'ಗಿರಿಜಾ ಕಲ್ಯಾಣ'ದ ವಿಶಿಷ್ಟ ಪಾತ್ರದಲ್ಲಿ ಗೋಧಿ ಬಣ್ಣ..'ದ ವಸಿಷ್ಠ 
ಸಿನಿಮಾ ಸುದ್ದಿ

ಕಿರುತೆರೆ ಧಾರಾವಾಹಿ 'ಗಿರಿಜಾ ಕಲ್ಯಾಣ'ದ ವಿಶಿಷ್ಟ ಪಾತ್ರದಲ್ಲಿ ಗೋಧಿ ಬಣ್ಣ..'ದ ವಸಿಷ್ಠ

ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ವಿಶಿಷ್ಟ ಖಳನಾಯಕನ ಪಾತ್ರ ಮಾಡಿ ಗಮನ ಸೆಳೆದಿದ್ದ ವಸಿಷ್ಠ ಸಿಂಹ ಅವರಿಗೆ ಹಲವಾರು ಅವಕಾಶಗಳು ಸಹಜವಾಗಿ

ಬೆಂಗಳೂರು: ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ವಿಶಿಷ್ಟ ಖಳನಾಯಕನ ಪಾತ್ರ ಮಾಡಿ ಗಮನ ಸೆಳೆದಿದ್ದ ವಸಿಷ್ಠ ಸಿಂಹ ಅವರಿಗೆ ಹಲವಾರು ಅವಕಾಶಗಳು ಸಹಜವಾಗಿ ಹುಡುಕಿಬರುತ್ತಿವೆ. ಈಗ ಅವರು ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಗಿರಿಜಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಲಿದ್ದಾರೆ. 
ಭರವಸೆಯ ನಟ ವಸಿಷ್ಠ ಅವರು ಸೂರಿ ನಿರ್ದೇಶನದ 'ಟಗರು' ಸಿನೆಮಾದಲ್ಲಿ ಕೂಡ ಶಿವರಾಜ್ ಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ಕೂಡ ಖಳನಾಯಕರಾನಾಗಿ ಕಾಣಿಸಿಕೊಳ್ಳಲಿದ್ದಾರೆ.
ಈಗ ಆಸಕ್ತಿದಾಯಕ ಬೆಳವಣಿಗೆಯೊಂದರಲ್ಲಿ ಬಹುಮುಖಿ ನಟ ವಸಿಷ್ಠ ಕಿರುತೆರೆ ಧಾರಾವಾಹಿ 'ಗಿರಿಜಾ ಕಲ್ಯಾಣ'ದಲ್ಲಿ 'ಭೈರವಗಿರಿ ಬಾಬಾ' ಆಗಿ ಬರಲಿದ್ದಾರೆ. ಕಲರ್ಸ್ ಸೂಪರ್ ಕನ್ನಡ ಮನರಂಜನಾ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9:30 ಕ್ಕೆ ಈ ಧಾರಾವಾಹಿ ಮೂಡಿಬರುತ್ತದೆ. 
'ಬಾಹುಬಲಿ' ಖ್ಯಾತಿಯ ಸಿನೆಮಾ ನಿರ್ಮಾಣ ಸಂಸ್ಥೆ ಆರ್ಕಾ ಮೀಡಿಯಾ ನಿರ್ಮಿಸುತ್ತಿರುವ ಈ ಧಾರಾವಾಹಿಯ ನಿರ್ದೇಶಕ ನವೀನ್ ಕೃಷ್ಣ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT