'ಜಾಗ್ವಾರ್' ಸಿನೆಮಾದಲ್ಲಿ ನಿಖಿಲ್ ಕುಮಾರ್ 
ಸಿನಿಮಾ ಸುದ್ದಿ

'ಜಾಗ್ವಾರ್' ಮೊದಲ ಟಿಕೆಟ್ 10 ಲಕ್ಷಕ್ಕೆ ಬಿಕರಿ!

ನಿಖಿಲ್ ಕುಮಾರ್ ನಟನೆಯ ಮೊದಲ ಚಿತ್ರ 'ಜಾಗ್ವಾರ್' ಹಲವಾರು ಕಾರಣಗಳಿಗೆ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಈ ಚೊಚ್ಚಲ ನಟ ಕನ್ನಡ ಚಿತ್ರರಂಗದಲ್ಲಿ ಆಗಲೇ ದೊಡ್ಡ ಅಭಿಮಾನಿ ಬಳಗವನ್ನು

ಬೆಂಗಳೂರು: ನಿಖಿಲ್ ಕುಮಾರ್ ನಟನೆಯ ಮೊದಲ ಚಿತ್ರ 'ಜಾಗ್ವಾರ್' ಹಲವಾರು ಕಾರಣಗಳಿಗೆ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಈ ಚೊಚ್ಚಲ ನಟ ಕನ್ನಡ ಚಿತ್ರರಂಗದಲ್ಲಿ ಆಗಲೇ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. 
ಮೂಲಗಳ ಪ್ರಕಾರ ನಿಖಿಲ್ ಅಭಿಮಾನಿಗಳು ಮೊದಲ ಟಿಕೆಟ್ ಕೊಳ್ಳಲು ಪೈಪೋಟಿಗೆ ಬಿದ್ದಿದ್ದಾರಂತೆ. "ಮೊದಲ ಟಿಕೆಟ್ ಅನ್ನು ಅತಿ ಹೆಚ್ಚಿನ ಬೆಳೆಗೆ ಕೊಳ್ಳಲು 'ಜಾಗ್ವಾರ್' ಚಿತ್ರತಂಡ ನಿರತವಾಗಿ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದೆ. ಕೆಲವರು ಒಂದು ಟಿಕೆಟ್ ಕೊಳ್ಳಲು ಒಂದು ಲಕ್ಷ ರೂ ನೀಡಲು ಸಿದ್ಧರಿದ್ದಾರೆ, ಮೈಸೂರಿನ ಅಭಿಮಾನಿ ಲೋಕೇಶ್ ಎಂಬುವವರು ಮೊದಲ ಟಿಕೆಟ್ ಗಾಗಿ 10 ಲಕ್ಷ ರೂ ನೀಡಲು ಸಿದ್ಧರಾಗಿದ್ಧಾರೆ. ಆದರೆ ಇದರ ಬಗ್ಗೆ ಚಿತ್ರತಂಡ ಯಾವುದೇ ನಿರ್ಧಾರ ಇನ್ನು ತೆಗೆದುಕೊಂಡಿಲ್ಲ. ಬಿಡುಗಡೆ ಸಮಯದಲ್ಲಿ ಅದೃಷ್ಟವಂತನ ಹೆಸರನ್ನು ಘೋಷಿಸುತ್ತದೆ" ಎನ್ನುತ್ತಾರೆ. 
"ಹೊಸ ನಟನೊಬ್ಬನ ಮೊದಲ ಸಿನೆಮಾಗೆ ಈ ರೀತಿಯ ಸಂಚಲನ ಹುಟ್ಟಿರುವುದು ಅಚ್ಚರಿ ತಂದಿದೆ" ಎನ್ನುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು. 
ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಕನಿಷ್ಠ 16 ದೇಶಗಳಲ್ಲಿ 1000 ಕ್ಕೂ ಹೆಚ್ಚು ತೆರೆಗಳಲ್ಲಿ ಬಿಡುಗಡೆ ಕಾಣಲಿದೆಯಂತೆ. ಯಾವುದೇ ಚೊಚ್ಚಲ ನಟನಿಗೆ ಇದು ಅತಿ ದೊಡ್ಡ ಪ್ರದರ್ಶನವಾಗಲಿದೆ. 
ಎ ಮಹಾದೇವ ನಿರ್ದೇಶಿಸಿರುವ ಈ ಚಿತ್ರ ಅಕ್ಟೋಬರ್ 6 ಕ್ಕೆ ಬಿಡುಗಡೆಯಾಗಬೇಕಿದೆ. ದೀಪ್ತಿ ಸಾಟಿ ಚಿತ್ರದ ನಾಯಕನಟಿಯಾಗಿದ್ದು, ತಮನ್ನಾ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹಾಗೆಯೇ ರಮ್ಯ ಕೃಷ್ಣ, ಶರತ್ ಕುಮಾರ್, ಸಾಧು ಕೋಕಿಲಾ, ಜಗಪತಿ ಬಾಬು, ಅವಿನಾಶ್, ಸಂಪತ್ ರಾಜು ಹೀಗೆ ಹಿರಿಯ ನಟರ ತಾರಾದಂಡೆ ಸಿನಿಮಾದಲ್ಲಿದೆ.
ಎಸ್ ಥಮನ್ ಸಂಗೀತ ನೀಡಿದ್ದು, ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಸಿನೆಮಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT