ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ 
ಸಿನಿಮಾ ಸುದ್ದಿ

ಮಹಿಳೆಯರು ದೌರ್ಜನ್ಯದ ವಿರುದ್ಧ ಗಟ್ಟಿ ದನಿಯೆತ್ತಬೇಕು: ವಿಕಾಸ್ ಬಾಲ್ ವಿವಾದದ ಬಗ್ಗೆ ಕಂಗನಾ

ತಮ್ಮ 'ಕ್ವೀನ್' ಸಿನೆಮಾದ ನಿರ್ದೇಶಕ ವಿಕಾಸ್ ಬಾಲ್ ವಿರುದ್ಧ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಹಿಳೆಯರು

ಮುಂಬೈ: ತಮ್ಮ 'ಕ್ವೀನ್' ಸಿನೆಮಾದ ನಿರ್ದೇಶಕ ವಿಕಾಸ್ ಬಾಲ್ ವಿರುದ್ಧ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಹಿಳೆಯರು ತಮ್ಮ ವಿರುದ್ಧದ ದೌರ್ಜನ್ಯದ ವಿರುದ್ಧ ಧೈರ್ಯವಾಗಿ ಮಾತನಾಡಬೇಕು ಎಂದಿದ್ದಾರೆ. 
ಒಂದು ತಿಂಗಳ ಹಿಂದೆ ವರದಿಯಾದ್ದಂತೆ, ವಿಕಾಸ್ ಬಾಲ್ ಸಹ ಒಡೆತನದ ಫ್ಯಾಂಟಮ್ ಫಿಲಂಸ್ ನ ಮಹಿಳಾ ಸಿಬ್ಬಂದಿಯೊಬ್ಬರು ತಮಗಾದ ದೌರ್ಜನ್ಯಕ್ಕೆ ವಿಕಾಸ್ ಅವರನ್ನು ದೂರಿದ್ದರು. ಇದು ದೊಡ್ಡ ಚರ್ಚೆಯನ್ನು ಹುಟ್ಟಿಹಾಕಿತ್ತು. 
ಮಹಿಳಾ ಸಂಬಂಧಿ ವಿಷಯಗಳ ಬಗ್ಗೆ ಎಂದಿಗೂ ಗಟ್ಟಿಯಾಗಿ ಮಾತನಾಡುವ ಕಂಗನಾರನ್ನು, ಮಂಗಳವಾರ ಕಾರ್ಯಕ್ರಮವೊಂದರಲ್ಲಿ ವಿಕಾಸ್ ವಿರುದ್ಧದ ವಿವಾದದ ಬಗ್ಗೆ ಪ್ರಶ್ನಿಸಿದಾಗ "ಇದು ಬಹಳ ಗಂಭೀರ ವಿಷಯ. ಇಂತಹ ಪರಿಸ್ಥಿತಿಯನ್ನು ಎದುರಿಸುವವರು ಗಟ್ಟಿಯಾಗಿ ಮಾತನಾಡಬೇಕು ಎಂದಷ್ಟೇ ಹೇಳಬಲ್ಲೆ. ಹೊರಬಂದು ಮಾತನಾಡಿದ ಆ ಮಹಿಳೆ ಧೈರ್ಯಶಾಲಿ" ಎಂದಿದ್ದಾರೆ. 
"ಮಹಿಳಿಯರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಅಂಥವರನ್ನು ಮಾತನಾಡಲು ಉತ್ತೇಜಿಸಬೇಕು. ಅವರ ಕುಟುಂಬಗಳು, ಸಹೋದ್ಯಗಿಗಳು ಮತ್ತು ಸುತ್ತಮುತ್ತಲಿನ ವಾತಾವರಣ ಅವರಿಗೆ ಮುಜುಗರ ಉಂಟುಮಾಡಬಾರದು. ಇನ್ನು ಹೆಚ್ಚಿನ ಮಹಿಳೆಯರು ಹೊರಬಂದು ಇಂತಹ ವಿಷಯಗಳ ಬಗ್ಗೆ ಮಾತನಾಡಬೇಕು. ಆಗಷ್ಟೇ ಇದರ ಬಗ್ಗೆ ಹೆಚ್ಚು ಅರಿವು ಮೂಡುವುದು. ಇದು ನನ್ನ ಅನಿಸಿಕೆ" ಎಂದಿದ್ದಾರೆ. 
ವಿಕಾಸ್ ಈ ಎಲ್ಲ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. 
"ಈ ಕಥೆಗೆ ಮತ್ತೊಂದು ಬದಿ ಕೂಡ ಇರುತ್ತದೆ" ಎಂದು ಕೂಡ ಕಂಗನಾ ಹೇಳಿದ್ದು "ಇದನ್ನು ನಿರ್ಧರಿಸಲು ಅಧಿಕಾರಿಗಳು ಮತ್ತು ಜನರಿದ್ದಾರೆ. ಆದರೆ ಸರಿಯೋ ತಪ್ಪೋ ಜನ ಮಾತನಾಡಬೇಕು ಮತ್ತು ಇದರ ಬಗ್ಗೆ ಚರ್ಚಿಸಬೇಕು" ಎಂದು ಕೂಡ ಕಂಗನಾ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT