ನಟಿ ದೀಪಿಕಾ ಪಡುಕೋಣೆ 
ಸಿನಿಮಾ ಸುದ್ದಿ

'ಪದ್ಮಾವತಿ'ಯಲ್ಲಿ ಇತಿಹಾಸ ತಿರುಚಿಲ್ಲ: ದೀಪಿಕಾ ಪಡುಕೋಣೆ

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಮುಂದಿನ ಚಿತ್ರ 'ಪದ್ಮಾವತಿ' ಸಿನೆಮಾ ಸೆಟ್ ನಲ್ಲಿ ನಿರ್ದೇಶಕರ ಮೇಲೆ ನಡೆದಿರುವ ಹಲ್ಲೆಯಿಂದ ತೀವ್ರ ದುಃಖವಾಗಿದೆ ಮತ್ತು ನೋವಾಗಿದೆ ಎಂದಿರುವ ಪದ್ಮಾವತಿ

ಮುಂಬೈ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಮುಂದಿನ ಚಿತ್ರ 'ಪದ್ಮಾವತಿ' ಸಿನೆಮಾ ಸೆಟ್ ನಲ್ಲಿ ನಿರ್ದೇಶಕರ ಮೇಲೆ ನಡೆದಿರುವ ಹಲ್ಲೆಯಿಂದ ತೀವ್ರ ದುಃಖವಾಗಿದೆ ಮತ್ತು ನೋವಾಗಿದೆ ಎಂದಿರುವ ಪದ್ಮಾವತಿ ಪಾತ್ರ ಪೋಷಿಸುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಿನೆಮಾದಲ್ಲಿ ಇತಿಹಾಸವನ್ನು ತಿರುಚಲಾಗಿಲ್ಲ ಎಂದಿದ್ದಾರೆ. 
ರಜಪೂತ್ ಸಂಸ್ಥೆ, ಶ್ರೀ ರಜಪೂತ್ ಕರ್ನಿ ಸೇನಾದ ಕಾರ್ಯಕರ್ತರು ಶುಕ್ರವಾರ ಜೈಪುರದಲ್ಲಿ ಚಿತ್ರೀಕರಣ ನಡೆಯುವಾಗ ಭನ್ಸಾಲಿ ಮೇಲೆ ದಾಳಿ ಮಾಡಿ, ಕಪಾಳಕ್ಕೆ ಹೊಡೆದು ಅವರ ಬಟ್ಟೆಯನ್ನು ಹರಿದು ಹಲ್ಲೆ ಮಾಡಿದ್ದರು. 
"ನಾನು ಆಘಾತಕಾರಿ ಸ್ಥಿತಿಯಲ್ಲಿದ್ದೇನೆ! ನೆನ್ನೆಯ ಘಟನೆಯಿಂದ ತೀವ್ರ ದುಃಖವಾಗಿದೆ ಮತ್ತು ನೋವಾಗಿದೆ! ಪದ್ಮಾವತಿಗೆ ಸಂಬಂಧಿಸಿದಂತೆ ಇತಿಹಾಸವನ್ನು ತಿರುಚಲಾಗಿಲ್ಲ ಎಂದು ನಾನು ಭರವಸೆ ನೀಡಬಲ್ಲೆ" ಎಂದು ದೀಪಿಕಾ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. 
"ನಮ್ಮ ಒಂದೇ ಗುರಿ ಎಂದರೆ ಧೈರ್ಯವಂತ ಮತ್ತು ಶಕ್ತಿಯುತ ಮಹಿಳೆಯ ಕಥೆಯನ್ನು ಮೂಲದಲ್ಲಿರುವಂತೆಯೇ ಜಗತ್ತಿಗೆ ಹೇಳುವುದು" ಎಂದು ಕೂಡ ಅವರು ಬರೆದಿದ್ದಾರೆ. 
ಈ ಸಿನೆಮಾದಲ್ಲಿ ದೀಪಿಕಾ ಜೊತೆಗೆ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ನಟಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT