ನಟಿ ಸ್ವರ ಭಾಸ್ಕರ್ 
ಸಿನಿಮಾ ಸುದ್ದಿ

ನವಾಜುದ್ದೀನ್ ಬೆಂಬಲಕ್ಕೆ ಸ್ವರ; 'ಕೆಟ್ಟ ಮನಸ್ಥಿತಿ' ಸಮಾಜದಿಂದ ತೊಲಗಲಿ ಎಂದ ನಟಿ

ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಜನರ 'ಕೆಟ್ಟ ಮನಸ್ಥಿತಿ' ಸಮಾಜದಿಂದ ತೊಲಗಬೇಕಿದೆ ಎಂದು ದಸರಾ ಹಬ್ಬದ ಪ್ರಯುಕ್ತವಾಗಿ ನಟಿ ಸ್ವರ ಭಾಸ್ಕರ್

ಮುಂಬೈ: ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಜನರ 'ಕೆಟ್ಟ ಮನಸ್ಥಿತಿ' ಸಮಾಜದಿಂದ ತೊಲಗಬೇಕಿದೆ ಎಂದು ದಸರಾ ಹಬ್ಬದ ಪ್ರಯುಕ್ತವಾಗಿ ನಟಿ ಸ್ವರ ಭಾಸ್ಕರ್ ಹೇಳಿದ್ದಾರೆ. 
ನಟ ನವಾಜುದ್ದೀನ್ ಸಿದ್ದಿಕಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು, ಅವರ ಹುಟ್ಟೂರಾದ ಉತ್ತರಪ್ರದೇಶದ ಬುಧಾನದಲ್ಲಿ ಹಿಂದೂ ಸಮುದಾಯದ ನಾಟಕ ರಾಮ ಲೀಲಾದಿಂದ ಹಿಂದೆ ಸರಿಯಬೇಕು ಎಂದು ಶಿವಸೇನಾ ಕಾರ್ಯಕರ್ತರು ಬೆದರಿಕೆ ಹಾಕಿದ್ದರು. ಹಿಂದೂ ಸಮುದಾಯದ ಈ ನಾಟಕದಲ್ಲಿ ಮುಸ್ಲಿಮರು ಭಾಗವಹಿಸುವಂತಿಲ್ಲ ಎಂಬುದು ಈ ಪಕ್ಷದ ಕಾರ್ಕರತರ ದೂರು. 
ದಸರಾ ಹಬ್ಬದ ಸಮಯದಲ್ಲಿ ಮಂಗಳವಾರ ಟ್ವೀಟ್ ಮಾಡಿರುವ ಸ್ವರ "ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಕೆಟ್ಟ ಮನಸ್ಥಿತಿ'ಯಿಂದ ಮೇಲಕ್ಕೆ ನಾವೆಲ್ಲಾ ಏರಬೇಕಿದೆ" ಎಂದಿರುವ ಅವರು "ನಮ್ಮೊಳಗಿನ ರಾಕ್ಷನಿಗಿಂತಲೂ ಮೇಲಕ್ಕೆ ಈ ದಸರಾ ಹಬ್ಬದಲ್ಲಿ ಏರಬೇಕಿದೆ- ಆ ರಾಕ್ಷಸ ಯಾರೆಂದರೆ ದ್ವೇಷ, ಮೂರ್ಖತನ, ಕುರುಡು ಮೂಢ ನಂಬಿಕೆ, ಧರ್ಮಾಂಧತೆ. ಈ ಸರ್ವಾಧಿಕಾರಿ ಧೋರಣೆಯನ್ನು ಸುಡಬೇಕಿದೆ" ಎಂದು ಕೂಡ ಹೇಳಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT