'ಸೀಜರ್' ಸಿನೆಮಾದಲ್ಲಿ ರವಿಚಂದ್ರನ್ ಮತ್ತು ಚಿರಂಜೀವಿ ಸರ್ಜಾ 
ಸಿನಿಮಾ ಸುದ್ದಿ

ಶಬರಿಮಲೈನಲ್ಲಿ ಚಿತ್ರೀಕರಣ ಮುಗಿಸಲಿರುವ 'ಸೀಜರ್'

ಹಿರಿಯ ನಟ ರವಿಚಂದ್ರನ್ ಮತ್ತು ಯುವ ನಟ ಚಿರಂಜೀವಿ ಸರ್ಜಾ ನಟಿಸುತ್ತಿರುವ, ವಿನಯ್ ಕೃಷ್ಣ ಅವರ ನಿರ್ದೇಚನದ ಚೊಚ್ಚಲ ಸಿನೆಮಾ ಚಿತ್ರೀಕರಣ ಮುಗಿಸುವತ್ತ ಮುಂದುವರೆದಿದೆ.

ಬೆಂಗಳೂರು: ಹಿರಿಯ ನಟ ರವಿಚಂದ್ರನ್ ಮತ್ತು ಯುವ ನಟ ಚಿರಂಜೀವಿ ಸರ್ಜಾ ನಟಿಸುತ್ತಿರುವ, ವಿನಯ್ ಕೃಷ್ಣ ಅವರ ನಿರ್ದೇಚನದ ಚೊಚ್ಚಲ ಸಿನೆಮಾ ಚಿತ್ರೀಕರಣ ಮುಗಿಸುವತ್ತ ಮುಂದುವರೆದಿದೆ. 
ಶಬರಿಮಲೈನಲ್ಲಿ ಈ ಚಲನಚಿತ್ರದ ಕೊನೆಯ ಹಂತದ ಚಿತ್ರೀಕರಣ ನಿಗದಿಯಾಗಿರುವುದು ವಿಶೇಷ. ಅದು ಕೂಡ ಈ ದೇವಸ್ಥಾನ ಜನನಿಬಿಡವಾಗಿರುವ ಸಮಯದಲ್ಲಿ. "ಚಿತ್ರೀಕರಣ ನವೆಂಬರ್ ೨೭ ಮತ್ತು ೨೮ ಕ್ಕೆ ಪ್ರಾರಂಭವಾಗಿ ಡಿಸೆಂಬರ್ ಮಧ್ಯದಲ್ಲಿ ಮುಗಿಯಲಿದೆ" ಎನ್ನುತ್ತಾರೆ ನಿರ್ದೇಶಕ. 
ಲಕ್ಷಾಂತರ ಭಕ್ತಾದಿಗಳು ಬರುವ ಸಮಯ ಇದಾಗಿರುವುದರಿಂದ ಚಿತ್ರೀಕರಣ ನಡೆಸುವುದು ಸವಾಲು ಎನ್ನುವ ನಿರ್ದೇಶಕ "ಇದಕ್ಕಾಗಿ ನಾವು ಪರವಾನಗಿ ಪಡೆದಿದ್ದೇವೆ" ಎಂದು ತಿಳಿಸುತ್ತಾರೆ. ಸ್ಕ್ರಿಪ್ಟ್ ನ ಅವಶ್ಯಕತೆಯಂತೆ ಚಿತ್ರೀಕರಣ ಶಬರಿಮಲೈನಲ್ಲಿಯೇ ನಡೆಯಬೇಕಿತ್ತು ಎಂದು ತಿಳಿಸುತ್ತಾರೆ ವಿನಯ್. 
ಈ ಚಿತ್ರದಲ್ಲಿ ಕಾರ್ ವ್ಯವಹಾರದ ತಮ್ಮ ವೈಯಕ್ತಿಕ ಅನುಭವವನ್ನು ಕೂಡ ಒಳಗೊಂಡಿದ್ದಾರಂತೆ. ರವಿಚಂದ್ರನ್ ಕಾರ್ ಕೊಳ್ಳಲು ಸಾಲ ನೀಡುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರೆ, ಸಾಲ ಹಿಂದಿರುಗಿಸದವರ ಕಾರ್ ಗಳನ್ನೂ ಸೀಜ್ ಮಾಡುವ ವ್ಯಕ್ತಿಯ ಪಾತ್ರ ಚಿರಂಜೀವಿ ಅವರದ್ದು. 
ಪಾರುಲ್ ಯಾದವ್ ನಾಯಕ ನಟಿಯಾಗಿ ನಟಿಸಿದ್ದರೆ, ಚಂದನ್ ಶೆಟ್ಟಿ ಸಿನೆಮಾಗೆ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT