ಚನ್ನೇಗೌಡ/ಗಡ್ದಪ್ಪ 
ಸಿನಿಮಾ ಸುದ್ದಿ

'ತಿಥಿ' ನಟರ ಮತ್ತೊಂದು ಸಿನೆಮಾ 'ಯೇನ್ ನಿನ್ ಪ್ರಾಬ್ಲಮ್ಮು'; ಈ ವಾರ ಬಿಡುಗಡೆ

ಬಹುಷಃ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ೯೮ ವರ್ಷದ ಸಿಂಗ್ರಿ ಗೌಡ ಮತ್ತು ೮೦ ವರ್ಷದ ಚನ್ನೇ ಗೌಡ ಬಹು ಬೇಡಿಕೆಯ ನಟರು. ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದಲ್ಲಿ ಕ್ರಮವಾಗಿ ಸೆಂಚ್ಯುರಿ ಗೌಡ ಮತ್ತು

ಬೆಂಗಳೂರು: ಬಹುಷಃ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ೯೮ ವರ್ಷದ ಸಿಂಗ್ರಿ ಗೌಡ ಮತ್ತು ೮೦ ವರ್ಷದ ಚನ್ನೇಗೌಡ ಬಹು ಬೇಡಿಕೆಯ ನಟರು. ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದಲ್ಲಿ ಕ್ರಮವಾಗಿ ಸೆಂಚ್ಯುರಿ ಗೌಡ ಮತ್ತು ಗಡ್ದಪ್ಪ ಪಾತ್ರ ನಿರ್ವಹಿಸಿದ್ದ ಈ ನಟರು ಈ ಪಾತ್ರಗಳ ಹೆಸರುಗಳಿಂದಲೇ ಕನ್ನಡ ನಾಡಿನಲ್ಲಿ ಚಿರಪರಿಚಿತ. ಈ ಜೋಡಿಯ ಜೊತೆ ಮತ್ತೊಬ್ಬ ಯುವ ನಟ ಅಭಿಷೇಕ್ ಕೂಡ ಸೇರಿದ್ದಾರೆ. 
ಕನ್ನಡ ಸಿನೆಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬ ಕೊರಗಿನ ಮಧ್ಯೆಯೂ ಈ ತ್ರಿವಳಿ ನಟರು ನಟಿಸರುವ 'ಯೇನ್ ನಿನ್ ಪ್ರಾಬ್ಲಮ್ಮು' ಚಿತ್ರ, ಈ ವಾರ ಬಿಡುಗಡೆಯಾಗುತ್ತಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿಯೇ ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. 
ಈ ಸಿನೆಮಾ ವಿತರಣೆ ಮಾಡುತ್ತಿರುವ ಜಾಕ್ ಮಂಜು, ಸಿನಿಮಾಮಂದಿರಗಳ ಮಾಲೀಕರು ಈ ಚಿತ್ರಪ್ರದರ್ಶನಕ್ಕೆ ಅಪಾರ ಬೇಡಿಕೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. "ಬಹುಷಃ ಪ್ರೇಕ್ಷಕರಿಗೆ ಗಡ್ದಪ್ಪ ಮತ್ತು ಸೆಂಚ್ಯುರಿ ಗೌಡ ಸಂತೃಪ್ತಿಯಾಗಿ ಸಿಕ್ಕಿಲ್ಲ. ಈ ಇಬ್ಬರ ಸ್ವಾಭಾವಿಕ ನಟನೆಯನ್ನು ಜನ ಅತೀವವಾಗಿ ಇಷ್ಟಪಡುತ್ತಿದ್ದಾರೆ" ಎನ್ನುತ್ತಾರೆ. 
'ಯೇನ್ ನಿನ್ ಪ್ರಾಬ್ಲಮ್ಮು' ಸಿನೆಮಾವನ್ನು ಗಾಳಿ ಲಕ್ಕಿ ನಿರ್ದೇಶಿಸಿದ್ದು, ಸೆಂಥಿಲ್ ಸಿನೆಮ್ಯಾಟೋಗ್ರಾಫರ್. ನವೀನ್ ಸಜ್ಜು ಈ ಸಿನೆಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT