ಚಿರಂಜೀವಿ ಮತ್ತು ಬಾಲಕೃಷ್ಣ ಇವರಿಂದ ಟಿ ಎಸ್ ಆರ್ ಪ್ರಶಸ್ತಿ ಸ್ವೀಕರಿಸಿದ ನಿಖಿಲ್ 
ಸಿನಿಮಾ ಸುದ್ದಿ

'ಜಾಗ್ವಾರ್' ಸಿನಿಮಾಗಾಗಿ ಅತ್ಯುತ್ತಮ ಪಾದಾರ್ಪಣ ನಟ ಪ್ರಶಸ್ತಿ ಸ್ವೀಕರಿಸಿದ ನಿಖಿಲ್

'ಜಾಗ್ವಾರ್' ಸಿನೆಮಾದ ಕನ್ನಡ ಮತ್ತು ತೆಲುಗು ಅವತರಿಣಿಕೆಯಲ್ಲಿ ಪಾದಾರ್ಪಣೆ ಮಾಡಿದ ನಟ ನಿಖಿಲ್ ಕುಮಾರ್ ಅವರಿಗೆ ಅತ್ಯುತ್ತಮ ಪಾದಾರ್ಪಣ ನಟ- ಟಿ ಎಸ್ ಆರ್ (ಟಿ ಸುಬ್ರಮಣ್ಯ ರೆಡ್ಡಿ) ಪ್ರಶಸ್ತಿ ದೊರಕಿದೆ.

ಬೆಂಗಳೂರು: 'ಜಾಗ್ವಾರ್' ಸಿನೆಮಾದ ಕನ್ನಡ ಮತ್ತು ತೆಲುಗು ಅವತರಿಣಿಕೆಯಲ್ಲಿ ಪಾದಾರ್ಪಣೆ ಮಾಡಿದ ನಟ ನಿಖಿಲ್ ಕುಮಾರ್ ಅವರಿಗೆ  ಅತ್ಯುತ್ತಮ ಪಾದಾರ್ಪಣ ನಟ- ಟಿ ಎಸ್ ಆರ್ (ಟಿ ಸುಬ್ರಮಣ್ಯ ರೆಡ್ಡಿ) ಪ್ರಶಸ್ತಿ ದೊರಕಿದೆ. ಶನಿವಾರ ವೈಜಾಗ್ ನಲ್ಲಿ ನಡೆದ ಸಮಾರಂಭದಲ್ಲಿ ನಿಖಿಲ್, ತೆಲುಗು ನಟರಾದ ಚಿರಂಜೀವಿ ಮತ್ತು ಬಾಲಕೃಷ್ಣ ಅವರಿಂದ ಪ್ರಶಸ್ತಿ ಪಡೆದಿದ್ದಾರೆ. 
ಈ ಪ್ರಶಸ್ತಿ ಪಡೆದು ಸಂತಸರಾಗಿರುವ ನಿಖಿಲ್ "ನನ್ನ ಶ್ರಮವನ್ನು ಗುರುತಿಸಿರುವುದಕ್ಕೆ ನನಗೆ ನಂತಸವಾಗಿದೆ. ಕೊನೆಗೆ ಜನರೇ ಎಲ್ಲವನ್ನು ನಿರ್ಧರಿಸುವವರು" ಎಂದಿದ್ದಾರೆ. 
ತೆಲುಗಿನ ಜನಪ್ರಿಯ ನಟರೊಂದಿಗೆ ವೇದಿಕೆ ಹಂಚಿಕೊಂಡದ್ದಕ್ಕೆ ಖುಷಿಯಾಗರುವ ನಿಖಿಲ್, ವೈಜಾಗ್ ಜನ ಅವರನ್ನು ಗುರುತಿಸಿ 'ಜಾಗ್ವಾರ್'-'ಜಾಗ್ವಾರ್' ಎಂದು ಮಂತ್ರಘೋಷ ಮೊಳಗಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ನನ್ನ ಸಿನೆಮಾ ಬಿಡುಗಡೆಯ ನಂತರ ಈ ಜಾಗಕ್ಕೆ ನಾನು ಭೇಟಿ ಕೊಟ್ಟಿರಲಿಲ್ಲ. ಆದರೆ ಅವರು ನನ್ನ ಸಿನೆಮಾವನ್ನು ನೆನಪಿಸಿಕೊಂಡು ಗುರುತಿಸಿದರು ಮತ್ತು ಇದಕ್ಕೆ ನಾನು ಸಂತಸಗೊಂಡಿದ್ದೇನೆ" ಎನ್ನುತ್ತಾರೆ. 
ಚೇತನ್ ಕುಮಾರ್ ನಿರ್ದೇಶನದ ನೂತನ ಚಿತ್ರಕ್ಕೆ ನಿಖಿಲ್ ಸಿದ್ಧರಾಗುತ್ತಿದ್ದಾರೆ. "ನಾನು ಪ್ರತಿ ಸಿನೆಮಾದೊಂದಿಗೆ ಉತ್ತಮಗೊಳ್ಳಲಿದ್ದೇನೆ" ಎನ್ನುತ್ತಾರೆ ನಟ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT