, ಜೈ ಮಾರುತಿ ೮೦೦ ನಲ್ಲಿ ಶರಣ್ ಮತ್ತು ಅರುಣ್ ಜೋಡಿಯನ್ನು ಇಷ್ಟ ಪಡಲಿದ್ದಾರೆ. ಇಬ್ಬರೂ ಒಳ್ಳೆಯ ಹಾಸ್ಯ ಪ್ರವೃತ್ತಿಯವರು. ಶೃತಿ ಹರಿಹರನ್ ನಾಯಕ ನಟಿ ಮತ್ತು ಶುಭ ಪೂಂಜಾ ಕೂಡ ವಿಶೇಶ ಪಾತ್ರದಲ್ಲಿ ನಟಿಸಿರುವ್ದು ಈ ಸಿನೆಮಾದ ಮುಖ್ಯಾಂಶಗಳು" ಎನ್ನುತ್ತಾರೆ ನಿರ್ದೇಶಕ ಹರ್ಷ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT