ಸಿನಿಮಾ ಸುದ್ದಿ

ವಿಕ್ರಮ್ ಗೆ ರಾಷ್ಟ್ರಪ್ರಶಸ್ತಿ ಇಲ್ಲ; ಪಿ ಸಿ ಶ್ರೀರಾಮ್ ಗೆ ಅಸಮಧಾನ

Guruprasad Narayana

ಬೆಂಗಳೂರು: ೬೩ನೇ ರಾಷ್ಟ್ರಪ್ರಶಸ್ತಿಗಳು ಘೋಷಣೆಯಾದ ಮೇಲೆ ಪ್ರಶಸ್ತಿ ವಿಜೇತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದರೆ, ಕೆಲವು ಕಲಾವಿದರ ಶ್ರಮಕ್ಕೆ ಮನ್ನಣೆ ದೊರೆತಿಲ್ಲ ಎಂದು ಇನ್ನೂ ಹಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶಂಕರ್ ನಿರ್ದೇಶನದ 'ಐ' ನಟನೆಗಾಗಿ ನಟ ವಿಕ್ರಮ್ ಪ್ರಶಸ್ತಿ ಗಳಿಸುತ್ತಾರೆಂದೇ ಅವರ ಅಭಿಮಾನಿಗಳು ನಂಬಿದ್ದರು. ಆದರೆ ಅವರಿಗೆ ಪ್ರಶಸ್ತಿ ದಕ್ಕದೇ ಹೋಗಿರುವುದರಿಂದ ಹಲವಾರು ಜನ ನಿರಾಶರಾಗಿದ್ದಾರೆ. ಅವರಲ್ಲಿ ಖ್ಯಾತ ಸಿನೆಮ್ಯಾಟೋಗ್ರಾಫರ್ ಪಿ ಸಿ ಶ್ರೀರಾಮ್ ಕೂಡ ಒಬ್ಬರು.

ಟ್ವಿಟ್ಟರ್ ಮೊರೆ ಹೋಗಿರುವ ಶ್ರೀರಾಮ್ "ಈ ವರ್ಷ ರಾಷ್ಟ್ರಪ್ರಶಸ್ತಿ ಗೆದ್ದ ಎಲ್ಲರಿಗೂ ಅಭಿನಂದನೆಗಳು. ನಿಮ್ಮಲ್ಲರ ಮೇಲೆ ಹೆಮ್ಮೆಯಿದೆ. ಆದರೆ ವಿಕ್ರಮ್ ಗೆ ರಾಷ್ಟ್ರ ಪ್ರಶಸ್ತಿ ಬಂದಿಲ್ಲ. ಕೆಲವು ಬಾರಿ ರಾಷ್ಟ್ರ ಪ್ರಶಸ್ತಿ ಮುಖ್ಯಾಂಶಗಳನ್ನೇ ಮರೆತುಬಿಡುತ್ತದೆ. ಇದು ವಿಕ್ರಮ್ ಅವರಿಗೆ ಆದ ನಷ್ಟವಲ್ಲ, ರಾಷ್ಟ್ರ ಪ್ರಶಸ್ತಿಗಳಿಗೆ ಆದ ನಷ್ಟ" ಎಂದು ಬರೆದಿದ್ದಾರೆ.

SCROLL FOR NEXT