'ಪತ್ತೆದಾರಿ ಪ್ರತಿಭಾ' ಧಾರಾವಾಹಿಯ ಸ್ಟಿಲ್ 
ಸಿನಿಮಾ ಸುದ್ದಿ

'ಗಿರಿಜಾ ಕಲ್ಯಾಣ'ನ ನಂತರ 'ಪತ್ತೆದಾರಿ ಪ್ರತಿಭಾ' ನಿರ್ದೇಶನಕ್ಕಿಳಿದ ನವೀನ್ ಕೃಷ್ಣ

ಬೆಳ್ಳಿತೆರೆಯ ನಟರು ಟಿವಿ ಧಾರಾವಾಹಿಗಳನ್ನು ನಿರ್ದೇಶಿಸುವುದು ಅಥವಾ ನಟಿಸುವುದು ಅಪರೂಪ. ಆದರೆ ನಟ ನವೀನ್ ಕೃಷ್ಣ ಅಂತಹ ಯಾವುದೇ ನಿರ್ಬಂಧನೆಗಳನ್ನು ಹಾಕಿಕೊಂಡಿಲ್ಲ.

ಬೆಂಗಳೂರು: ಬೆಳ್ಳಿತೆರೆಯ ನಟರು ಟಿವಿ ಧಾರಾವಾಹಿಗಳನ್ನು ನಿರ್ದೇಶಿಸುವುದು ಅಥವಾ ನಟಿಸುವುದು ಅಪರೂಪ. ಆದರೆ ನಟ ನವೀನ್ ಕೃಷ್ಣ ಅಂತಹ ಯಾವುದೇ ನಿರ್ಬಂಧನೆಗಳನ್ನು ಹಾಕಿಕೊಂಡಿಲ್ಲ. ಈ ಹಿಂದೆ 'ಗಿರಿಜಾ ಕಲ್ಯಾಣ' ಧಾರಾವಾಹಿಯನ್ನು ನಿರ್ದೇಶಿಸಿದ್ದ ಅವರು ಈಗ 'ಪತ್ತೇದಾರಿ ಪ್ರತಿಭಾ' ನಿರ್ದೇಶನಕ್ಕೆ ಮುಂದಾಗಿದ್ದಾರೆ. 
"ನಿಜ ಹೇಳಬೇಕೆಂದರೆ, 'ಆಕ್ಟರ್' ಸಿನೆಮಾದ ನಂತರ ನನಗೆ ಯಾವುದೇ ಅವಕಾಶಗಳು ದೊರಕಲಿಲ್ಲ. ನನಗೆ ನಿರ್ದೇಶನದಲ್ಲಿ ಯಾವತ್ತಿಗೂ ಆಸಕ್ತಿ ಇತ್ತು ಮತ್ತು ಟಿವಿ ಧಾರಾವಾಹಿಯ ನಿರ್ದೇಶನದ ಅವಕಾಶ ಸಿಕ್ಕಿತು. ಮೊದಲಿಗೆ ಸಾಮಾಜಿಕ-ಪುರಾಣ ವಿಷಯಾಧಾರಿತ ಧಾರಾವಾಹಿ ನಿರ್ದೇಶನ ಸವಾಲಾಗಿತ್ತು. ಆದರೆ ನಿರ್ದೇಶಕನಾಗಿ ನನಗೆ ಇದು ಒಳ್ಳೆಯ ಅನುಭವ ಎನಿಸಿತು. 
"ಈ ಧಾರಾವಾಹಿ ಮುಗಿಯುವ ಹೊತ್ತಿಗೆ ನನ್ನ ಮುಂದಿನ ನಡೆಯ ಬಗ್ಗೆ ಚಿಂತಿಸುತ್ತಿದ್ದೆ. ಮತ್ತಾಗ ನನಗೆ 'ಪತ್ತೇದಾರಿ ಪ್ರತಿಭಾ' ಒಲಿದು ಬಂತು. ಈ ಪ್ರಕಾರಕ್ಕಾಗಿ ನಾನು ಒಪ್ಪಿಕೊಂಡೆ. ಇದು ಮಾಮೂಲಿ ಅತ್ತೆ-ಸೊಸೆ ಜಗಳವಲ್ಲ ಬದಲಾಗಿ ತನಿಖೆಯ ಕಥೆಗಳುಳ್ಳ ಕೌಟುಂಬಿಕ ಡ್ರಾಮಾ. ಕುಟುಂಬದ ಒಬ್ಬ ಮಹಿಳೆ ಪತ್ತೇದಾರಿ ಕೂಡ ಆಗಿರುತ್ತಾಳೆ. ಈ ಬೆರಕೆ ಬಹಳ ಆಸಕ್ತಿದಾಯಕವಾಗಿ ಕಂಡುಬಂತು" ಎಂದು ತಿಳಿಸುವ ನವೀನ್ ೧೫ ಕಂತುಗಳನ್ನು ಆಗಲೇ ಪೂರೈಸಿದ್ದಾರಂತೆ. ಇದು ಸಿನೆಮಾ ಅನುಭವವನ್ನೇ ನೀಡಿದ್ದಾಗಿ ತಿಳಿಸುತ್ತಾರೆ. 
"ನಾನು ಧಾರಾವಾಹಿಗಳಿಗೆ ಸಿನೆಮಾ ಅನುಭವವನ್ನು ತಂದುಕೊಡಲು ಇಚ್ಛಿಸುತ್ತೇನೆ" ಎನ್ನುವ ಅವರು "ನನಗೆ ನಟನೆಗಿಂತಲೂ ನಿರ್ದೇಶನ ಹೆಚ್ಚಿನ ತೃಪ್ತಿ ನೀಡುತ್ತಿದೆ. ಬರವಣಿಗೆ, ಸಂಭಾಷಣೆ ಮುಂತಾದ ವಿಭಾಗಗಳಲ್ಲಿ ಕೆಲಸ ಮಾಡಿದ ಮೇಲೆ ಈಗ ನಿರ್ದೇಶನಕ್ಕೆ ಇಳಿದಿರುವುದು ಖುಷಿ ತಂದಿದೆ" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT