ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಕನ್ನಡ ಚಿತ್ರವೊಂದು ನಿರ್ಮಿಸಿದ್ದ ಈ ದಾಖಲೆಯನ್ನು ಮುರಿಯುವಲ್ಲಿ ವಿಫಲವಾದ ಬಾಹುಬಲಿ-2!

ಕಳೆದ ಏಪ್ರಿಲ್ 28ರಂದು ವಿಶ್ವಾದ್ಯಂತ ಬಿಡುಗಡೆಯಾದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ಗಳಿಕೆಯಲ್ಲಿ ವಿಶ್ವ ದಾಖಲೆ ಕಂಡಿರಬಹುದು. ಆದರೆ...

ಬೆಂಗಳೂರು: ಕಳೆದ ಏಪ್ರಿಲ್ 28ರಂದು ವಿಶ್ವಾದ್ಯಂತ ಬಿಡುಗಡೆಯಾದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ಗಳಿಕೆಯಲ್ಲಿ ವಿಶ್ವದಾಖಲೆ ಕಂಡಿರಬಹುದು. ಆದರೆ ನಮ್ಮ ಕನ್ನಡ ಚಿತ್ರವೊಂದು ನಿರ್ಮಿಸಿದ್ದ ವಿಶಿಷ್ಚ  ದಾಖಲೆ ಮುರಿಯವಲ್ಲಿ ವಿಫಲವಾಗಿದೆ.

ಹೌದು...ಖಾಸಗಿ ವೆಬ್ ಸೈಟ್ ವೊಂದು ವರದಿ ಮಾಡಿರುವಂತೆ ಕನ್ನಡದ ಚಕ್ರವರ್ತಿ ಸಿನಿಮಾ ನಿರ್ಮಿಸಿದ್ದ ಅಪೂರ್ವ ದಾಖಲೆಯನ್ನು ಬಾಹುಬಲಿ-2 ಚಿತ್ರ ಮುರಿಯಲಾಗಿಲ್ಲವಂತೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ  ಚಕ್ರವರ್ತಿ ಚಿತ್ರ ಸತತ 2 ದಿನಗಳ ರಾತ್ರಿಯೂ ಸೇರಿದಂತೆ ನಿರಂತರ ಪ್ರದರ್ಶನ ಕಂಡಿತ್ತು. ಚಿತ್ರ ವೀಕ್ಷಿಸಲು ಜನ ಅಪಾರ ಪ್ರಮಾಣದಲ್ಲಿ ಚಿತ್ರಮಂದಿರಕ್ಕೆ ಆಗಮಿಸಿದ್ದರಿಂದ ಚಿತ್ರ ಬಿಡುಗಡೆಯ ಮುನ್ನಾದಿನ ಮಧ್ಯ ರಾತ್ರಿಯೇ ಚಿತ್ರ  ಪ್ರದರ್ಶನವಾಗಿತ್ತು. ಒಂದು ಮಧ್ಯರಾತ್ರಿಯಿಂದ ಮರುದಿನ ಮಧ್ಯರಾತ್ರಿವರೆಗೆ ನಿರಂತರ ಪ್ರದರ್ಶನ ನೀಡಿದ ದಾಖಲೆಗೆ ‘ಚಕ್ರವರ್ತಿ’ ಚಿತ್ರ ಪಾತ್ರವಾಯಿತು.

ಆದರೆ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅಭಿನಯದ ಚಕ್ರವರ್ತಿ ನಿರ್ಮಿಸಿದ್ದ ಈ ದಾಖಲೆಯನ್ನು ಅಳಿಸಿ ಹಾಕಲು ಬಾಹುಬಲಿ ಚಿತ್ರಕ್ಕೆ ಸಾಧ್ಯವಾಗಿಲ್ಲ. ಚಕ್ರವರ್ತಿಯಂತೆಯೇ ಬಾಹುಬಲಿ-2 ಚಿತ್ರ ನೋಡುವುದಕ್ಕೂ ಅಪಾರ ಪ್ರಮಾಣದ  ಜನ ಕಾತುರದಿಂದ ಕಾದಿದ್ದರು. ಇದೇ ಕಾರಣಕ್ಕೆ ಚಿತ್ರತಂಡ ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಮಧ್ಯರಾತ್ರಿಯಿಂದ ಮರುದಿನ ಮಧ್ಯರಾತ್ರಿವರೆಗೆ ‘ಬಾಹುಬಲಿ-2’ ಪ್ರದರ್ಶನ ಮಾಡಲು ಮುಂದಾಗಿತ್ತು. ಆದರೆ ನಿರಂತರ  ಪ್ರದರ್ಶನದ ನಡುವೆ ಯಾವುದಾದರೊಂದು ಶೋ ಹೌಸ್ ಫುಲ್ ಆಗದಿದ್ದರೆ ಮುಜುಗರದ ಸನ್ನಿವೇಶ ಸೃಷ್ಟಿಯಾಗಬಹುದು ಎಂಬ ಕಾರಣಕ್ಕಾಗಿ 24 ತಾಸುಗಳ ನಿರಂತರ ಪ್ರದರ್ಶನದಿಂದ ‘ಬಾಹುಬಲಿ-2’ ತಂಡ ಹಿಂದೆ  ಸರಿಯಿತೆನ್ನಲಾಗಿದೆ. ಆ ಮೂಲಕ ಬಾಹುಬಲಿ ಚಿತ್ರ ಕನ್ನಡ ಚಿತ್ರ ಚಕ್ರವರ್ತಿ ನಿರ್ಮಿಸಿದ್ದ ದಾಖಲೆ ಮುರಿಯವಲ್ಲಿ ವಿಫಲವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT