ರವಿಬಾಬು 
ಸಿನಿಮಾ ಸುದ್ದಿ

ಹಣ ಪಡೆಯಲು ಹಂದಿ ಮರಿಯೊಂದಿಗೆ ಬ್ಯಾಂಕಿಗೆ ಬಂದ ತೆಲುಗು ನಟ ರವಿಬಾಬು

ಹಣ ಪಡೆಯಲು ಬ್ಯಾಂಕಿಗೆ ಹಂದಿ ಮರಿಯೊಂದಿಗೆ ಬಂದಿದ್ದ ತೆಲುಗು ನಟ-ನಿರ್ದೇಶಕ ರವಿ ಬಾಬು ಈಗ ಸುದ್ದಿಯಾಗಿದ್ದಾರೆ. ರವಿ ಬಾಬು ಹಂದಿ ಮರಿಯನ್ನು ಹೊತ್ತು...

ಹೈದರಾಬಾದ್: ಹಣ ಪಡೆಯಲು ಬ್ಯಾಂಕಿಗೆ ಹಂದಿ ಮರಿಯೊಂದಿಗೆ ಬಂದಿದ್ದ ತೆಲುಗು ನಟ-ನಿರ್ದೇಶಕ ರವಿ ಬಾಬು ಈಗ ಸುದ್ದಿಯಾಗಿದ್ದಾರೆ. ರವಿ ಬಾಬು ಹಂದಿ ಮರಿಯನ್ನು ಹೊತ್ತು ಕ್ಯೂನಲ್ಲಿ ನಿಂತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಬ್ಯಾಂಕಿಗೆ ಹಂದಿ ಮರಿಯೊಂದಿಗೆ ಬರಲು ಕಾರಣವೇನೆಂಬುದನ್ನು ರವಿ ಬಾಬು ವಿವರಿಸಿದ್ದಾರೆ. ರವಿ ಬಾಬು ಅವರ ಮುಂದಿನ ಚಿತ್ರದಲ್ಲಿ ಈ ಹಂದಿ ಮರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ನಾನು ಮನೆಯಲ್ಲೇ ಸಾಕುತ್ತಿದ್ದೇನೆ. ಸದ್ಯ ಮನೆಯಲ್ಲಿ ಯಾರು ಇಲ್ಲದ ಕಾರಣ ಹಂದಿಮರಿಯನ್ನು ಬ್ಯಾಂಕಿಗೆ ಜತೆಯಲ್ಲೇ ಕರೆ ತಂದಿದ್ದೇನೆ ಎಂದರು. 
ಬ್ಯಾಂಕ್ ಕ್ಯೂನಲ್ಲಿ ಹಂದಿಯನ್ನು ಹೊತ್ತು ನಿಂತಿದ್ದಾಗ ಎಲ್ಲರು ಆಶ್ಚರ್ಯದಿಂದ ನೋಡಿದರು. ಆದರೆ ಬ್ಯಾಂಕಿಗೆ ಹಂದಿಮರಿಯೊಂದಿಗೆ ಹೋಗಿದ್ದು ಯಾವುದೇ ಸಮಸ್ಯೆ ಆಗಿಲ್ಲ ಎಂದು ರವಿಬಾಬು ಹೇಳಿದ್ದಾರೆ. 
ಅಧುಗೋ ಚಿತ್ರದಲ್ಲಿ ರವಿಬಾಬು ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ಹಂದಿ ಮರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಸ್ನೇಹಿತನ ತೋಟದಲ್ಲಿ ಕೆಲವು ಹಂದಿಮರಿಗಳನ್ನು ಸಾಕಿದ್ದೆವು ಎಂದು ರವಿಬಾಬು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT