ಧೃವ ಸರ್ಜಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಎಪಿ ಅರ್ಜುನ್ ಅವರ ನಿರ್ದೇಶನದ ಮೊದಲ ಸಿನಿಮಾದಿಂದ ಹಿಡಿದು, ಚೇತನ್ ಕುಮಾರ್ ಅವರ ಬಹದ್ದೂರ್ ಹಾಗೂ ಭರ್ಜರಿ ವರೆಗೂ ಸತತ ಯಶಸ್ಸುಗಳನ್ನು ಕಂಡಿದ್ದಾರೆ.
ಭರ್ಜರಿ ಸಿನಿಮಾ ಶತದಿನಗಳನ್ನು ಪೂರೈಸಿರುವುದಕ್ಕೆ ಧೃವ ಸರ್ಜಾ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ಇದ್ದು ಧೃವ ಸರ್ಜಾ ಮತ್ತೊಮ್ಮೆ ಎ.ಪಿ ಅರ್ಜುನ್ ಹಾಗು ಚೇತನ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ಸಿಟಿ ಎಕ್ಸ್ ಪ್ರೆಸ್ ವರದಿ ಮೂಲಕ ತಿಳಿದುಬಂದಿದೆ.
ಎ.ಪಿ ಅರ್ಜುನ್, ಚೇತನ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದರೆ ಮತ್ತೊಮ್ಮೆ ಇತಿಹಾಸ ನಿರ್ಮಿಸಬಹುದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಅಯೋಗ್ಯನ ಮೂಲಕ ನಿರ್ದೇಶಕನಾಗುತ್ತಿರುವ ಮಹೇಶ್ ಅವರೊಂದಿಗೂ ಧೃವ ಸರ್ಜಾ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸ್ಕ್ರಿಪ್ಟ್ ನ್ನು ಒಪ್ಪಿರುವ ಧೃವ ಸರ್ಜಾ, ಪೊಗರು ಚಿತ್ರದ ನಂತರ ಈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಶೀಘ್ರವೇ ಚಿತ್ರದ ಬಗ್ಗೆ ಮಾಹಿತಿ ಬಹಿರಂಗವಾಗಲಿದೆ. ಚಿತ್ರ ನಿರ್ಮಾಪಕರ ಪೈಕಿ ಉದಯ್ ಮೆಹ್ತಾ ಧೃವ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಧೃವ ಸರ್ಜಾ ತಮ್ಮ ಶೆಡ್ಯೂಲ್ ನ್ನು ನಿಗದಿಪಡಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos