ಸೂಪರ್ಸ್ಟಾರ್ ರಜನಿಕಾಂತ್ 
ಸಿನಿಮಾ ಸುದ್ದಿ

'ಲಿಂಗಾ' ಕಥೆ ನಕಲು ಆರೋಪದಲ್ಲಿ ಕೋರ್ಟ್ ಗೆ ಹಾಜರಾಗಲು ರಜನಿಗೆ ಸೂಚನೆ

ತಮಿಳು ಸಿನೆಮಾ 'ಲಿಂಗಾ' ವಿರುದ್ಧದ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗುವಂತೆ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಹೆಚ್ಚುವರಿ ಜಿಲ್ಲ ಮುನ್ಸಿಫ್ ನ್ಯಾಯಾಲಯ

ಮಧುರೈ: ತಮಿಳು ಸಿನೆಮಾ 'ಲಿಂಗಾ' ವಿರುದ್ಧದ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗುವಂತೆ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಹೆಚ್ಚುವರಿ ಜಿಲ್ಲ ಮುನ್ಸಿಫ್ ನ್ಯಾಯಾಲಯ ಆದೇಶಿಸಿದೆ.

'ಲಿಂಗಾ' ಸಿನೆಮಾದ ಸ್ಕ್ರಿಪ್ಟ್ ಕದ್ದಿರುವುದು ಎಂದು ಆರೋಪಿಸಿ ಮಧುರೈನ ಕೆ ಆರ್ ರವಿ ರಥಿನಂ ಎಂಬುವವರು ಮದ್ರಾಸ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ಹಿನ್ನಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಡಿಸೆಂಬರ್ ೧೪ ರಂದು ಕೋರ್ಟ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ೫ ಕೋಟಿ ಡಿಡಿ ಮತ್ತು ೫ ಕೋಟಿ ಬ್ಯಾಂಕ್ ಧೃಢೀಕರಣವನ್ನು ಕೋರ್ಟ್ ಗೆ ಸಲ್ಲಿಸುವಂತೆ ಆದೇಶ ನೀಡಿತ್ತು.

ಸಿನೆಮಾ ಬಿಡುಗಡೆ ಮಾಡಲು ಈ ನಿಯಮಗಳಿಗೆ ಒಪ್ಪಿದ್ದ ನಿರ್ಮಾಪಕ ವೆಂಕಟೇಶ್, ನಂತರ ಈ ಆದೇಶದ ವಿರುದ್ಧ ಮಾರ್ಚ್ ೨೦೧೫ ರಂದು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. ಆಗ ಸುಪ್ರೀಂ ಕೋರ್ಟ್ ಒಂದು ಕೋಟಿ ಬ್ಯಾಂಕ್ ಧೃಢೀಕರಣ ನೀಡುವಂತೆ ಸೂಚಿಸಿತ್ತು ಹಾಗೂ ಮಧುರೈನ ಜಿಲ್ಲ ಮುನ್ಸಿಫ್ ಕೋರ್ಟ್ ಗೆ ಈ ಪ್ರಕರಣವನ್ನು ಆರು ತಿಂಗಳೊಳಗೆ ಇತ್ಯರ್ಥ ಮಾಡುವಂತೆ ಸೂಚಿಸಿತ್ತು.

ಆದರೆ ಮುನ್ಸಿಫ್ ಕೋರ್ಟ್ ಈ ಸಮಯವನ್ನು ಮೀರಿದ್ದರಿಂದ ಮತ್ತೆ ಹೈಕೋರ್ಟ್ ಗೆ ವೆಂಕಟೇಶ್ ಅರ್ಜಿ ಸಲ್ಲಿಸಿದ್ದರು. ಆಗ ಏಪ್ರಿಲ್ ೩೦ರೊಳಗೆ ಈ ಪ್ರಕರಣ ಇತ್ಯರ್ಥ ಮಾಡುವಂತೆ ಮಧುರೈ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿತ್ತು. ಆದುದರಿಂದ ರಜನಿಕಾಂತ್ ಮತ್ತು ನಿರ್ದೇಶಕ ಕೆ ಎಸ್ ರವಿಕುಮಾರ್ ಸೇರಿದಂತೆ ಎರಡು ಪಕ್ಷಗಳ ಕಕ್ಷಿದಾರರು ಮಾರ್ಚ್ ೮ ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

HAL ಗೇ ಠಕ್ಕರ್, ಟಾಟಾ-Airbus ನಿಂದ ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ನಿರ್ಮಾಣ!

RSS @100: ಪ್ರಚಾರಕರಾಗಿ ಸಂಘ ಸೇರಿದ ಕೇರಳದ ಮಾಜಿ ಪೊಲೀಸ್ ಮುಖ್ಯಸ್ಥ Jacob Thomas

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

SCROLL FOR NEXT