ಅಲ್ಲಮ ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

ಐ ಸಿ ಎಫ್ ಟಿ ಯುನೆಸ್ಕೊ ಗಾಂಧಿ ಪದಕಕ್ಕೆ ನಾಮಾಂಕಿತಗೊಂಡ ಅಲ್ಲಮ

೧೨ ನೇ ಶತಮಾನದ ಸಂತಕವಿ ಅಲ್ಲಮಪ್ರಭುವಿನ ಬಗ್ಗೆ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ನಿರ್ದೇಶಿಸಿರುವ ಚಿತ್ರ ಗೋವಾದ ೪೭ ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಐ ಸಿ ಎಫ್ ಟಿ ಯುನೆಸ್ಕೊ

ಬೆಂಗಳೂರು: ೧೨ ನೇ ಶತಮಾನದ ಸಂತಕವಿ ಅಲ್ಲಮಪ್ರಭುವಿನ ಬಗ್ಗೆ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ನಿರ್ದೇಶಿಸಿರುವ ಚಿತ್ರ ಗೋವಾದ ೪೭ ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಐ ಸಿ ಎಫ್ ಟಿ ಯುನೆಸ್ಕೊ ಗಾಂಧಿ ಪದಕಕ್ಕೆ ಸ್ಪರ್ಧಿಸಲಿದೆ. 
ಗಾಂಧಿ ಅವರ ಆದರ್ಶಗಳಾದ ಶಾಂತಿ, ಅಹಿಂಸೆ ಮತ್ತು ಸಹಿಷ್ಣುತೆಯನ್ನು ಎತ್ತಿ ಹಿಡಿಯುವ ಸಿನೆಮಾಗಳಿಗೆ ಐ ಸಿ ಎಫ್ ಟಿ ಪ್ಯಾರಿಸ್ ಮತ್ತು ಯುನೆಸ್ಕೊ ಜಂಟಿಯಾಗಿ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡುತ್ತದೆ. ಈ ವಿಭಾಗದ ಸ್ಪರ್ಧೆಯಲ್ಲಿ 'ಅಲ್ಲಮ' ಒಳಗೊಂಡಂತೆ ೮ ಸಿನೆಮಾಗಳಿವೆ. 
ಒಂಭತ್ತು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗಾಭರಣ ಇದರ ಬಗ್ಗೆ ಮಾತನಾಡುತ್ತ "ಇದಕ್ಕಾಗಿ ಇಡೀ ಅಲ್ಲಮ ಚಿತ್ರತಂಡ ಧನ್ಯವಾದ ಮತ್ತು ಅಭಿನಂದನೆಗಳನ್ನು ತಿಳಿಸಬೇಕು. ೧೨ ನೇ ಶತಮಾನದ ಸಂತ ಕವಿ, ಯೋಗಿ ಅಲ್ಲಮನ ಸತ್ಯದ ಅರಿವು, ಆತ್ಮ ಶೋಧ ಮತ್ತು ಸಾರ್ವರ್ತ್ರಿಕ ಭ್ರಾತೃತ್ವ ಇಂದಿನಸ ಸಮಾಜಕ್ಕೆ ಬಹಳ ಅಗತ್ಯವಿದೆ. ಅಲ್ಲಮ ತೀವ್ರತಮ ಬಯೋಪಿಕ್ ಮತ್ತು ಇದರ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ" ಎನ್ನುತ್ತಾರೆ. 
ಈ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಇತರ ಚಿತ್ರಗಳು ಎ ರಿಯಲ್ ವೆರ್ಮೆರ್, ಬೆಳುಗ, ಕೋಲ್ಡ್ ಆಡ್ ಕಲಂದರ್, ಎಕ್ಸೈಲ್ಡ್, ಹಾರ್ಮೊನಿಯ, ಡಾ ಅಪಾಲಜಿ ಅಂಡ್ ದ ಫ್ಯಾಮಿಲಿ: ಡಿಮೆನ್ಷಿಯಾ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT