ಪೂಜಾ ಗಾಂಧಿ 
ಸಿನಿಮಾ ಸುದ್ದಿ

ಕೋರ್ಟ್ ಆದೇಶ ಇರಲಿ ಬಿಡಲಿ, ಚಿತ್ರೀಕರಣ ಮುಂದುವರಿಯುತ್ತದೆ: ಶ್ರೀನಿವಾಸ ರಾಜು

ಶ್ರೀನಿವಾಸ್ ರಾಜು ಅವರ ನಿರ್ದೇಶನದ ಪಯಣದಲ್ಲಿ ವಿವಾದಗಳು ಹೊಸದೇನಲ್ಲ. ಸದ್ಯಕ್ಕೆ ಅವರ ನಿರ್ದೇಶನದ 'ದಂಡುಪಾಳ್ಯ-೨' ಸಿನೆಮಾದ ಚಿತ್ರೀಕರಣಕ್ಕೆ ನಗರ ಸಿವಿಲ್ ನ್ಯಾಯಾಲಯ

ಬೆಂಗಳೂರು: ಶ್ರೀನಿವಾಸ್ ರಾಜು ಅವರ ನಿರ್ದೇಶನದ ಪಯಣದಲ್ಲಿ ವಿವಾದಗಳು ಹೊಸದೇನಲ್ಲ. ಸದ್ಯಕ್ಕೆ ಅವರ ನಿರ್ದೇಶನದ 'ದಂಡುಪಾಳ್ಯ-೨' ಸಿನೆಮಾದ ಚಿತ್ರೀಕರಣಕ್ಕೆ ನಗರ ಸಿವಿಲ್ ನ್ಯಾಯಾಲಯ ತಡೆ ನೀಡಿದ್ದರು, ಚಿತ್ರೀಕರಣ ಮುಂದುವರೆಸುವುದಾಗಿ ರಾಜು ತಿಳಿಸಿದ್ದಾರೆ.

ಮೂರನೇ ಹಂತದ ಚಿತ್ರೀಕರಣ ಮೇ ೯ ರಿಂದ ಪ್ರಾರಂಭವಾಗಲಿದೆಯಂತೆ. "ಜನ ನನ್ನನ್ನು ಸುಲಭವಾಗಿ ಪರಿಗಣಿಸಿದ್ದಾರೆ ಆದರೆ ಅದರ ಹೊರತಾಗಿಯೂ ಕೆಲಸ ಮಾಡುವುದು ನನಗೆ ಗೊತ್ತು" ಎನ್ನುವ ಅವರು "ಆದರೆ ಚಿತ್ರೀಕರಣ ನಡೆಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಕಾನೂನು ವಿಷಯಗಳನ್ನು ನನ್ನ ವಕೀಲ ನೋಡಿಕೊಳ್ಳುತ್ತಾರೆ. ಸೃಜನಶೀಲ ಕೆಲಸ ಮಾಡಲಷ್ಟೇ ನನಗೆ ಶಕ್ತಿ ಇರುವುದು" ಎನ್ನುತ್ತಾರೆ ರಾಜು.

ಈಗ ಬದುಕಿರುವ ಆರು ಜನ ದಂಡುಪಾಳ್ಯ ಗ್ಯಾಂಗ್ ನವರು ಇನ್ನೂ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸಿನೆಮಾ ಚಿತ್ರೀಕರಣಕ್ಕೆ ತಡೆ ನಿಡುವಂತೆ ಕೋರ್ಟ್ ಗೆ ಕೋರಿದ್ದರು. "ನಾನು ಅವರ ಒಪ್ಪಿಗೆ ಇಲ್ಲದೆ ಸಿನೆಮಾ ಮಾಡುತ್ತಿದ್ದೇನೆ ಮತ್ತು ಅವರನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುತ್ತಿದ್ದೇನೆ ಆದುದರಿಂದ ಅವರ ಪ್ರಕರಣಕ್ಕೆ ಹಿನ್ನಡೆಯಾಗುತ್ತದೆ ಎಂಬುದು ಅವರ ವಾದ" ಎನ್ನುವ ನಿರ್ದೇಶಕ "ಈ ಆರೋಪಗಳಲ್ಲಿ ಹುರುಳಿಲ್ಲ ಎನ್ನುತ್ತಾರೆ. ನನ್ನ ಸಿನೆಮಾದ ವಿಷಯವಾಗಲಿ ಪಾತ್ರಗಳಾಗಲೀ ಅವರಿಗೆ ತಿಳಿದಿಲ್ಲ. ದಂಡುಪಾಳ್ಯ ಎಂದು ಹೆಸರಿಟ್ಟಾಕ್ಷಣ ಈ ಸಿನೆಮಾ ಸಂಪೂರ್ಣ ಅವರ ಬಗ್ಗೆ ಎಂದು ತಿಳಿಯುವುದು ತಪ್ಪು" ಎನ್ನುತ್ತಾರೆ ನಿರ್ದೇಶಕ.

ಈ ಚಿತ್ರದಲ್ಲಿ ಪೂಜಾ ಗಾಂಧಿ, ಶೃತಿ, ಮಾರ್ಕಂಡ ದೇಶಪಾಂಡೆ, ಕರಿ ಸುಬ್ಬು ಮತ್ತು ರವಿ ಕಾಳೆ ನಟಿಸುತ್ತಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT