'ಸೀಜರ್' ಸಿನೆಮಾದಲ್ಲಿ ರವಿಚಂದ್ರನ್ ಮತ್ತು ಚಿರಂಜೀವಿ ಸರ್ಜಾ 
ಸಿನಿಮಾ ಸುದ್ದಿ

ಶಬರಿಮಲೈನಲ್ಲಿ ಚಿತ್ರೀಕರಣ ಮುಗಿಸಲಿರುವ 'ಸೀಜರ್'

ಹಿರಿಯ ನಟ ರವಿಚಂದ್ರನ್ ಮತ್ತು ಯುವ ನಟ ಚಿರಂಜೀವಿ ಸರ್ಜಾ ನಟಿಸುತ್ತಿರುವ, ವಿನಯ್ ಕೃಷ್ಣ ಅವರ ನಿರ್ದೇಚನದ ಚೊಚ್ಚಲ ಸಿನೆಮಾ ಚಿತ್ರೀಕರಣ ಮುಗಿಸುವತ್ತ ಮುಂದುವರೆದಿದೆ.

ಬೆಂಗಳೂರು: ಹಿರಿಯ ನಟ ರವಿಚಂದ್ರನ್ ಮತ್ತು ಯುವ ನಟ ಚಿರಂಜೀವಿ ಸರ್ಜಾ ನಟಿಸುತ್ತಿರುವ, ವಿನಯ್ ಕೃಷ್ಣ ಅವರ ನಿರ್ದೇಚನದ ಚೊಚ್ಚಲ ಸಿನೆಮಾ ಚಿತ್ರೀಕರಣ ಮುಗಿಸುವತ್ತ ಮುಂದುವರೆದಿದೆ. 
ಶಬರಿಮಲೈನಲ್ಲಿ ಈ ಚಲನಚಿತ್ರದ ಕೊನೆಯ ಹಂತದ ಚಿತ್ರೀಕರಣ ನಿಗದಿಯಾಗಿರುವುದು ವಿಶೇಷ. ಅದು ಕೂಡ ಈ ದೇವಸ್ಥಾನ ಜನನಿಬಿಡವಾಗಿರುವ ಸಮಯದಲ್ಲಿ. "ಚಿತ್ರೀಕರಣ ನವೆಂಬರ್ ೨೭ ಮತ್ತು ೨೮ ಕ್ಕೆ ಪ್ರಾರಂಭವಾಗಿ ಡಿಸೆಂಬರ್ ಮಧ್ಯದಲ್ಲಿ ಮುಗಿಯಲಿದೆ" ಎನ್ನುತ್ತಾರೆ ನಿರ್ದೇಶಕ. 
ಲಕ್ಷಾಂತರ ಭಕ್ತಾದಿಗಳು ಬರುವ ಸಮಯ ಇದಾಗಿರುವುದರಿಂದ ಚಿತ್ರೀಕರಣ ನಡೆಸುವುದು ಸವಾಲು ಎನ್ನುವ ನಿರ್ದೇಶಕ "ಇದಕ್ಕಾಗಿ ನಾವು ಪರವಾನಗಿ ಪಡೆದಿದ್ದೇವೆ" ಎಂದು ತಿಳಿಸುತ್ತಾರೆ. ಸ್ಕ್ರಿಪ್ಟ್ ನ ಅವಶ್ಯಕತೆಯಂತೆ ಚಿತ್ರೀಕರಣ ಶಬರಿಮಲೈನಲ್ಲಿಯೇ ನಡೆಯಬೇಕಿತ್ತು ಎಂದು ತಿಳಿಸುತ್ತಾರೆ ವಿನಯ್. 
ಈ ಚಿತ್ರದಲ್ಲಿ ಕಾರ್ ವ್ಯವಹಾರದ ತಮ್ಮ ವೈಯಕ್ತಿಕ ಅನುಭವವನ್ನು ಕೂಡ ಒಳಗೊಂಡಿದ್ದಾರಂತೆ. ರವಿಚಂದ್ರನ್ ಕಾರ್ ಕೊಳ್ಳಲು ಸಾಲ ನೀಡುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರೆ, ಸಾಲ ಹಿಂದಿರುಗಿಸದವರ ಕಾರ್ ಗಳನ್ನೂ ಸೀಜ್ ಮಾಡುವ ವ್ಯಕ್ತಿಯ ಪಾತ್ರ ಚಿರಂಜೀವಿ ಅವರದ್ದು. 
ಪಾರುಲ್ ಯಾದವ್ ನಾಯಕ ನಟಿಯಾಗಿ ನಟಿಸಿದ್ದರೆ, ಚಂದನ್ ಶೆಟ್ಟಿ ಸಿನೆಮಾಗೆ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!