ಪ್ರೀತಮ್ ಗುಬ್ಬಿ ಮತ್ತು ನಟ ದುನಿಯಾ ವಿಜಯ್ 
ಸಿನಿಮಾ ಸುದ್ದಿ

ಪ್ರೀತಮ್ ನಿರ್ದೇಶನದ 'ಜಾನಿ ಜಾನಿ ಯೆಸ್ ಪಾಪ'ದಲ್ಲಿ ದುನಿಯಾ ವಿಜಯ್

ನಿರ್ದೇಶಕ ಪ್ರೀತಮ್ ಗುಬ್ಬಿ ಮತ್ತು ನಟ ದುನಿಯಾ ವಿಜಯ್ ಜೋಡಿಯ ಸಿನೆಮಾ 'ಜಾನಿ ಮೇರಾ ನಾಮ್' ೨೦೧೧ ರಲ್ಲಿ ಬಿಡುಗಡೆಯಾಗಿತ್ತು. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ಒಂದು ಮಟ್ಟಕ್ಕೆ ಯಶಸ್ವಿಯಾಗಿತ್ತು

ಬೆಂಗಳೂರು: ನಿರ್ದೇಶಕ ಪ್ರೀತಮ್ ಗುಬ್ಬಿ ಮತ್ತು ನಟ ದುನಿಯಾ ವಿಜಯ್ ಜೋಡಿಯ ಸಿನೆಮಾ 'ಜಾನಿ ಮೇರಾ ನಾಮ್' ೨೦೧೧ ರಲ್ಲಿ ಬಿಡುಗಡೆಯಾಗಿತ್ತು. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ಒಂದು ಮಟ್ಟಕ್ಕೆ ಯಶಸ್ವಿಯಾಗಿತ್ತು ಕೂಡ. ಇದರಲ್ಲಿ ರಮ್ಯಾ ನಾಯಕನಟಿಯಾಗಿದ್ದರು. ಈಗ ಆರುವರ್ಷಗಳ ನಂತರ ಇದರ ಎರಡನೇ ಭಾಗ 'ಜಾನಿ ಜಾನಿ ಯೆಸ್ ಪಾಪ' ನಿರ್ದೇಶಿಸಲು ಮುಂದಾಗಿದ್ದು, ಇದರಲ್ಲಿಯೂ ವಿಜಯ್ ನಾಯಕ ನಟ. ಹಾಗೆಯೇ ವಿಜಯ್ ಒಡೆತನದ 'ದುನಿಯಾ ಟಾಕೀಸ್' ಅಡಿ ಈ ಸಿನೆಮಾ ನಿರ್ಮಾಣವಾಗುತ್ತಿರುವುದು ವಿಶೇಷ. 
ಈಗ ಸ್ಕ್ರಿಪ್ಟ್ ಬರೆದು ಮುಗಿಸಿರುವ ನಿರ್ದೇಶಕ ಜೂನ್ ಅಂತ್ಯದಿಂದ ಚಿತ್ರೀಕರಣ ಪ್ರಾರಂಭಿಸಲು ನಿಶ್ಚಯಿಸಿದ್ದಾರೆ. ಹೊಸ ಪೀಳಿಗೆಗೆ ವಿಜಯ್ ಅವರನ್ನು ಹೊಸದಾಗಿ ಅರ್ಪಿಸಲಿದ್ದೇನೆ ಎನ್ನುವ ಪ್ರೀತಮ್ "ಜಾನಿ ಸಾಮಾಜಿಕ ಸೇವಾ ಕೇಂದ್ರದ ನನ್ನ ಹೀರೊ ಈಗ ಜಾನಿ.ಕಾಮ್ ಗೆ ಉನ್ನತಿ ಪಡೆಯಲಿದ್ದಾರೆ. 'ಜಾನಿ ಜಾನಿ ಯೆಸ್ ಪಾಪ'ದಲ್ಲಿ ಇನ್ನು ಹೆಚ್ಚು ಹಾಸ್ಯ ತುಂಬಿರಲಿದೆ. ಈಗ ವಿ ಹರಿಕೃಷ್ಣ ಅವರೊಂದಿಗೆ ಸಂಗೀತಕ್ಕೆ ಕೆಲಸ ಮಾಡುತ್ತಿದ್ದೇನೆ. ಈಮಧ್ಯೆ ನೆಲಮಂಗಲದಲ್ಲಿ ದೊಡ್ಡ ಸೆಟ್ ಹಾಕುವ ತಯ್ಯಾರಿ ನಡೆದಿದೆ. ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಇದ್ದು ಅಲ್ಲಿಯೇ ೫೦% ಚಿತ್ರೀಕರಣ ನಡೆಯುತ್ತದೆ" ಎನ್ನುತ್ತಾರೆ. 
ವಿಜಯ್ ಜೊತೆಗೆ ರಂಗಾಯಣ ರಘು ಮತ್ತು ಸಾಧುಕೋಕಿಲ ಕೂಡ ನಟಿಸಲಿದ್ದಾರೆ. "ಉಳಿದ ತಾರಾಗಣ shIgradallE ಅಂತಿಮಗೊಳ್ಳಲಿದೆ ಮತ್ತು ಸ್ಕ್ರಿಪ್ಟ್ ಕೆಲಸ ಸಂಪೂರ್ಣಗೊಂಡ ಮೇಲೆ ನಾಯಕನಟಿಯನ್ನು ಆಯ್ಕೆ ಮಾಡಲಿದ್ದೇವೆ" ಎನ್ನುತ್ತಾರೆ ಪ್ರೀತಮ್. 
'ಮಾಸ್ತಿಗುಡಿ' ಸಿನೆಮಾದ ಬಿಡುಗಡೆಯನ್ನು ಎದುರು ನೋಡುತ್ತಿರುವ ವಿಜಯ್, ಸದ್ಯಕ್ಕೆ 'ಕನಕ' ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ. ನಾನಾರ ತೆಲುಗು ನಟ ಎನ್ ಟಿ ಆರ್ ಅವರ 'ಲವಕುಶ'ದಲ್ಲಿ ನಟಿಸಿ, 'ಜಾನಿ ಜಾನಿ ಯೆಸ್ ಪಾಪ' ಸೆಟ್ ಸೇರಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT