ಕಂಗನಾ ರಣಾವತ್ 
ಸಿನಿಮಾ ಸುದ್ದಿ

ಕನ್ನಡದ ತಿಥಿ ಸಿನಿಮಾ ವೀಕ್ಷಿಸಿದ ಕಂಗನಾ

ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ರಾಮರೆಡ್ಡಿ ನಿರ್ದೇಶನದ ಕನ್ನಡದ ತಿಥಿ ಸಿನಿಮಾವನ್ನು ಬಾಲಿವುಡ್ ನ...

ಮುಂಬೈ: ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ರಾಮರೆಡ್ಡಿ ನಿರ್ದೇಶನದ ಕನ್ನಡದ ತಿಥಿ ಸಿನಿಮಾವನ್ನು ಬಾಲಿವುಡ್ ನ ಕಂಗನಾ ರಣಾವತ್ ಹಾಗೂ ಅನುರಾಗ್ ಕಶ್ಯಪ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ. 
ಮುಂಬೈನಲ್ಲಿ ತಿಥಿ ಸಿನಿಮಾವನ್ನು ಮೇ 30ರಂದು ವಿಶೇಷವಾಗಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಬಾಲಿವುಡ್ ನ ಹಲವು ಮಂದಿ ಚಿತ್ರಮಂದಿರಕ್ಕೆ ತೆರಳಿ ತಿಥಿ ಸಿನಿಮಾವನ್ನು ವೀಕ್ಷಿಸಿದ್ದಾರೆ. 
ಚಿತ್ರ ವೀಕ್ಷಿಸಿದ ಬಾಲಿವುಡ್ ಕಲಾವಿದರು ಮತ್ತು ತಂತ್ರಜ್ಞರು ಟ್ವೀಟ್ ಗಳ ಮೂಲಕ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ತಿಥಿ ಸಿನಿಮಮಾದ ಬಗ್ಗೆ ಕಂಗನಾ 'ಈವರೆಗೆ ಬೆಳ್ಳಿತೆರೆಯ ಮೇಲೆ ಇಂತಹದೊಂದು ಪ್ರಯೋಗ ನೋಡಿರಲಿಲ್ಲ. ಈ ಸಿನಿಮಾದ ಪಾತ್ರಗಳು ಬಹುಕಾಲ ನನ್ನ ಮನಸ್ಸಿನಲ್ಲುಳಿಯುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ. 
ನಿನ್ನೆಯಷ್ಟೇ ಮುಂಬೈನ ಚಿತ್ರಮಂದಿರದಲ್ಲಿ ತಿಥಿ ಸಿನಿಮಾ ವೀಕ್ಷಿಸಿದ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್, ತಿಥಿ ಒಂದು ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದು, ನೋಡಲೇಬೇಕಾದಂತ ಚಿತ್ರ ಎಂದು ಶ್ಲಾಘಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT