'ಮಫ್ತಿ' ಸಿನೆಮಾ ಚಿತ್ರೀಕರಣದಲ್ಲಿ ಶ್ರೀಮುರಳಿ 
ಸಿನಿಮಾ ಸುದ್ದಿ

ಮಂಗಳೂರು ಬಂದರಿನಲ್ಲಿ ಶ್ರೀಮುರಳಿ 'ಮಫ್ತಿ'

ಶ್ರೀಮುರಳಿ ನಟಿಸುತ್ತಿರುವ ಮುಂದಿನ ಚಿತ್ರ 'ಮಫ್ತಿ' ಮಂಗಳೂರಿನ ಬಂದರಿನಲ್ಲಿ ಕಳೆದ ಒಂದು ವಾರದಿಂದ ಚಿತ್ರೀಕರಣಗೊಳ್ಳುತ್ತಿದೆ. ಬಂದರಿನ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿರುವ ನಟ "ನಾನು ಚಿತ್ರೀಕರಣದಲ್ಲಿ

ಬೆಂಗಳೂರು: ಶ್ರೀಮುರಳಿ ನಟಿಸುತ್ತಿರುವ ಮುಂದಿನ ಚಿತ್ರ 'ಮಫ್ತಿ' ಮಂಗಳೂರಿನ ಬಂದರಿನಲ್ಲಿ ಕಳೆದ ಒಂದು ವಾರದಿಂದ ಚಿತ್ರೀಕರಣಗೊಳ್ಳುತ್ತಿದೆ. ಬಂದರಿನ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿರುವ ನಟ "ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಅದ್ಭುತ ಪ್ರದೇಶಗಳಲ್ಲಿ ಇದು ಒಂದು.. ಮಂಗಳೂರು ಬಂದರು... ಪ್ರತಿ ಕ್ಷಣವನ್ನು ಸಂತಸದಿಂದ ಕಳೆಯುತ್ತಿದ್ದೇನೆ... ಚಿತ್ರ ತಂಡಕ್ಕೆ! #ಮುಫ್ತಿ ಚಿತ್ರೀಕರಣ ಅದ್ಭುತ" ಎಂದು ಮುರಳಿ ಟ್ವೀಟ್ ಮಾಡಿದ್ದಾರೆ. 
ಈ ಮಂಗಳೂರಿನ ಬಂದರಿನ ಹಿನ್ನಲೆಯಲ್ಲಿ ನಡೆಯುವ ಹಾಡು ನೃತದ ಮೂಲಕ ಶ್ರೀಮುರಳಿ ಅವರ ಪಾತ್ರದ ಪರಿಚಯವಾಗಲಿದೆಯಂತೆ. ಇದರ ಸ್ಟಿಲ್ ಒಂದು  ಈಗ ಲಭ್ಯವಿದ್ದು, ದೊಡ್ಡ ಹಡಗಿನ ಹಿನ್ನಲೆಯಲ್ಲಿ, ಸೇನೆಯ ಹರಿಸು ಬಣ್ಣದ ಪ್ಯಾಂಟ್ ಧರಿಸಿ ನೃತ್ಯ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ. 
"ನನ್ನ ಪರಿಚಯಾತ್ಮಕ ದೃಶ್ಯಾವಳಿಗೆ ಮೂರು-ನಾಲ್ಕು ರೀತಿಯ ಹಿನ್ನಲೆ ದೃಶ್ಯಗಳ ಅವಶ್ಯಕತೆ ಇತ್ತು. ಅದರಲ್ಲಿ ಒಂದಕ್ಕೆ ತಂಡ ಬಂದರನ್ನು ಆಯ್ಕೆ ಮಾಡಿಕೊಂಡಿತು. ಬಂದರು ಅಧಿಕಾರಿಗಳಿಂದ ಅನುಮತಿ ಪಡೆಯಲು ಇದಕ್ಕಾಗಿ ಒಂದು ತಿಂಗಳು ಹಿಡಿಯಿತು. ಅನುಮತಿ ಸಿಕ್ಕ ಕ್ಷಣದಿಂದಲೇ ನಾವು ಚಿತ್ರೀಕರಣ ಪ್ರಾರಂಭಿಸಿದೆವು. ಅಧಿಕಾರಿಗಳು ನಮ್ಮ ಚಿತ್ರೀಕರಣಕ್ಕೆ ಬಹಳ ಸಹಕರಿಸಿದರು. ಅವರಿಗೆ ಧನ್ಯವಾದಗಳು" ಎಂದು ತಿಳಿಸುತ್ತಾರೆ ಶ್ರೀಮುರಳಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT