'ಜಾನ್ ಜಾನಿ ಜನಾರ್ಧನ' ದಲ್ಲಿ ಕೃಷ್ಣ, ಅಜಯ್ ರಾವ್ ಮತ್ತು ಯೋಗಿ 
ಸಿನಿಮಾ ಸುದ್ದಿ

ಕನ್ನಡ ಕಲೀರಿ ಎಂದ 'ಜಾನ್ ಜಾನಿ ಜನಾರ್ಧನ'

ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ 'ಜಾನ್ ಜಾನಿ ಜನಾರ್ಧನ' ಸಿನೆಮಾದಲ್ಲಿ 'ಕನ್ನಡ ಕಲೀರಿ' ಎಂಬ ವಿಶೇಷವಾದ ರ್ಯಾಪ್ ಹಾಡನ್ನು ಸೇರಿಸಲಾಗಿದೆ.

ಬೆಂಗಳೂರು: ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ 'ಜಾನ್ ಜಾನಿ ಜನಾರ್ಧನ' ಸಿನೆಮಾದಲ್ಲಿ 'ಕನ್ನಡ ಕಲೀರಿ' ಎಂಬ ವಿಶೇಷವಾದ ರ್ಯಾಪ್ ಹಾಡನ್ನು ಸೇರಿಸಲಾಗಿದೆ.

ಚಂದನ್ ಶೆಟ್ಟಿ ಸಾಹಿತ್ಯ ರಚನೆ ಮಾಡಿ, ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿದ ಮೊದಲ ಸಾಲು ಹೀಗಿದೆ. "ಅ ಆ ಇ ಈ ಉ ಊ.. ಸುಮ್ನೆ ಕನ್ನಡ ಮಾತಾಡು ಮಂಕೆ". ಈ ರ್ಯಾಪ್ ಹಾಡಿನಲ್ಲಿ ಕೃಷ್ಣ, ಅಜಯ್ ರಾವ್ ಮತ್ತು ಯೋಗಿ ಕಾಣಿಸಿಕೊಂಡಿದ್ದರೆ.

ಯುವಕರಿಗೆ ಕನ್ನಡ ಕಲಿಯುವಂತೆ ಪ್ರೇರೇಪಿಸುವ ಮತ್ತೊಂದು ಪ್ರಯತ್ನ ಇದು ಎನ್ನುವ ಸಂಗೀತ ನಿರ್ದೇಶಕ "ಇಂದು ಯುವಕರು ಕನ್ನಡ ಮಾತನಾಡುವುದೇ ಕಡಿಮೆ ಬದಲಿಗೆ ಇಂಗ್ಲಿಶ್ ಮೊರೆ ಹೋಗುತ್ತಾರೆ. ಹಳೆ ರೀತಿಯಲ್ಲಿ ಹೇಳಿದರೆ ಅವರಿಗೆ ಗೊತಾಗುವುದಿಲ್ಲ. ಆದುದರಿಂದ ಅವರ ಮಾರ್ಗದಲ್ಲೇ ಹೇಳಬೇಕಾಯಿತು" ಎನ್ನುತ್ತಾರೆ ಅರ್ಜುನ್ ಜನ್ಯ.

ಗೀತ ರಚನೆ ಮಾಡಿರುವ ಚಂದನ್ ಶೆಟ್ಟಿ ಹೇಳುವಂತೆ "ಈ ಹಾಡಿನ ಅವಶ್ಯಕತೆ ಇರುವ ಸನ್ನಿವೇಶವೊಂದು ಸಿನೆಮಾದಲ್ಲಿದೆ. ಇದು ಎರಡು ಗುಂಪುಗಳ ನಡುವಿನ ಗಲಾಟೆಯ ಸನ್ನಿವೇಶ. ಆದುದರಿಂದ ರ್ಯಾಪ್ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎನ್ನಿಸಿತು" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್