ನಟಿ ಸ್ವರ ಭಾಸ್ಕರ್ 
ಸಿನಿಮಾ ಸುದ್ದಿ

ನವಾಜುದ್ದೀನ್ ಬೆಂಬಲಕ್ಕೆ ಸ್ವರ; 'ಕೆಟ್ಟ ಮನಸ್ಥಿತಿ' ಸಮಾಜದಿಂದ ತೊಲಗಲಿ ಎಂದ ನಟಿ

ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಜನರ 'ಕೆಟ್ಟ ಮನಸ್ಥಿತಿ' ಸಮಾಜದಿಂದ ತೊಲಗಬೇಕಿದೆ ಎಂದು ದಸರಾ ಹಬ್ಬದ ಪ್ರಯುಕ್ತವಾಗಿ ನಟಿ ಸ್ವರ ಭಾಸ್ಕರ್

ಮುಂಬೈ: ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಜನರ 'ಕೆಟ್ಟ ಮನಸ್ಥಿತಿ' ಸಮಾಜದಿಂದ ತೊಲಗಬೇಕಿದೆ ಎಂದು ದಸರಾ ಹಬ್ಬದ ಪ್ರಯುಕ್ತವಾಗಿ ನಟಿ ಸ್ವರ ಭಾಸ್ಕರ್ ಹೇಳಿದ್ದಾರೆ. 
ನಟ ನವಾಜುದ್ದೀನ್ ಸಿದ್ದಿಕಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು, ಅವರ ಹುಟ್ಟೂರಾದ ಉತ್ತರಪ್ರದೇಶದ ಬುಧಾನದಲ್ಲಿ ಹಿಂದೂ ಸಮುದಾಯದ ನಾಟಕ ರಾಮ ಲೀಲಾದಿಂದ ಹಿಂದೆ ಸರಿಯಬೇಕು ಎಂದು ಶಿವಸೇನಾ ಕಾರ್ಯಕರ್ತರು ಬೆದರಿಕೆ ಹಾಕಿದ್ದರು. ಹಿಂದೂ ಸಮುದಾಯದ ಈ ನಾಟಕದಲ್ಲಿ ಮುಸ್ಲಿಮರು ಭಾಗವಹಿಸುವಂತಿಲ್ಲ ಎಂಬುದು ಈ ಪಕ್ಷದ ಕಾರ್ಕರತರ ದೂರು. 
ದಸರಾ ಹಬ್ಬದ ಸಮಯದಲ್ಲಿ ಮಂಗಳವಾರ ಟ್ವೀಟ್ ಮಾಡಿರುವ ಸ್ವರ "ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಕೆಟ್ಟ ಮನಸ್ಥಿತಿ'ಯಿಂದ ಮೇಲಕ್ಕೆ ನಾವೆಲ್ಲಾ ಏರಬೇಕಿದೆ" ಎಂದಿರುವ ಅವರು "ನಮ್ಮೊಳಗಿನ ರಾಕ್ಷನಿಗಿಂತಲೂ ಮೇಲಕ್ಕೆ ಈ ದಸರಾ ಹಬ್ಬದಲ್ಲಿ ಏರಬೇಕಿದೆ- ಆ ರಾಕ್ಷಸ ಯಾರೆಂದರೆ ದ್ವೇಷ, ಮೂರ್ಖತನ, ಕುರುಡು ಮೂಢ ನಂಬಿಕೆ, ಧರ್ಮಾಂಧತೆ. ಈ ಸರ್ವಾಧಿಕಾರಿ ಧೋರಣೆಯನ್ನು ಸುಡಬೇಕಿದೆ" ಎಂದು ಕೂಡ ಹೇಳಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT