'ಸೈರಾಟ್' ಸಿನೆಮಾದಲ್ಲಿ ಆಕಾಶ್ ತೋಶರ್ ಮತ್ತು ರಿಂಕು ರಾಜಗುರು 
ಸಿನಿಮಾ ಸುದ್ದಿ

ಗಳಿಕೆಯ ಮುಂಚೂಣಿಯಲ್ಲಿ 'ಸೈರಾಟ್'; ಮರಾಠಿ ಚಿತ್ರರಂಗಕ್ಕೆ ಗರಿ

ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿರುವ ಮರಾಠಿ ಸಿನೆಮಾ 'ಸೈರಾಟ್' ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವುದು ವಿಶೇಷ!

ಮುಂಬೈ: ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿರುವ ಮರಾಠಿ ಸಿನೆಮಾ 'ಸೈರಾಟ್' ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವುದು ವಿಶೇಷ!

ನಾಗರಾಜ್ ಮಂಜುಳೆ ಅವರ ರೋಮ್ಯಾಂಟಿಕ್ ಚಿತ್ರ ಬಿಡುಗಡೆಯಾದ ಮೂರು ವಾರಗಳಲ್ಲಿ ೬೫ ಕೋಟಿ ಗಳಿಕೆ ಕಂಡಿದೆ. ಸುಮಾರು ೪ ಕೋಟಿ ಖರ್ಚಿನಲ್ಲಿ ಸಿದ್ಧವಾಗಿರುವ ಈ ಸಿನೆಮಾ ಮರಾಠಿ ಚಿತ್ರರಂಗದಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿರುವುದಲ್ಲದೆ, ಬಾಲಿವುಡ್ ಸಿನೆಮಾರಂಗಕ್ಕೂ ಶಾಕ್ ನೀಡಿದೆ.

ಯಾವುದೇ ದೊಡ್ಡ ಮಟ್ಟದ ಸ್ಟಾರ್ ನಟರಿಲ್ಲದೆ ಇದನ್ನು ಸಾಧ್ಯವಾಗಿಸಿರುವುದು ನಿರ್ದೇಶಕ ನಾಗರಾಜ್ ಅವರ ವಿಶೇಷ. ಜಾತಿ ವೈಷಮ್ಯದ ನಡುವೆ ಪ್ರೀತಿಯ ಕಥೆ ಕಟ್ಟಿಕೊಟ್ಟಿರುವ 'ಸೈರಾಟ್' ಮಹಾರಾಷ್ಟದ ಹೊರಗೂ ಭರದ ಪ್ರದರ್ಶನ ಕಾಣುತ್ತಿದೆ.

ಹೊಸಬರಾದ ರಿಂಕು ರಾಜಗುರು ಮತ್ತು ಆಕಾಶ್ ತೋಶರ್ ಸಿನೆಮಾದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತಿಚೆಗಷ್ಟೇ ಅಪಾರ ಲಾಭ ಗಳಿಸಿದ್ದಕ್ಕಾಗಿ ಸಿನೆಮಾದ ನಿರ್ಮಾಪಕರು ಈ ನಟರಿಗೆ ಹೆಚ್ಚುವರಿ ೫ ಕೋಟಿ ಸಂಭಾವನೆ ನೀಡುವುದಾಗಿ ಘೋಷಿಸಿದ್ದರು.

ನಾನಾ ಪಾಟೇಕರ್ ನಟನೆಯ 'ನಟಸಾಮ್ರಾಟ್' ನಂತರ ಮರಾಠಿ ಚಿತ್ರರಂಗಕ್ಕೆ ಇದು ಎರಡನೆ ಬ್ಲಾಕ್ ಬಸ್ಟರ್ ಸಿನೆಮಾ. 'ನಟಸಾಮ್ರಾಟ್'  ಕೂಡ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದು ಬಾಕ್ಸ್ ಆಫೀಸ್ ನಲ್ಲಿ ೪೮ ಕೋಟಿ ಗಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT