'ಜಾನ್ ಜಾನಿ ಜನಾರ್ಧನ' ದಲ್ಲಿ ಕೃಷ್ಣ, ಅಜಯ್ ರಾವ್ ಮತ್ತು ಯೋಗಿ 
ಸಿನಿಮಾ ಸುದ್ದಿ

ಕನ್ನಡ ಕಲೀರಿ ಎಂದ 'ಜಾನ್ ಜಾನಿ ಜನಾರ್ಧನ'

ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ 'ಜಾನ್ ಜಾನಿ ಜನಾರ್ಧನ' ಸಿನೆಮಾದಲ್ಲಿ 'ಕನ್ನಡ ಕಲೀರಿ' ಎಂಬ ವಿಶೇಷವಾದ ರ್ಯಾಪ್ ಹಾಡನ್ನು ಸೇರಿಸಲಾಗಿದೆ.

ಬೆಂಗಳೂರು: ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ 'ಜಾನ್ ಜಾನಿ ಜನಾರ್ಧನ' ಸಿನೆಮಾದಲ್ಲಿ 'ಕನ್ನಡ ಕಲೀರಿ' ಎಂಬ ವಿಶೇಷವಾದ ರ್ಯಾಪ್ ಹಾಡನ್ನು ಸೇರಿಸಲಾಗಿದೆ.

ಚಂದನ್ ಶೆಟ್ಟಿ ಸಾಹಿತ್ಯ ರಚನೆ ಮಾಡಿ, ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿದ ಮೊದಲ ಸಾಲು ಹೀಗಿದೆ. "ಅ ಆ ಇ ಈ ಉ ಊ.. ಸುಮ್ನೆ ಕನ್ನಡ ಮಾತಾಡು ಮಂಕೆ". ಈ ರ್ಯಾಪ್ ಹಾಡಿನಲ್ಲಿ ಕೃಷ್ಣ, ಅಜಯ್ ರಾವ್ ಮತ್ತು ಯೋಗಿ ಕಾಣಿಸಿಕೊಂಡಿದ್ದರೆ.

ಯುವಕರಿಗೆ ಕನ್ನಡ ಕಲಿಯುವಂತೆ ಪ್ರೇರೇಪಿಸುವ ಮತ್ತೊಂದು ಪ್ರಯತ್ನ ಇದು ಎನ್ನುವ ಸಂಗೀತ ನಿರ್ದೇಶಕ "ಇಂದು ಯುವಕರು ಕನ್ನಡ ಮಾತನಾಡುವುದೇ ಕಡಿಮೆ ಬದಲಿಗೆ ಇಂಗ್ಲಿಶ್ ಮೊರೆ ಹೋಗುತ್ತಾರೆ. ಹಳೆ ರೀತಿಯಲ್ಲಿ ಹೇಳಿದರೆ ಅವರಿಗೆ ಗೊತಾಗುವುದಿಲ್ಲ. ಆದುದರಿಂದ ಅವರ ಮಾರ್ಗದಲ್ಲೇ ಹೇಳಬೇಕಾಯಿತು" ಎನ್ನುತ್ತಾರೆ ಅರ್ಜುನ್ ಜನ್ಯ.

ಗೀತ ರಚನೆ ಮಾಡಿರುವ ಚಂದನ್ ಶೆಟ್ಟಿ ಹೇಳುವಂತೆ "ಈ ಹಾಡಿನ ಅವಶ್ಯಕತೆ ಇರುವ ಸನ್ನಿವೇಶವೊಂದು ಸಿನೆಮಾದಲ್ಲಿದೆ. ಇದು ಎರಡು ಗುಂಪುಗಳ ನಡುವಿನ ಗಲಾಟೆಯ ಸನ್ನಿವೇಶ. ಆದುದರಿಂದ ರ್ಯಾಪ್ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎನ್ನಿಸಿತು" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT