ಉಪೇಂದ್ರ-ಶಶಾಂಕ್ 
ಸಿನಿಮಾ ಸುದ್ದಿ

ಉಪೇಂದ್ರ ಸಿನೆಮಾ ನಿರ್ದೇಶಿಸಲಿರುವ ಶಶಾಂಕ್

ನಿರ್ದೇಶಕ ಮತ್ತು ನಟ ಉಪೇಂದ್ರ ಚಿತ್ರರಂಗದ ಬೇರೆ ಬೇರೆ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ತೆರೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಅವರ ಅಭಿಮಾನಿ ಮತ್ತು ನಿರ್ದೇಶಕ ಮಂಜು ಮಾಂಡವ್ಯ ಅವರ

ಬೆಂಗಳೂರು: ನಿರ್ದೇಶಕ ಮತ್ತು ನಟ ಉಪೇಂದ್ರ ಚಿತ್ರರಂಗದ ಬೇರೆ ಬೇರೆ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ತೆರೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಅವರ ಅಭಿಮಾನಿ ಮತ್ತು ನಿರ್ದೇಶಕ ಮಂಜು ಮಾಂಡವ್ಯ ಅವರ ಸ್ಕ್ರಿಪ್ಟ್ ಒಪ್ಪಿಕೊಂಡ ಮೇಲೆ ಈಗ ನಿರ್ದೇಶಕ ಶಶಾಂಕ್ ಅವರ ಸಿನೆಮಾದಲ್ಲಿ ನಟಿಸಲು ಅವರು ಮುಂದಾಗಿದ್ದಾರೆ. 
ಶಶಾಂಕ್ ಅವರು ಕೆಲವು ದಿನಗಳಿಂದ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲು ಹವಣಿಸುತ್ತಿದ್ದರು. ಈಗ ಉಪೇಂದ್ರ ನಟನೆಯ ಸಿನೆಮಾದ ಮೂಲಕ ಅದನ್ನು ಸಾಕಾರ ಮಾಡಿಕೊಂಡಿರುವ ನಿರ್ದೇಶಕ "ನಾನು ಉಪ್ಪಿ ಸಿನೆಮಾವನ್ನು ನಿರ್ದೇಶಿಸುತ್ತಿರುವುದಕ್ಕೆ ಸಂತಸದಿಂದ್ದೇನೆ ಮತ್ತು ಅಷ್ಟೇ ಸಂತಸ ಅದನ್ನು ಸ್ವಂತ ಬ್ಯಾನರ್ ಅಡಿ ಅದನ್ನು ನಿರ್ಮಿಸುತ್ತಿರುವುದು" ಎನ್ನುತ್ತಾರೆ. 
ನಿರ್ದೇಶಕ ಹೇಳುವಂತೆ ಉಪ್ಪಿಗಾಗಿ ಹೆಣೆದಿರುವ ಈ ಚಿತ್ರಕಥೆ ಬಹಳ ವಿಭಿನ್ನವಾದುದಂತೆ. "ಈ ಸಿನೆಮಾ ಉಪ್ಪಿಗಾಗಲಿ, ನನಗಾಗಲಿ ಅಥವಾ ಕನ್ನಡ ಚಿತ್ರರಂಗಕ್ಕಾಗಲಿ ಅತಿ ವಿಭಿನ್ನವಾಗಿರುತ್ತದೆ ಮತ್ತು ಇದಕ್ಕಾಗಿಯೇ ನಾನಿದನ್ನು ನಿರ್ಮಿಸುತ್ತಿದ್ದೇನೆ ಕೂಡ. ಉಪ್ಪಿ ಕೂಡ ನಿರ್ದೇಶಕಾನಾಗಿದ್ದು, ಈ ವಿಷಯ ಬಹಳ ವಿಭಿನ್ನ ಎಂದರು" ಎಂದು ತಿಳಿಸುತ್ತಾರೆ ಶಶಾಂಕ್. 
ಈಗ ನಟನ ಆಯ್ಕೆ ಮುಗಿಸಿರುವುದರಿಂದ ಸ್ಕ್ರಿಪ್ಟ್ ಕೆಲಸ ಮುಂದುವರೆಸುವುದಕ್ಕೆ ಸುಲಭವಾಗಿದೆ ಎನ್ನುವ ಶಶಾಂಕ್ "ಕಳೆದ ಎರಡು ವರ್ಷಗಳಿಂದ ನಾವಿಬ್ಬರು ಒಟ್ಟಿಗೆ ಕೆಲಸ ಮಾಡುವುದನ್ನು ಚರ್ಚಿಸುತ್ತಿದ್ದೇವೆ ಆದರೆ ಉಪ್ಪಿಗೆ ಒಪ್ಪುವ ಚಿತ್ರಕಥೆ ಹೊಳೆಯುವವರೆಗೆ ಕಾಯ್ದೆ. ಹೆಚ್ಚಿನ ಸಮಯ ತೆಗೆದುಕೊಂಡು ಸಂಪೂರ್ಣ ಸ್ಕ್ರಿಪ್ಟ್ ನೊಂದಿಗೆ ಹಿಂದಿರುಗುವುದಕ್ಕೆ ಅವರು ಹೇಳಿದ್ದಾರೆ" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT