ಅಜಿತ್ ಜಯರಾಜ್ 
ಸಿನಿಮಾ ಸುದ್ದಿ

ತಂದೆಯ ರಾಬಿನ್ ಹುಡ್ ಕಥೆ ಹೇಳಲು ಬರುತ್ತಿದ್ದಾರೆ ಅಜಿತ್ ಜಯರಾಜ್

ಬೆಂಗಳೂರಿನ ಮಾಜಿ ಭೂಗತ ದೊರೆ ಜಯರಾಜ್ ಹೆಸರು ಸಾಮಾನ್ಯವಾಗಿ ಬಲ್ಲದವರಿಲ್ಲ. "ವೈದ್ಯನ ಮಗ ವೈದ್ಯನೇ ಆಗಬೇಕಿಲ್ಲ" ಎಂದು ನಂಬುವ ಜಯರಾಜ್ ಅವರ ಮಗ ಅಜಿತ್ ತಮ್ಮ ತಂದೆಯ ಬಗ್ಗೆ ಸಿನೆಮಾ

ಬೆಂಗಳೂರು: ಬೆಂಗಳೂರಿನ ಮಾಜಿ ಭೂಗತ ದೊರೆ ಜಯರಾಜ್ ಹೆಸರು ಸಾಮಾನ್ಯವಾಗಿ ಬಲ್ಲದವರಿಲ್ಲ. "ವೈದ್ಯನ ಮಗ ವೈದ್ಯನೇ ಆಗಬೇಕಿಲ್ಲ"  ಎಂದು ನಂಬುವ ಜಯರಾಜ್ ಅವರ ಮಗ ಅಜಿತ್ ತಮ್ಮ ತಂದೆಯ ಬಗ್ಗೆ ಸಿನೆಮಾ ಮಾಡಲು ಮುಂದಾಗಿದ್ದಾರೆ. "ನನ್ನ ತಂದೆಯನ್ನು ಭೂಗತ ದೊರೆ ಎನ್ನಲಾಗುತ್ತಿತ್ತು. ನಾನೀಗ ಕಲೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ನಟನೆಯಲ್ಲಿ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ. ನನಗೆ ಉತ್ತೇಜನ ಸಿಕ್ಕಿದೆ ಮತ್ತು ಸಿನೆಮಾ ರಂಗ ಸ್ವಾಗತಿಸಿದೆ" ಎನ್ನುತ್ತಾರೆ. 
ತಾವು 8 ತಿಂಗಳು ಇರುವಾಗಲೇ ತಮ್ಮ ತಂದೆ ತೀರಿ ಹೋದರೂ, ನಗರದಲ್ಲಿ ಅವರನ್ನು ರಾಬಿನ್ ಹುಡ್ ರೀತಿಯಲ್ಲಿ ನೋಡುವರಿದ್ದಾರೆ ಎಂಬ ಅಂಶ ಅವರ ಜೊತೆಯಲ್ಲೇ ಉಳಿದುಕೊಂಡಿದೆಯಂತೆ, "ನನ್ನ ತಂದೆಯ ಬಗ್ಗೆ ಜನಕ್ಕೆ ಸಾಕಷ್ಟು ಅಂಶಗಳು ತಿಳಿದಿಲ್ಲ. ಅವುಗಳನ್ನು ಹೊರಗೆ ತರಬೇಕಿದೆ. ನನ್ನ ತಂದೆಯಲ್ಲಿ ಸಾಕಷ್ಟು ಒಳ್ಳೆಯತನವಿತ್ತು. ನನ್ನ ಪ್ರದೇಶದ ಬಳಿ ಒಂದು ಸ್ಲಮ್ ಇದೆ. ಅಲ್ಲಿ ಜನ ನನ್ನ ತಂದೆಯ ಫೋಟೋವನ್ನು ದೇವರ ಫೋಟೋದ ಪಕ್ಕದಲ್ಲಿ ಇಡುತ್ತಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದರು. ನನ್ನ ತಾಯಿ ಯಾರ ಸಹಾಯವನ್ನೂ ಪಡೆಯದೆ ನನ್ನನು ಈ ಹಂತಕ್ಕೆ ತಂದು ನಿಲ್ಲಿಸುವುದಕ್ಕೆ ಪಟ್ಟ ಪರಿಪಾಟಲು ನನಗೆ ತಿಳಿದಿದೆ" ಎನ್ನುತ್ತಾರೆ ಸಾಧಾರಣ ಯಶಸ್ಸು ಕಂಡ 'ಅಗಮ್ಯ' ಸಿನೆಮಾದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಅಜಿತ್. 
ತಮ್ಮ ಮೂರನೇ ಸಿನೆಮಾ 'ತ್ರತಕ' ಇಂದಿಂದಿದ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ಕೂಡ ಅವರು ತಿಳಿಸುತ್ತಾರೆ. 'ಜಿಗರ್ಥಂಡ' ಆದಮೇಲೆ ಶಿವ ಗಣೇಶ್ ಅವರಿಗೆ ಇದು ಎರಡನೇ ಕನ್ನಡ ಸಿನೆಮಾ. ಈ ಸಿನೆಮಾ ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ನಿರ್ಮಾಣವಾಗಲಿದೆಯಂತೆ. 
'ಆ ದಿನಗಳು' ಸಿನೆಮಾದಲ್ಲಿ ಅಜಿತ್ ಪಾತ್ರವೊಂದರಲ್ಲಿ ನಟಿಸಬೇಕಿತ್ತಂತೆ. ಆದರೆ ಆಗ ಅವರು ದೈಹಿಕವಾಗಿ ಇನ್ನು ಸಿದ್ಧಗೊಳ್ಳದೆ ಹೋದದ್ದರಿಂದ ಆ ಪಾತ್ರವನ್ನು ಚೇತನ್ ಪಡೆದುಕೊಂಡರಂತೆ. 
ತಮ್ಮ ತಂದೆಯ ಬಗೆಗಿನ ಚಿತ್ರವನ್ನು 'ಭಗತ್' ನಿರ್ದೇಶಿಸಲಿದ್ದಾರೆ ಎಂದು ಕೂಡ ಅಜಿತ್ ತಿಳಿಸುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT