'ದೊಡ್ಮನೆ ಹುಡುಗ' ಸಿನೆಮಾದಲ್ಲಿ ರಾಧಿಕಾ ಪಂಡಿತ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ದೊಡ್ಮನೆ ಸಂಭ್ರಮ ಪ್ರಾರಂಭ; ಬಿಡುಗಡೆಗೆ ಒಂದು ವಾರಕ್ಕೆ ಮುಂಚಿತವಾಗಿಯೇ ಟಿಕೆಟ್ ಮಾರಾಟ

ಪುನೀತ್ ರಾಜಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಸಿನೆಮಾದ ಬಿಡುಗಡೆ ಸನಿಹವಾಗುತ್ತಿದ್ದು, ಈಗಾಗಲೇ ಅಭಿಮಾನಿಗಳ ನಡುವೆ ಸಂಭ್ರಮ ಶುರುವಾಗಿದೆ. ಸೆಪ್ಟೆಂಬರ್ 23 ಕ್ಕೆ ಬಿಡುಗಡೆಯಾಗಲಿರುವ

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಸಿನೆಮಾದ ಬಿಡುಗಡೆ ಸನಿಹವಾಗುತ್ತಿದ್ದು, ಈಗಾಗಲೇ ಅಭಿಮಾನಿಗಳ ನಡುವೆ ಸಂಭ್ರಮ ಶುರುವಾಗಿದೆ. ಸೆಪ್ಟೆಂಬರ್ 23 ಕ್ಕೆ ಬಿಡುಗಡೆಯಾಗಲಿರುವ ಈ ಸಿನೆಮಾದ ಸಂಭ್ರಮಕ್ಕಾಗಿ ಅಭಿಮಾನಿಗಳು ತಯ್ಯಾರಿ ನಡೆಸುತ್ತಿದ್ದು, 108 ಅಡಿಯ ಕಟೌಟ್ ಹಾಕಲಿದ್ದಾರೆ. ಹಾಗೆಯೇ ಪ್ರಸನ್ನ ಚಿತ್ರಮಂದಿರದ ಎದುರು 10 ಕ್ಕೂ ಹೆಚ್ಚು ಕಟೌಟ್ ಗಳು ತಲೆಯೆತ್ತಲಿವೆ. 
"ಅಭಿಮಾನಿಗಳು 9 ಕಟೌಟ್ ಗಳನ್ನು ಹಾಕಲಿದ್ದಾರೆ ಮತ್ತು ನಿರ್ಮಾಪಕ ಒಂದನ್ನು ಏರಿಸಲಿದ್ದಾರೆ"  ಎನ್ನುತ್ತಾರೆ ಚಿತ್ರನಿರ್ಮಾಣ ತಂಡದ ಸದ್ಯಸ್ಯರೊಬ್ಬರು. "ಇದು ಪುನೀತ್ ಅವರ 25 ನೇ ಚಿತ್ರವಾಗಿರುವುದರಿಂದ, ಇದು ನೆನಪಿನಲ್ಲುಳಿಯುವಂತೆ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ" ಎಂದು ತಿಳಿಸುವ ಮೂಲಗಳು "ಹಾಗೆಯೇ ಅಂಬರೀಷ್ ಅವರ ಕಟೌಟ್ ಗಳನ್ನು ಕೂಡ ಎಲ್ಲ ಚಿತ್ರಮಂದಿರಗಳ ಮುಂದೆ ನಿಲ್ಲಿಸಲಾಗುತ್ತದೆ" ಎಂದಿದ್ದಾರೆ. 
ಅಭಿಮಾನಿಗಳಿಗೆ ಸಂತಸ ತರಬಲ್ಲ ಮತ್ತೊಂದು ಸುದ್ದಿಯೆಂದರೆ ಈ ಸಿನೆಮಾದ ಟಿಕೆಟ್ ಗಳನ್ನು ಬಿಡುಗಡೆಗೆ ಒಂದು ವಾರದ ಮುಂಚೆಯೇ ಮುಂಗಡ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಈ ಸಿನೆಮಾ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
ಚಿತ್ರೀಕರಣದ ನಂತರದ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ವಾರದ ವೇಳೆಗೆ ಸೆನ್ಸಾರ್ ಪ್ರಮಾಣಪತ್ರ ಪಡೆಯುವ ಭರವಸೆ ಹೊಂದಿದೆ ಚಿತ್ರತಂಡ. 
ಸೂರಿ ನಿರ್ದೇಶನದ ಈ ಚಿತ್ರವನ್ನು ಎಂ ಗೋವಿಂದು ನಿರ್ಮಿಸಿದ್ದು ರಾಧಿಕಾ ಪಂಡಿತ್ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT