ಮುಂಬೈ'ನಲ್ಲಿ ಖ್ಯಾತ ನಟ ವಿನೋದ್ ಖನ್ನಾ ಅಂತಿಮ ಸಂಸ್ಕಾರ 
ಸಿನಿಮಾ ಸುದ್ದಿ

ಮುಂಬೈ'ನಲ್ಲಿ ಖ್ಯಾತ ನಟ ವಿನೋದ್ ಖನ್ನಾ ಅಂತಿಮ ಸಂಸ್ಕಾರ

ಖ್ಯಾತ ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ ಅವರ ಅಂತಿಮ ಸಂಸ್ಕಾರವನ್ನು ಮುಂಬೈನಲ್ಲಿ ನಡೆಸಲಾಗಿದ್ದು, ಅಗಲಿದ ನಟನಿಗೆ ಗಣ್ಯಾತಿ ಗಣ್ಯರು ಅಂತಿಮ...

ನವದೆಹಲಿ: ಖ್ಯಾತ ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ ಅವರ ಅಂತಿಮ ಸಂಸ್ಕಾರವನ್ನು ಮುಂಬೈನಲ್ಲಿ ನಡೆಸಲಾಗಿದ್ದು, ಅಗಲಿದ ನಟನಿಗೆ ಗಣ್ಯಾತಿ ಗಣ್ಯರು ಅಂತಿಮ ನಮನ ಸಲ್ಲಿಸಿದರು. 
ಸಂಜೆ 5 ಗಂಟೆಗೆ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ವಿನೋದ್ ಖನ್ನಾ ಅವರ ಕುಟುಂಬಸ್ಥರು ಹಾಗೂ ಗೆಳೆಯಲು ಅಂತಿಮ ದರ್ಶನವನ್ನು ಪಡೆದುಕೊಂಡರು. 
ಅಂತಿಮ ಸಂಸ್ಕಾರದ ವೇಳೆ ಚಿತ್ರರಂಗ ಬಳಗವೇ ಸ್ಥಳದಲ್ಲಿ ನೆರೆದಿತ್ತು. ರಿಶಿ ಕಪೂರ್, ಅಮಿತಾಭ್ ಬಚ್ಚನ್, ನೀತು ಸಿಂಗ್, ರಮೇಶ್ ಸಿಪ್ಪಿ ಮತ್ತು ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ನಟ ನಟಿಯರು ಅಂತಿನ ದರ್ಶನ ಪಡೆದುಕೊಂಡರು. 
1946 ಅ.6 ರಂದು ಪಾಕಿಸ್ತಾನದ ಪೇಶಾವರ್ ಪ್ರಾಂತ್ಯದಲ್ಲಿ ಕಮಾಲಾ ಮತ್ತು ಕಿಶನ್ ಚಂದ್ ಖನ್ನಾ ದಂಪತಿಗಳ ಮಗನಾಗಿ ಜನಿಸಿದ್ದ ಖನ್ನಾ ಅವರು ಮುಂಬೈಗೆ ಬಂದು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದರು. 
1968ರಲ್ಲಿ ಸುನಿಲ್ ದತ್ ಅವರ ರಿಮೇಕ್ ಚಿತ್ರ ಅಧೂರ್ತಿ ಸುಬ್ಬರಾವ್ ನಲ್ಲಿ ಖಳನಟನಾಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಹೀಗೆ ಹಲವು ಚಿತ್ರಗಳಲ್ಲಿ ಸಹ ನಟನಾಗಿ ನಟಿಸಿದ್ದ ವಿನೋದ್ ಖನ್ನಾ ಅವರು 1971ರಲ್ಲಿ ಹಮ್ ತುಮ್ ಔರ್ ವೋ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡು ಬ್ರೇಕ್ ಪಡೆದುಕೊಂಡಿದ್ದರು. ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ನಾಯಕಿಯಾಗಿದ್ದರು. 2013ರವರೆಗೆ ಸುಮಾರು 141 ಚಿತ್ರಗಳಲ್ಲಿ ನಟಿಸಿ ಜನರ ಮನಗೆದ್ದು, ಜನಪ್ರಿಯತೆಗಳಿಸಿದ್ದರು. 
4ನೇ ಪಂಜಾಬ್ ರಾಜ್ಯದ ಗುರುದಾಸ್ ಪುರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಖನ್ನಾ ಅವರದ್ದು, 2014ರ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದರು. ಇದೀಗ ಅವರ ನಿಧನದಿಂದಾಗಿ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆ ನಡೆಯಬೇಕಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT