'ಜಾನ್ ಜಾನಿ ಜನಾರ್ಧನ' ದಲ್ಲಿ ಕೃಷ್ಣ, ಅಜಯ್ ರಾವ್ ಮತ್ತು ಯೋಗಿ 
ಸಿನಿಮಾ ಸುದ್ದಿ

ಕನ್ನಡ ಕಲೀರಿ ಎಂದ 'ಜಾನ್ ಜಾನಿ ಜನಾರ್ಧನ'

ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ 'ಜಾನ್ ಜಾನಿ ಜನಾರ್ಧನ' ಸಿನೆಮಾದಲ್ಲಿ 'ಕನ್ನಡ ಕಲೀರಿ' ಎಂಬ ವಿಶೇಷವಾದ ರ್ಯಾಪ್ ಹಾಡನ್ನು ಸೇರಿಸಲಾಗಿದೆ.

ಬೆಂಗಳೂರು: ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ 'ಜಾನ್ ಜಾನಿ ಜನಾರ್ಧನ' ಸಿನೆಮಾದಲ್ಲಿ 'ಕನ್ನಡ ಕಲೀರಿ' ಎಂಬ ವಿಶೇಷವಾದ ರ್ಯಾಪ್ ಹಾಡನ್ನು ಸೇರಿಸಲಾಗಿದೆ.

ಚಂದನ್ ಶೆಟ್ಟಿ ಸಾಹಿತ್ಯ ರಚನೆ ಮಾಡಿ, ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿದ ಮೊದಲ ಸಾಲು ಹೀಗಿದೆ. "ಅ ಆ ಇ ಈ ಉ ಊ.. ಸುಮ್ನೆ ಕನ್ನಡ ಮಾತಾಡು ಮಂಕೆ". ಈ ರ್ಯಾಪ್ ಹಾಡಿನಲ್ಲಿ ಕೃಷ್ಣ, ಅಜಯ್ ರಾವ್ ಮತ್ತು ಯೋಗಿ ಕಾಣಿಸಿಕೊಂಡಿದ್ದರೆ.

ಯುವಕರಿಗೆ ಕನ್ನಡ ಕಲಿಯುವಂತೆ ಪ್ರೇರೇಪಿಸುವ ಮತ್ತೊಂದು ಪ್ರಯತ್ನ ಇದು ಎನ್ನುವ ಸಂಗೀತ ನಿರ್ದೇಶಕ "ಇಂದು ಯುವಕರು ಕನ್ನಡ ಮಾತನಾಡುವುದೇ ಕಡಿಮೆ ಬದಲಿಗೆ ಇಂಗ್ಲಿಶ್ ಮೊರೆ ಹೋಗುತ್ತಾರೆ. ಹಳೆ ರೀತಿಯಲ್ಲಿ ಹೇಳಿದರೆ ಅವರಿಗೆ ಗೊತಾಗುವುದಿಲ್ಲ. ಆದುದರಿಂದ ಅವರ ಮಾರ್ಗದಲ್ಲೇ ಹೇಳಬೇಕಾಯಿತು" ಎನ್ನುತ್ತಾರೆ ಅರ್ಜುನ್ ಜನ್ಯ.

ಗೀತ ರಚನೆ ಮಾಡಿರುವ ಚಂದನ್ ಶೆಟ್ಟಿ ಹೇಳುವಂತೆ "ಈ ಹಾಡಿನ ಅವಶ್ಯಕತೆ ಇರುವ ಸನ್ನಿವೇಶವೊಂದು ಸಿನೆಮಾದಲ್ಲಿದೆ. ಇದು ಎರಡು ಗುಂಪುಗಳ ನಡುವಿನ ಗಲಾಟೆಯ ಸನ್ನಿವೇಶ. ಆದುದರಿಂದ ರ್ಯಾಪ್ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎನ್ನಿಸಿತು" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ಗುಜರಾತ್‌ನಲ್ಲಿ ಎಎಪಿ ರೈತರ ರ್ಯಾಲಿಯಲ್ಲಿ ಹಿಂಸಾಚಾರ; ಕಲ್ಲು ತೂರಿದ ರೈತರು, 3 ಪೊಲೀಸರಿಗೆ ಗಾಯ

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

SCROLL FOR NEXT