ಧೃವ ಸರ್ಜಾ 
ಸಿನಿಮಾ ಸುದ್ದಿ

ಎಪಿ ಅರ್ಜುನ್ ಹಾಗೂ ಚೇತನ್ ಕುಮಾರ್ ಗೆ ಜೊತೆ ಧೃವ ಸರ್ಜಾ ಮತ್ತೊಂದು ಚಿತ್ರ!

ಧೃವ ಸರ್ಜಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಎಪಿ ಅರ್ಜುನ್ ಅವರ ನಿರ್ದೇಶನದ ಮೊದಲ ಸಿನಿಮಾದಿಂದ ಹಿಡಿದು, ಚೇತನ್ ಕುಮಾರ್ ಅವರ ಬಹದ್ದೂರ್ ಹಾಗೂ ಭರ್ಜರಿ ವರೆಗೂ ಸತತ ಯಶಸ್ಸುಗಳನ್ನು ಕಂಡಿದ್ದಾರೆ.

ಧೃವ ಸರ್ಜಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಎಪಿ ಅರ್ಜುನ್ ಅವರ ನಿರ್ದೇಶನದ ಮೊದಲ ಸಿನಿಮಾದಿಂದ ಹಿಡಿದು, ಚೇತನ್ ಕುಮಾರ್ ಅವರ ಬಹದ್ದೂರ್ ಹಾಗೂ ಭರ್ಜರಿ ವರೆಗೂ ಸತತ ಯಶಸ್ಸುಗಳನ್ನು ಕಂಡಿದ್ದಾರೆ.
ಭರ್ಜರಿ ಸಿನಿಮಾ ಶತದಿನಗಳನ್ನು ಪೂರೈಸಿರುವುದಕ್ಕೆ ಧೃವ ಸರ್ಜಾ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ಇದ್ದು ಧೃವ ಸರ್ಜಾ ಮತ್ತೊಮ್ಮೆ ಎ.ಪಿ ಅರ್ಜುನ್ ಹಾಗು ಚೇತನ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ಸಿಟಿ ಎಕ್ಸ್ ಪ್ರೆಸ್ ವರದಿ ಮೂಲಕ ತಿಳಿದುಬಂದಿದೆ. 
ಎ.ಪಿ ಅರ್ಜುನ್, ಚೇತನ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದರೆ ಮತ್ತೊಮ್ಮೆ ಇತಿಹಾಸ ನಿರ್ಮಿಸಬಹುದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಅಯೋಗ್ಯನ ಮೂಲಕ ನಿರ್ದೇಶಕನಾಗುತ್ತಿರುವ ಮಹೇಶ್ ಅವರೊಂದಿಗೂ ಧೃವ ಸರ್ಜಾ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸ್ಕ್ರಿಪ್ಟ್ ನ್ನು ಒಪ್ಪಿರುವ ಧೃವ ಸರ್ಜಾ, ಪೊಗರು ಚಿತ್ರದ ನಂತರ ಈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಶೀಘ್ರವೇ ಚಿತ್ರದ ಬಗ್ಗೆ ಮಾಹಿತಿ ಬಹಿರಂಗವಾಗಲಿದೆ. ಚಿತ್ರ ನಿರ್ಮಾಪಕರ ಪೈಕಿ ಉದಯ್ ಮೆಹ್ತಾ ಧೃವ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಧೃವ ಸರ್ಜಾ ತಮ್ಮ ಶೆಡ್ಯೂಲ್‌ ನ್ನು ನಿಗದಿಪಡಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT