ಗುರುನಂದನ್ ಮತ್ತು ಅವಂತಿಕಾ ಶೆಟ್ಟಿ 
ಸಿನಿಮಾ ಸುದ್ದಿ

'೧ಸ್ಟ್ ರ್ಯಾಂಕ್ ರಾಜು' ನಿರ್ದೇಶಕರ ಹೊಸ ಸಿನೆಮಾ 'ರಾಜು ಕನ್ನಡ ಮೀಡಿಯಮ್'

ಚೊಚ್ಚಲ ಸಿನೆಮಾ '೧ಸ್ಟ್ ರ್ಯಾಂಕ್ ರಾಜು' ನಿರ್ದೇಶಿಸಿ ಗಮನ ಸೆಳೆದ ನಿರ್ದೇಶಕ ನರೇಶ್ ಕುಮಾರ್, ಈಗ ತಮ್ಮ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಅವರಿಗೆ ಅದೃಷ್ಟ ತಂದಿದ್ದ ರಾಜು ಹೆಸರನ್ನು

ಬೆಂಗಳೂರು: ಚೊಚ್ಚಲ ಸಿನೆಮಾ '೧ಸ್ಟ್ ರ್ಯಾಂಕ್ ರಾಜು' ನಿರ್ದೇಶಿಸಿ ಗಮನ ಸೆಳೆದ ನಿರ್ದೇಶಕ ನರೇಶ್ ಕುಮಾರ್, ಈಗ ತಮ್ಮ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಅವರಿಗೆ ಅದೃಷ್ಟ ತಂದಿದ್ದ ರಾಜು ಹೆಸರನ್ನು ಉಳಿಸಿಕೊಂಡಿದ್ದು, ನೂತನ ಸಿನೆಮಾಗೆ 'ರಾಜು ಕನ್ನಡ ಮೀಡಿಯಮ್' ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ  '೧ಸ್ಟ್ ರ್ಯಾಂಕ್ ರಾಜು' ನಟ ಗುರುನಂದನ್ ಕೂಡ ಸದರಿ ಸಿನೆಮಾಗೆ ಹಿಂದಿರುಗಿದ್ದಾರೆ. 
"ಗುರುನಂದನ್ ನಟಿಸಿದ ರಾಜು ಪಾತ್ರ ಬಹಳ ಜನಪ್ರಿಯವಾಗಿತ್ತು. ಹಲವಾರು ಶೀರ್ಷಿಕೆಗಳನ್ನು ಪರಿಗಣಿಸಿದ ಮೇಲೆ 'ರಾಜು' ಹೆಸರಿಗೆ ಹಿಂದಿರುಗಲು ನಿಶ್ಚಯಿಸಿದೆವು. ಇದು ಕನ್ನಡದಲ್ಲಿ ಅತಿ ಸಾಮಾನ್ಯ ಹೆಸರು" ಎನ್ನುತ್ತಾರೆ ನಿರ್ಮಾಪಕ ಸುರೇಶ. ಇವರು 'ಶಿವಲಿಂಗ' ಸಿನೆಮಾದ ನಿರ್ಮಾಪಕ ಕೂಡ. 
'ರಂಗಿತರಂಗ'ದ ನಟಿ ಅವಂತಿಕಾ ಶೆಟ್ಟಿ 'ರಾಜು ಕನ್ನಡ ಮೀಡಿಯಮ್'ನಲ್ಲಿ ನಾಯಕ ನಟಿ. ಚಿತ್ರತಂಡ ಈಗಾಗಲೇ ೬೦% ಚಿತ್ರೀಕರಣ ಮುಗಿಸಿದ್ದು, ಉಳಿದ ಭಾಗವನ್ನು ಮಲೇಷಿಯಾ ಅಥವಾ ಥೈಲ್ಯಾಂಡ್ ನಲ್ಲಿ ಚಿತ್ರೀಕರಿಸಲು ಎದುರು ನೋಡುತ್ತಿದೆ. 
ಈಮಧ್ಯೆ ಭಾನುವಾರ ಸಿನೆಮಾದ ಟೀಸರ್ ಅನ್ನು ತಂಡ ಬಿಡುಗಡೆ ಮಾಡಲಿದೆ. 'ರಾಜು ಕನ್ನಡ ಮೀಡಿಯಮ್' ತಂಡ ಹಿಂದಿನ ಸಿನೆಮಾದ ಯಶಸ್ಸನ್ನು ಪುನರ್ ಸೃಷ್ಟಿಸಲಿದೆಯೇ? ಕಾದು ನೋಡಬೇಕು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT