'ದನ ಕಾಯೋನು' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ನನ್ನ ಸಿನೆಮಾ 'ಕಲ್ಟ್ ಕ್ಲಾಸಿಕ್' ಆಗುವತ್ತ ಮುನ್ನಡೆದಿದೆ: ಯೋಗರಾಜ್ ಭಟ್

'ದನ ಕಾಯೋನು' ಮೂಲಕ ಯೋಗರಾಜ್ ಭಟ್ ತಮ್ಮ ಫಾರ್ಮ್ ಗೆ ಮರಳಿದ್ದಾರೆ ಎನ್ನುತ್ತಾರೆ ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು. ವಿಜಯ್, ರಂಗಾಯಣ ರಘು, ಬಿರಾದಾರ್,

ಬೆಂಗಳೂರು: 'ದನ ಕಾಯೋನು' ಮೂಲಕ ಯೋಗರಾಜ್ ಭಟ್ ತಮ್ಮ ಫಾರ್ಮ್ ಗೆ ಮರಳಿದ್ದಾರೆ ಎನ್ನುತ್ತಾರೆ ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು. ವಿಜಯ್, ರಂಗಾಯಣ ರಘು, ಬಿರಾದಾರ್, ಪ್ರಿಯಾಮಾಣಿ ಸೇರಿದಂತೆ ಇಡೀ ಚಿತ್ರತಂಡ ಚಿತ್ರದ ಯಶಸ್ಸಿನಿಂದ ಸಂತಸಗೊಂಡಿದ್ದಾರೆ. 
ಸಿನಿಮಾದಲ್ಲಿರುವ ಪ್ರಾಣಿಗಳಿಂದ ನಿಮಗೆ ಅದೃಷ್ಟ ಒಲಿಯಿತೋ ಎಂದು ನಿರ್ದೇಶಕರಿಗೆ ಪ್ರಶ್ನಿಸಿದಾಗ "ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಆದರೆ ನನಗೆ ಪ್ರಾಣಿಗಳೆಂದರೆ ಇಷ್ಟ ಮತ್ತು ಅವುಗಳನ್ನು ನನ್ನ ಸಿನೆಮಾದಲ್ಲಿ ತೋರಿಸಲು ಕೂಡ ಇಷ್ಟ" ಎನ್ನುತ್ತಾರೆ.
ಪ್ರೇಕ್ಷಕರ ಕೋನದಿಂದಲೂ ಚಿಂತಿಸುವ ಯೋಗರಾಜ್ ಭಟ್ ಭಾವನೆಗಳು ಇಂದಿಗೂ ಹೃದಯಗಳನ್ನು ಗೆಲ್ಲುತ್ತವೆ ಮತ್ತು ಅದನ್ನು ನೈಜವಾಗಿ ತೋರಿಸಿದಾಗಲಂತೂ ಎಲ್ಲರು ಒಪ್ಪಿಕೊಳ್ಳುತ್ತಾರೆ ಎನ್ನುತ್ತಾರೆ. "ಹಾಸ್ಯ ಸಂತಸ ನೀಡಿ ಮಾಯವಾಗುತ್ತದೆ ಆದರೆ ಭಾವನೆಗಳು ಹೆಚ್ಚಿನ ಕಾಲ ಉಳಿಯುತ್ತವೆ ಮತ್ತು ಇದು ಸಂಭವಿಸಿದಾಗ ಸಿನೆಮಾಗಳು 'ಕಲ್ಟ್ ಕ್ಲಾಸಿಕ್'ಗಳಾಗುತ್ತವೆ. 'ದನ ಕಾಯೋನು' ಮೂಲಕ ಹೊಸ ಪ್ರಕಾರದ ಸಿನೆಮಾವೊಂದನ್ನು ಮಾಡಿರುವುದಕ್ಕೆ ನನಗೆ ಸಂತಸವಿದೆ ಮತ್ತು ಜನ ಹೊಸ ಬಗೆಯ ಸಿನೆಮಾವನ್ನು ಒಪ್ಪಿದ್ದಾರೆ" ಎನ್ನುತ್ತಾರೆ ನಿರ್ದೇಶಕ. 
ದನ ಕಾಯೋನು ಸಿನೆಮಾದ ಮುಂದಿನ ಭಾಗವನ್ನು ನಿರ್ದೇಶಿಸುವ ಸುಳಿವು ನೀಡುವ ಯೋಗರಾಜ್ ಭಟ್ "ಸಾರ್ವಜನಿಕರಿಂದ ಬೇಡಿಕೆ ಬಂದರಷ್ಟೇ ಮುಂದಿನ ಭಾಗ ನಿರ್ದೇಶಿಸಲಿದ್ದೇನೆ, ಸದ್ಯಕ್ಕಂತೂ ಇಲ್ಲ. ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಭಾವನಾತ್ಮಕ ಸಂಬಂಧವನ್ನು ಬೆಸೆಯುವುದು ಸವಾಲಿನ ಕೆಲಸ. ಆದರೆ ಇದು ನನ್ನ ಇಷ್ಟದ ಕೆಲಸ, ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ" ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

T20 World Cup 2026: ಸೂಪರ್ 8 ಹಂತಕ್ಕೆ ಭಾರತ ಲಗ್ಗೆ; ದೇಶಾದ್ಯಂತ ಸಂಭ್ರಮಾಚರಣೆ, ಗಣ್ಯರ ಶುಭಾಶಯ!

'ಈ ಛಲವಾದಿ ನಾರಾಯಣಸ್ವಾಮಿ ನಾಯಿ ಥರ...ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ'

4 ಕೋಟಿ ರೂ. ಮೌಲ್ಯದ ಗ್ರಾಹಕರ ಚಿನ್ನಾಭರಣ ಕದ್ದು, ಆನ್‌ಲೈನ್ ಬೆಟ್ಟಿಂಗ್‌: ಬ್ಯಾಂಕ್ ಮ್ಯಾನೇಜರ್ ಬಂಧನ, ಸಿಕ್ಕಿಬಿದ್ದಿದ್ದೇ ರೋಚಕ!

Bengaluru: 'ಮನೆಗೆ ಸೂರ್ಯನ ಬೆಳಕು ಬರುತ್ತದೆ' ಎಂಬ ಒಂದೇ ಕಾರಣಕ್ಕೆ 80 ಸಾವಿರ ಬಾಡಿಗೆ ಕೇಳಿದ ಮಾಲೀಕ!

SCROLL FOR NEXT