ಒಂದು ಮೊಟ್ಟೆಯ ಕಥೆ ಸೆಟ್ ನಲ್ಲಿನ ಒಂದು ಫೋಟೋ 
ಸಿನಿಮಾ ಸುದ್ದಿ

'ಒಂದು ಮೊಟ್ಟೆಯ ಕಥೆ': ನಕ್ಕು ನಲಿಸಲಿರುವ ನೋವಿನ ವ್ಯಥೆ

ರಾಜ್ ಬಿ ಶೆಟ್ಟಿ ಬರೆದು ನಿರ್ದೇಶಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಈ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನೆಮಾ ಮೂಲಕ ತಮ್ಮ ಜೀವನವನ್ನು

ಬೆಂಗಳೂರು: ರಾಜ್ ಬಿ ಶೆಟ್ಟಿ ಬರೆದು ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ನಟಿಸಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಈ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನೆಮಾ ಮೂಲಕ ತಮ್ಮ ಜೀವನವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎನ್ನುವ ರಾಜ್, ಈ ಸಿನೆಮಾ ಮಾಡಲು ಸಿಕ್ಕ ಸ್ಫೂರ್ತಿ ಮತ್ತು ಈ ಸಿನೆಮಾವನ್ನು ಜಾಗತಿಕ ಪರ್ಯಟನ ಮಾಡಿಸುತ್ತಿರುವ ನಿರ್ದೇಶಕ ಪವನ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ. 
ಸಿನೆಮಾಗಳು ಜೀವನವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತವೆ ಎನ್ನುವ ರಾಜ್ ಈ ಹಿಂದೆ ರೇಡಿಯೋ ಜಾಕಿ ಆಗಿದ್ದವರು. "ಜೀವನ ನಮ್ಮ ಹಿಡಿತಕ್ಕೆ ಸಿಗಲು ನಮ್ಮ ದೌರ್ಬಲ್ಯವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದನ್ನು ಹಾಗೆಯೇ ಒಪ್ಪಿಕೊಳ್ಳಬೇಕು" ಎನ್ನುವ ಅವರು "ಆದುದರಿಂದಲೇ ನನ್ನ ಬೋಳು ತಲೆಯ ಬಗ್ಗೆ ನನಗೆ ನಾಚಿಕೆಯಿಲ್ಲ. ಅದರ ಬಗ್ಗೆ ಹಾಸ್ಯ ಮಾಡಿಕೊಂಡು ನಗಬಲ್ಲೆ" ಎನ್ನುತ್ತಾರೆ. 
ಈ ಸಿನೆಮಾ ಮೂಲಕ ಯಾವುದಾದರೂ ಸಂದೇಶ ನೀಡುತ್ತಿದ್ದೀರಾ ಎಂಬ ಪ್ರಶ್ನೆಗೆ "ನಾನು ಬೋಧಕನಲ್ಲ. ನನಗೆ ಮನರಂಜನೆ ನೀಡುವುದಕ್ಕೆ ಇಷ್ಟ" ಎನ್ನುತ್ತಾರೆ. 
"ಬೋಳು ತಲೆಗಿಂತಲೂ, ಸೌಂದರ್ಯ ಮತ್ತು ಜೀವನದ ಬಗ್ಗೆ ಹೆಚ್ಚು ಮಾತನಾಡಿದ್ದೇನೆ. ಈ ಸಿನೆಮಾ ಪ್ರಾರಂಭಿಸಿದಾಗ ಇದರ ಪ್ರಮುಖ ಪಾತ್ರ ಜನಾರ್ಧನನಿಗಿದ್ದ ಸಂದೇಹಗಳು ನನಗು ಇದ್ದವು. ಅವರ ಗ್ರಹಿಕೆಯಿಂದ ನಾನು ಜೀವನ ನೋಡಲು ಪ್ರಾರಂಭಿಸಿದೆ. ಆಗ ನನ್ನ ಜೀವನ ಅರ್ಥ ಮಾಡಿಕೊಳ್ಳುವುದು ಸುಲಭವಾಯಿತು" ಎನ್ನುತ್ತಾರೆ. 
ಈ ಸಿನೆಮಾ ಮಾಡುವುದಕ್ಕೂ ಮುಂಚಿತವಾಗಿ ಹಲವು ಕಿರುಚಿತ್ರಗಳನ್ನು ಮಾಡಿದ್ದಾಗಿ ನೆನಪಿಸಿಕೊಳ್ಳುವ ರಾಜ್ "'ಒಂದು ಮೊಟ್ಟೆಯ ಕಥೆ' ನನ್ನ ಮೊದಲ ಸಿನೆಮಾ ಆಗಲಿದೆ ಎಂದು ನಾನೆಂದಿಗೂ ಎಣಿಸಿರಲಿಲ್ಲ. ಇದಕ್ಕೂ ಮುಂಚೆ ಮೂರು ಸ್ಕ್ರಿಪ್ಟ್ ಗಳನ್ನು ಬರೆದಿದ್ದೆ. ಆದರೆ ಅವುಗಳು ಸಿನೆಮಾ ಆಗಲಿಲ್ಲ" ಎನ್ನುತ್ತಾರೆ.
ಸಿನೆಮಾವನ್ನು ಈಗ ಅರ್ಪಿಸುತ್ತಿರುವ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ನಿರ್ದೇಶಕ ಪವನ್ ಕುಮಾರ್ ಅವರಿಗೆ ಧನ್ಯವಾದ ತಿಳಿಸುವ ರಾಜ್ "ಇದನ್ನು ಪವನ್ ಅವರಿಗೆ ತೋರಿಸಿದಾಗ ಅವರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT