ನಾರಾಯಣ್ ಮತ್ತು ಗಣೇಶ್ 
ಸಿನಿಮಾ ಸುದ್ದಿ

ನಟ ಗಣೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಿರ್ದೇಶಕ ಎಸ್. ನಾರಾಯಣ್

ಗೋಲ್ಡನ್ ಸ್ಟಾರ್ ಗಣೇಶ್ ಅವರು ದಾಖಲಿಸಿರುವ ಪ್ರಕರಣ ಸಂಬಂಧ ತಮಗೆ ನಿರಂತರವಾಗಿ ಸಮನ್ಸ್ ಬರುತ್ತಿರುವುದರಿಂದ ಬೇಸತ್ತು ನಿರ್ದೇಶಕ ನಾರಾಯಣ್ ...

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ದಾಖಲಿಸಿರುವ ಪ್ರಕರಣ ಸಂಬಂಧ ತಮಗೆ ನಿರಂತರವಾಗಿ ಸಮನ್ಸ್ ಬರುತ್ತಿರುವುದರಿಂದ ಬೇಸತ್ತು ನಿರ್ದೇಶಕ ನಾರಾಯಣ್ ಅವರು ಗಣೇಶ್ ವಿರುದ್ಧ ಮಾನನಷ್ಟ ನೊಟೀಸ್ ನೀಡಿದ್ದಾರೆ.

ಮೋಕ್ಷ ಅಗರಬತ್ತಿ ಕಂಪನಿ ಮತ್ತು ನಾಯಕ ನಟ ಗಣೇಶ್‌ ನಡುವಿನ ಕಾನೂನು ಹೋರಾಟ ಇದೀಗ ಗಣೇಶ್‌ ಮತ್ತು ಚಿತ್ರ ನಿರ್ದೇಶಕ ಎಸ್‌.ನಾರಾಯಣ್‌ ನಡುವೆ ಮಾನನಷ್ಟ ಮೊಕದ್ದಮೆಗೆ ದಾರಿ ಮಾಡಿಕೊಟ್ಟಿದೆ. ಅಗರಬತ್ತಿ ಜಾಹೀರಾತಿಗೆ ಸಂಬಂಧಿಸಿದಂತೆ ಗಣೇಶ್‌ ಮೋಕ್ಷ ಅಗರಬತ್ತಿ ಕಂಪೆನಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎಸ್‌.ನಾರಾಯಣ್‌ ಅವರಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.
ಚೆಲುವಿನ ಚಿತ್ರದ ಚಿತ್ರದ ಪ್ರಚಾರಕ್ಕಾಗಿ ಅಗರಬತ್ತಿ ಕಂಪನಿಯೊಂದರ ಜೊತೆಗೆ ನಾರಾಯಣ್ ಒಪ್ಪಂದ ಮಾಡಿಕೊಂಡಿದ್ದರು. ಪ್ರಚಾರದ ಸಲುವಾಗಿ ಮೂರು ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಅವಧಿ ಮುಗಿದ ಬಳಿಕವೂ ಸಂಸ್ಥೆಯು ಚಿತ್ರದ ಹೆಸರನ್ನು ಪ್ರಚಾರಕ್ಕೆ ಬಳಸಿಕೊಂಡಿದೆ.

ಅವಧಿ ಮುಗಿದರೂ, ತಮ್ಮ ಹೆಸರನ್ನು ಅಗರಬತ್ತಿಯ ಪ್ರಚಾರಕ್ಕೆ ಯಾಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಗಣೇಶ್, ಅಗರಬತ್ತಿ ಸಂಸ್ಥೆಯ ಮೇಲೆ ಕೇಸು ಹಾಕಿದ್ದಾರೆ. ಅಗರಬತ್ತಿಯವರು ನಾರಾಯಣ್‌ರವರನ್ನು ಪಾರ್ಟಿ ಮಾಡಿದ್ದರಿಂದ ನಾರಾಯಣ್ ಅವರಿಗೂ ಸಮನ್ಸ್ ಹೋಗಿದೆ. ಗಣೇಶ್ ದೂರು ದಾಖಲಿಸಿದ್ದರಿಂದಲೇ ತಮಗೆ ಸಮನ್ಸ್ ಬರುತ್ತಿದೆ. ಮಾತುಕತೆಯಿಂದ ಇದನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದ ಅವರು ಈ ವಿಷಯವಾಗಿ ಸಾಕಷ್ಟು ಮಾನಸಿಕ ಹಿಂಸೆಯಾಗಿದೆ ಎಂದು ಗಣೇಶ್ ಗೆ ನೊಟೀಸ್ ನೀಡಿದ್ದಾರಂತೆ.

ಇದರಿಂದ ಅಸಮಾಧಾನಗೊಂಡಿರುವ ನಾರಾಯಣ್‌, ಗಣೇಶ್‌ ದಾಖಲಿಸಿದ ದೂರಿನಿಂದ ತಮಗೂ ಸಮನ್ಸ್‌ ಬಂದಿದ್ದು, ಮಾನಹಾನಿಯುಂಟಾಗಿದೆ. ಹೀಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ತಮ್ಮ ವಕೀಲರ ಮೂಲಕ ನಾರಾಯಣ್ ಗಣೇಶ್ ಗೆ ನೋಟೀಸ್ ನಿಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT