ಸಿನಿಮಾ ಸುದ್ದಿ

ಹೀರೊ ಆಗಿ ಪಾದಾರ್ಪಣೆ ಮಾಡಲಿರುವ ರ್ಯಾಪರ್ ಚಂದನ್ ಶೆಟ್ಟಿ

Guruprasad Narayana
ಬೆಂಗಳೂರು: ತಮ್ಮ ರ್ಯಾಪ್ ಶೈಲಿಯ ಹಾಡುಗಳ ಮೂಲಕ ಜನರ ಗಮನ ಸೆಳೆದಿದ್ದ ರ್ಯಾಪರ್ ಚಂದನ್ ಶೆಟ್ಟಿ ಈಗ 'ವಿಚಿತ್ರ ಪ್ರೇಮ ಕಥೆ' ಸಿನೆಮಾದಲ್ಲಿ ನಾಯಕನಟನಾಗಲಿದ್ದಾರೆ. ಈ ಹಿಂದೆ ಗಣೇಶ್ ಅವರ 'ಸಂಗಮ' ಮತ್ತು ಅಜಯ್ ರಾವ್ ಅವರ 'ಜೈ ಭಜರಂಗ ಬಲಿ' ಸಿನೆಮಾಗಳಲ್ಲಿ ತೊಡಗಿಸಿಕೊಂಡಿದ್ದ ನಿರ್ದೇಶಕ ರವಿವರ್ಮ, ಚಂದನ್ ಅವರ ಚೊಚ್ಚಲ ನಿರ್ದೇಶನವನ್ನು ನಿರ್ದೇಶಿಸಲಿದ್ದಾರೆ. 
ಚಂದನ್ ತಿಳಿಸುವಂತೆ ರವಿವರ್ಮ ನಿರ್ದೇಶಕನಾಗುವ ಮೊದಲು ೪೦೦ ಸಿನೆಮಾಗಳ ಸಂಗೀತ ನಿರ್ದೇಶನಕ್ಕೆ ಸಾಥ್ ನೀಡುತ್ತಿದ್ದರಂತೆ. "ಹೀಗೆ ನಮ್ಮಿಬ್ಬರ ಸಂಬಂಧ ಬೆಳೆದದ್ದು" ಎನ್ನುವ ಚಂದನ್ "ನಿರ್ದೇಶಕರ ಪುತ್ರ ತಮ್ಮ ಸಂಗೀತದ ದೊಡ್ಡ ಅಭಿಮಾನಿ" ಎನ್ನುತ್ತಾರೆ.
"ನನ್ನ ವಿಡಿಯೋ ಆಲ್ಬಮ್ ಗಮನಿಸಿ ನನ್ನ ನಟನೆಯ ಬಗ್ಗೆ ರವಿಗೆ ಭರವಸೆ ಮೂಡಿತ್ತು ಮತ್ತು ಅವರ ಪಾತ್ರಕ್ಕೆ ನಾನು ನ್ಯಾಯ ಒದಗಿಸಬಲ್ಲೆ ಎಂದೆನಿಸಿತ್ತು" ಎನ್ನುತ್ತಾರೆ ಚಂದನ್. 
ಗುಬ್ಬಿ ವೀರಣ್ಣ ಪ್ರೊಡಕ್ಷನ್ ಅಡಿ 'ವಿಚಿತ್ರ ಪ್ರೇಮ ಕಥೆ' ಮೂಡಿ ಬರಲಿದೆ. ಈ ಸಿನೆಮಾಗೆ ಚಂದನ್ ಒಂದು ಹಾಡಿಗೆ ಸಂಗೀತ ನೀಡಿ, ಅದನ್ನು ಹಾಡಲಿದ್ದಾರೆ ಕೂಡ. ಆರ್ ಪಿ ಪಟ್ಟನಾಯಕ್ ಉಳಿದ ಭಾಗಕ್ಕೆ ಸಂಗೀತ ನೀಡಲಿದ್ದಾರೆ.
ಕಳೆದ ತಿಂಗಳು ಸಿನೆಮಾದ ಮುಹೂರ್ತ ನೆರವೇರಿದ್ದು, ಜುಲೈ ೧೨ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನೆಮಾದಲ್ಲಿ ನಿಷ್ವಿಕ ನಾಯ್ಡು ನಾಯಕ ನಟಿ ಮತ್ತು ಜಗದೀಶ್ ವಾಲಿ ಸಿನೆಮ್ಯಾಟೋಗ್ರಾಫರ್.
SCROLL FOR NEXT