'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಅನಂತ ನಾಗ್ ಮತ್ತು ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾವನ್ನು ತಮ್ಮ ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ

'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ, 'ವಾಸ್ತು ಪ್ರಕಾರ', 'ರಿಕ್ಕಿ' ಸಿನೆಮಾಗಳ ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ರಕ್ಷಿತ್ ಶೆಟ್ಟಿ ಮತ್ತೊಂದು ಮಹತ್ವದ ಬಿಡುಗಡೆಯ

ಬೆಂಗಳೂರು: 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ, 'ವಾಸ್ತು ಪ್ರಕಾರ', 'ರಿಕ್ಕಿ' ಸಿನೆಮಾಗಳ ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ರಕ್ಷಿತ್ ಶೆಟ್ಟಿ ಮತ್ತೊಂದು ಮಹತ್ವದ ಬಿಡುಗಡೆಯ ಕಾತರದಲ್ಲಿದ್ದಾರೆ.

ಒಳ್ಳೆಯ ಸ್ಕ್ರಿಪ್ಟ್ ಗಳ ಆಯ್ಕೆಯಲ್ಲಿ ಎಂದಿಗೂ ಎಚ್ಚರದಿಂದಿರುವ ನಟ ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ನಟಿಸಿರುವುದಕ್ಕೆ ಥ್ರಿಲ್ ಆಗಿದ್ದಾರೆ.

ಈ ಸಿನೆಮಾ ಪ್ರೇಕ್ಷಕರ ಇಡೀ ಕುಟುಂಬವನ್ನು ಸಿನೆಮಾ ಮಂದಿರಕ್ಕೆ ಎಳೆದು ತರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ರಕ್ಷಿತ್ "ನನಗೆ ಹೊಸ ಪ್ರೇಕ್ಷಕರನ್ನು ಸೃಷ್ಟಿಸಲು ಇಷ್ಟ. ಪ್ರತಿ ಸಿನೆಮಾದೊಂದಿಗೆ ಕನ್ನಡ ಸಿನೆಮಾಗಳನ್ನು ನೋಡಬಿಟ್ಟಿರುವ ಪ್ರೇಕ್ಷಕನನ್ನು ಮತ್ತೆ ಕರೆತರಲು ಬಯಸುತ್ತೇನೆ. 'ಗೋಧಿ ಬಣ್ಣ...' ಕೂಡ ಅಂತಹ ಒಂದು ಸಿನೆಮಾ, ಏಕೆಂದರೆ ಇದು ಕೌಟುಂಬಿಕ ಸಂಬಂಧಗಳ ಬಗ್ಗೆ ಮಾತನಾಡುತ್ತದೆ. ಕಮರ್ಷಿಯಲ್ ಸಿನೆಮಾಗಳಿಂದ ಹೊಸ ಪೀಳೆಗೆಯ ಸಿನೆಮಾಗಳನ್ನು ಪ್ರಯತ್ನಿಸಿರುವ ನನ್ನನ್ನು ಈ ಹೊಸ ಪ್ರಯತ್ನ ಭಾಗವಾಗಿರುವುದಕ್ಕೂ ಜನ ಒಪ್ಪಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ" ಎನ್ನುತ್ತಾರೆ ನಟ.

ಆಲ್ಜೈಮರ್ ಖಾಯಿಲೆಯಿರುವ ಅನಂತನಾಗ್ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ "ಸಾಮಾನ್ಯವಾಗಿ ತಮ್ಮ ತಾಯಂದಿರೊಂದಿಗೆ ಗಂಡುಮಕ್ಕಳು ಮುಕ್ತ ಭಾವನೆಗಳೊಂಗಿದೆ ವ್ಯವಹರಿಸುತ್ತಾರೆ. ನನ್ನ ವಿಷಯದಲ್ಲೂ ಹಾಗೆಯೇ. ನನ್ನ ತಂದೆಯನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವುದೇ ಇಲ್ಲ" ಎನ್ನುವ ರಕ್ಷಿತ್ ಈ ಸಿನೆಮಾವನ್ನು ಅವರ ತಂದೆಗೆ ಅರ್ಪಿಸುತ್ತಿರುವುದಾಗಿ ತಿಳಿಸುತ್ತಾರೆ. "ಅವರಿಗೆ ನೇರವಾಗಿ ಹೇಳಲು ಸಾಧ್ಯವಿಲ್ಲದೇ ಹೋದರೂ ಈ ಚಿತ್ರದ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಲಿದ್ದೇನೆ" ಎನ್ನುತ್ತಾರೆ.

ತಮ್ಮ ವೃತ್ತಿಜೀವನ ರೂಪುಗೊಳ್ಳುತ್ತಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸುವ ರಕ್ಷಿತ್ "೨೦ ವರ್ಷದ ನಂತರ ಹಿಂತಿರುಗಿ ನೋಡಿದಾಗ, ನನ್ನ ಕೆಲಸದ ಬಗ್ಗೆ ಹೆಮ್ಮೆಯಿರಬೇಕು" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?