ಕಲ್ಪನಾ-೨ ಸಿನೆಮಾದಲ್ಲಿ ಉಪೇಂದ್ರ 
ಸಿನಿಮಾ ಸುದ್ದಿ

ಕನ್ನಡ ದೇಶಭಕ್ತ ಹಾಡಿಗೆ ಹೆಜ್ಜೆ ಹಾಕಿದ ಉಪೇಂದ್ರ; ಜೂನ್ ೯ಕ್ಕೆ ಕಲ್ಪನಾ-೨ ಆಡಿಯೋ ಬಿಡುಗಡೆ

ಹಿಮ್ಮಡಿ ಉಳುಕಿಸಿಕೊಂಡು ಗಾಯಗೊಂಡಿದ್ದ ನಟ ಉಪೇಂದ್ರ ಗುಣಮುಖರಾಗಿ ತಮ್ಮ ಮುಂದಿನ ಚಿತ್ರ ಕಲ್ಪನಾ-೨ ಸಿನೆಮಾದ ಪರಿಚಯ ಹಾಡನ್ನು ಸಂಪೂರ್ಣಗೊಳಿಸಿದ್ದಾರೆ.

ಬೆಂಗಳೂರು: ಹಿಮ್ಮಡಿ ಉಳುಕಿಸಿಕೊಂಡು ಗಾಯಗೊಂಡಿದ್ದ ನಟ ಉಪೇಂದ್ರ ಗುಣಮುಖರಾಗಿ ತಮ್ಮ ಮುಂದಿನ ಚಿತ್ರ ಕಲ್ಪನಾ-೨ ಸಿನೆಮಾದ ಪರಿಚಯ ಹಾಡನ್ನು ಸಂಪೂರ್ಣಗೊಳಿಸಿದ್ದಾರೆ.

ಕನ್ನಡ ಮತ್ತು ಕರ್ನಾಟಕದ ಬಗೆಗಿನ ಈ ದೇಶಭಕ್ತ ಹಾಡು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಕಲೈಮಾಸ್ಟರ್ ಇದಕ್ಕೆ ನೃತ್ಯನಿರ್ದೆಶನ ಮಾಡಿದ್ದು, ೧೦೦ ಹೆಚ್ಚು ಸಹ ನೃತ್ಯಕಾರರು ಮತ್ತು ೧೫೦ಕ್ಕೂ ಹೆಚ್ಚು ಕಿರಿಯ ನಟರು ಭಾಗವಹಿಸಿದ್ದಾರೆ.

"ಪುನೀತ್ ರಾಜಕುಮಾರ್ ಹಾಡಿರುವ ದೇಶಭಕ್ತ ಕನ್ನಡ ಹಾಡಿನ ಚಿತ್ರೀಕರಣಕ್ಕೆ ೪ ದಿನ ತೆಗೆದುಕೊಂಡೆವು. ಉಪೇಂದ್ರ ಅವರ ಕಾಲಿಗೆ ಗಾಯವಾಗಿದ್ದರಿಂದ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಅವರು ಮೇ೨೯ ರಂದು ಮತ್ತೆ ಚಿತ್ರತಂಡ ಸೇರಿದ್ದು, ಈ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ" ಎನ್ನುತ್ತಾರೆ ನಿರ್ದೇಶಕ ಅನಂತ ರಾಜು.

ನಟಿ ಅವಂತಿಕಾ ಶೆಟ್ಟಿ ಅವರೊಂದಿಗೆ ಡ್ಯುಯೆಟ್ ಹಾಡಿನ ಚಿತ್ರೀಕರಣಕ್ಕೆ ತಂಡ ಇಂದು ಗೋವಾಗೆ ತೆರಳಲಿದೆ. ಚಿತ್ರೀಕರಣದ ನಂತರದ ಕಾರ್ಯಗಳು ಸುಮಾರು ೯೦ ಪ್ರತಿಶತ ಮುಗಿದಿದ್ದು, ಮೊದಲ ಪ್ರತಿಗೂ ಮುಂಚಿತವಾಗಿ ಈ ಎರಡು ಹಾಡುಗಳನ್ನು ಸೇರಿಸುವ ಕೆಲಸ ಬಾಕಿಯಿದೆ ಎನ್ನುತ್ತಾರೆ ನಿರ್ದೇಶಕ.

ಜೂನ್ ೯ಕ್ಕೆ ಕಲ್ಪನಾ-೨ ಸಿನೆಮಾದ ಆಡಿಯೋ ಬಿಡುಗಡೆ ನಡೆಯಲಿದ್ದು ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಪ್ರಿಯಾಮಣಿ ಕೂಡ ಈ ಸಿನೆಮಾದ ನಾಯಕನಟಿಯಾಗಿ ಕೆಲಸ ಮಾಡಿದ್ದಾರೆ.

ಈಮಧ್ಯ ಉಪೇಂದ್ರ ಅವರು ತಮ್ಮ ಮತ್ತೊಂದು ಸಿನೆಮಾ 'ಮುಕುಂದ ಮುರಾರಿ' ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಇನ್ನೊಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಅದು ನಟ ಸುದೀಪ್ ಅವರೊಂದಿಗೆ ನಡೆಯಲಿದೆಯಂತೆ.

ಇವುಗಳ ಜೊತೆಜೊತೆಗೇ ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿರುವ 'ಉಪೇಂದ್ರ ಮತ್ತೆ ಹುಟ್ಟು ಬಾ, ಇಂತಿ ಪ್ರೇಮ' ಸಿನೆಮಾಗೆ ಉಪೇಂದ್ರ ಅಣಿಯಾಗುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT