ನಟ ಪೃಥ್ವಿ 
ಸಿನಿಮಾ ಸುದ್ದಿ

ಪ್ರೀತಮ್ ಗುಬ್ಬಿ ಜೊತೆಗೆ ಪೃಥ್ವಿ ಮತ್ತೊಂದು ಚಲನಚಿತ್ರ?

ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಮೊಮ್ಮಗ ನಟ ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ನಿಧಾನಕ್ಕೆ ನೆಲೆಯೂರುತ್ತಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ 'ನಾನು ಮತ್ತು ವರಲಕ್ಷ್ಮಿ' ಸಿನೆಮಾದಲ್ಲಿ

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಮೊಮ್ಮಗ ನಟ ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ನಿಧಾನಕ್ಕೆ ನೆಲೆಯೂರುತ್ತಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ 'ನಾನು ಮತ್ತು ವರಲಕ್ಷ್ಮಿ' ಸಿನೆಮಾದಲ್ಲಿ ಚೊಚ್ಚಲ ಬಾರಿಗೆ ನಾಯಕ ನಟನಾಗಿ ಹೊರಹೊಮ್ಮಿರುವ ಪೃಥ್ವಿ ಈಗ ತಮ್ಮ ಮೂರನೇ ಸಿನೆಮಾದಲ್ಲಿ ಕೂಡ ಪ್ರೀತಮ್ ಜೊತೆಗೂಡಲಿದ್ದಾರೆ ಎನ್ನುತ್ತವೆ ಮೂಲಗಳು. 
ಈ ಯುವ ನಟ ಈಗಾಗಲೇ ತಮ್ಮ ಎರಡನೇ ಸಿನೆಮಾ 'ಮುತ್ತಿನ ಹಾರ'ದಲ್ಲೂ ನಟಿಸುತ್ತಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣದ ಸಿನೆಮಾಗೆ ಕೂಡ ಈಗ ಆಯ್ಕೆಯಾಗಿದ್ದಾರೆ. ಈ ಸಿನೆಮಾದ ನಿರ್ದೇಶಕ ಪ್ರೀತಮ್ ಗುಬ್ಬಿ ಎನ್ನುತ್ತವೆ ಮೂಲಗಳು. 
ಮೂಲಗಳು ತಿಳಿಸುವಂತೆ ಸದ್ಯಕ್ಕೆ ಮಾತುಕತೆ ಜಾರಿಯಲ್ಲಿದ್ದು, ಎಲ್ಲವು ನಿಶ್ಚಯದಂತೆ ನೆರವೇರಿದರೆ, ಹೊಂಬಾಳೆ ಫಿಲಂಸ್ ಎರಡನೇ ಬಾರಿಗೆ ನಟ ಮತ್ತು ನಿರ್ದೇಶನನ್ನು ಜೊತೆಗೂಡಿಸಲಿದೆ. ಈ ನಿರ್ಮಾಣ ಸಂಸ್ಥೆ ಈ ಹಿಂದೆ ಪುನೀತ್ ರಾಜಕುಮಾರ್ ಅವರ 'ನಿನ್ನಿಂದಲೆ' ಮತ್ತು ಯಶ್ ಅವರ 'ಮಾಸ್ಟರ್ ಪೀಸ್' ಕೂಡ ನಿರ್ಮಿಸಿತ್ತು. ಈಗ ಪುನೀತ್ ಅವರ 'ರಾಜಕುಮಾರ' ಹಾಗು ಯಶ್ ಅವರ 'ಕೆಜಿಎಫ್' ಸಿನೆಮಾಗಳ ನಿರ್ಮಾಪಕರು ಕೂಡ. 
ಈಮಧ್ಯೆ ಪೃಥ್ವಿ ಅವರ ಚೊಚ್ಚಲ ಚಿತ್ರ 'ನಾನು ಮತ್ತು ವರಲಕ್ಷಿ' ಸಿನೆಮಾವನ್ನು ಜಯಣ್ಣ ಕಂಬೈನ್ಸ್ ವಿತರಿಸುತ್ತಿದ್ದು, ಡಿಸೆಂಬರ್ ೧೬ ಕ್ಕೆ ಬಿಡುಗಡೆಯಾಗಲಿದೆ. ನವೆಂಬರ್ ೨೫ ಕ್ಕೆ ಬಿಡುಗಡೆಯಾಗಬೇಕಿದ್ದರು, ನೋಟು ಹಿಂಪಡೆತ ನಿರ್ಧಾರದಿಂದ ನಗದು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದು ಮುಂದೂಡಲಾಗಿತ್ತು.
ಈ ಸಿನೆಮಾದಲ್ಲಿ ಮಾಳವಿಕಾ ಮೋಹನನ್ ಕೂಡ ಪಾದಾರ್ಪಣೆ ಮಾಡಿದ್ದು ಹಿರಿಯ ನಟರಾದ ಪ್ರಕಾಶ್ ರಾಜ್ ಹಾಗು ಮಧು ನಟಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಮತ್ತು ಪ್ರೀತಾ ಜಯರಾಮ್ ಅವರ ಸಿನೆಮ್ಯಾಟೋಗ್ರಫಿ ಸಿನೆಮಾಗಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT