ಸುಂದರಾಂಗ ಜಾಣ ಸಿನೆಮಾದಲ್ಲಿ ಗಣೇಶ್ ಮತ್ತು ಶಾನ್ವಿ ಶ್ರೀವಾಸ್ತವ
ಬೆಂಗಳೂರು: 'ಉಳಿದವರು ಕಂಡಂತೆ' ಮತ್ತು 'ರಂಗಿತರಂಗ' ಸಿನೆಮಾಗಳಿಗೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ತಕ್ಷಣವೇ ಚಿತ್ರರಂಗದ ಗಮನ ಸೆಳೆಯುವಲ್ಲಿ ಸಫಲರಾಗಿದ್ದರು. ಈಗ ಅವರು ಇತ್ತೀಚಿಗೆ ಸಂಗೀತ ನೀಡಿರುವ ಚಿತ್ರ 'ಸುಂದರಾಂಗ ಜಾಣ' ಆಡಿಯೋ ಬಿಡುಗಡೆಗೆ ಸಿದ್ಧವಾಗಿದೆ.
ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಮತ್ತು ಶಾನ್ವಿ ಶ್ರೀವಾಸ್ತವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಇದು ತೆಲುಗಿನ 'ಭಲೇ ಭಲೇ ಮೊಗಾಡಿವೊಯ್' ಸಿನೆಮಾದ ರಿಮೇಕ್.
ಇದು ಸಂಗೀತ ನಿರ್ದೇಶಕರಿಗೆ ಐದನೇ ಚಿತ್ರವಾಗಿದ್ದು, ಮೊದಲ ಬಾರಿಗೆ ರಿಮೇಕ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ತಾವು ಹೇಗೆ ವಿಭಿನ್ನವಾಗಿ ಸಂಗೀತ ಒದಗಿಸಬಹುದು ಎಂದು ತಿಳಿಯುವುದಕ್ಕೆ ತೆಲುಗು ಸಿನೆಮಾ ನೋಡಿದೆ ಎನ್ನುವ ಅವರು "ಈ ಸಿನೆಮಾಗ ಹಲವಾರು ಬಲಾವಣೆಗಳನ್ನು ತಂದಿರುವ ನಿರ್ದೇಶಕ ರಮೇಶ್ ಅರವಿಂದ್ ಅವರ ಶೈಲಿಯನ್ನು ನನ್ನ ಸಂಗೀತ ಹಿಡಿದಿಯುತ್ತದೆ. ಇದು ಹಾಸ್ಯ ಚಲನಚಿತ್ರವಾಗಿರುವುದರಿಂದ ಸಂಗೀತವನ್ನು ಸರಳವಾಗಿಟ್ಟು ಹಾಸ್ಯ ವಾತಾವರಣವನ್ನು ಹೆಚ್ಚಿಸಲು ಪ್ರಯತ್ನಿಸಿದ್ದೇನೆ" ಎನ್ನುತ್ತಾರೆ ಅಜನೀಶ್.
ಈ ಸಿನೆಮಾದಲ್ಲಿ ಐದು ಹಾಡುಗಳಿದ್ದು, ಎಲ್ ಆರ್ ಈಶ್ವರಿ ಹಾಡಿದ್ದ ಹಳೆಯ ಕನ್ನಡ ಹಾಡು 'ದೂರದಿಂದ ಬಂತಂತ ಸುಂದರಾಂಗ ಜಾಣ'ವನ್ನು ಕೂಡ ಒಳಗೊಳ್ಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos