ದಂಡುಪಾಳ್ಯ 2 
ಸಿನಿಮಾ ಸುದ್ದಿ

ದಂಡುಪಾಳ್ಯ 2 ಚಿತ್ರದಲ್ಲಿ ಕ್ರೈಂ ಇಲ್ಲ, ಮುಗ್ಧತೆ ಮತ್ತು ನಾಟಕ ಮಾತ್ರ: ಶ್ರೀನಿವಾಸ್ ರಾಜು

ನಿರ್ದೇಶಕ ಶ್ರೀನಿವಾಸ್ ರಾಜು ಅವರು ನಿರ್ದೇಶಿಸಿದ್ದ ಕ್ರೈಂ ಚಿತ್ರ ದಂಡುಪಾಳ್ಯ ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ದಂಡುಪಾಳ್ಯದ 2 ಚಿತ್ರ ನಾಳೆ ತೆರೆ ಕಾಣುತ್ತಿದೆ...

ನಿರ್ದೇಶಕ ಶ್ರೀನಿವಾಸ್ ರಾಜು ಅವರು ನಿರ್ದೇಶಿಸಿದ್ದ ಕ್ರೈಂ ಚಿತ್ರ ದಂಡುಪಾಳ್ಯ ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ದಂಡುಪಾಳ್ಯದ 2 ಚಿತ್ರ ನಾಳೆ ತೆರೆ ಕಾಣುತ್ತಿದೆ. 
ಇನ್ನು ಚಿತ್ರದ ಕುರಿತಂತೆ ಮಾತನಾಡಿರುವ ಶ್ರೀನಿವಾಸ್ ರಾಜು ಅವರು ದಂಡುಪಾಳ್ಯ ಮೊದಲ ಚಿತ್ರದಲ್ಲಿದ್ದಂತೆ ಬೀಭತ್ಸ್ಯ ರೀತಿಯ ಕೊಲೆಗಳ ದೃಶ್ಯಗಳು ದಂಡುಪಾಳ್ಯ 2 ಚಿತ್ರದಲ್ಲಿ ಇರುವುದಿಲ್ಲ. ಇಲ್ಲಿ ಆರೋಪಿಗಳ ಮುಗ್ಧತೆ ಮತ್ತು ನಾಟಕದ ಕುರಿತು ಚಿತ್ರ ಮೂಡಿಬಂದಿದೆ ಎಂದು ಹೇಳಿದ್ದಾರೆ. 
ದಂಡುಪಾಳ್ಯ 2 ಚಿತ್ರ ದಂಡುಪಾಳ್ಯ ಮುಂದುವರೆದ ಭಾಗ 3ಕ್ಕೆ ಏಣಿಯಂತಾಗಲಿದೆ. ದಂಡುಪಾಳ್ಯ 2 ಚಿತ್ರದಲ್ಲಿ ಗ್ಯಾಂಗ್ ಪೊಲೀಸರಿಗೆ ಸಿಕ್ಕಿ ಜೈಲಿನಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದೆ. ಚಿತ್ರಕ್ಕೆ ಸ್ಥಳೀಯ ಕಲಾವಿದರನ್ನೇ ಆಯ್ಕೆ ಮಾಡಲಾಗಿದ್ದು ಪೂಜಾ ಗಾಂಧಿ, ಶೃತಿ, ಸಂಜನ, ಕರಿ ಸುಬ್ಬು, ರವಿ ಕಾಳೆ, ಡ್ಯಾನಿ, ಜಯದೇವ್, ಮುನಿ ಮತ್ತು ಯತಿರಾಜ್ ಅಭಿನಯಿಸಿದ್ದಾರೆ. ಇನ್ನು ಮುಖ್ಯ ಭೂಮಿಕೆಯಲ್ಲಿರುವ ಮಕರಂದ್ ದೇಶಪಾಂಡೆ ಅವರು ಮಾತ್ರ ಹೊರಗಿನಿಂದ ಬಂದವರು ಎಂದು ರಾಜು ಹೇಳಿದ್ದಾರೆ. 
ದಂಡುಪಾಳ್ಯ ಗ್ಯಾಂಗ್ ಅನ್ನು ಯಾರು ಸಹ ನೋಡಿರಲಿಕ್ಕೆ ಸಾಧ್ಯವಿಲ್ಲ. ದಂಡುಪಾಳ್ಯ ಗ್ಯಾಂಗ್ ನ ಮುಖಂಡನನ್ನು ನಾನು ಭೇಟಿ ಮಾಡಿ ಚರ್ಚಿಸಿದೆ. ಆಗ ಹೊಸ ಮುಖದ ಶೋಧದಲ್ಲಿದೆ. ಜತೆಗೆ ಇಲ್ಲಿಯವರೆಗೂ ವಿಲನ್ ಭಿಕ್ಷುಕನಾಗಿ ಕಾಣಿಸಿಕೊಳ್ಳಲ ಪಾತ್ರಧಾರಿಗಾಗಿ ಹುಡುಕುತ್ತಿದ್ದಾಗ ಮಕರಂದ್ ದೇಶಪಾಂಡೆ ಅವರು ಸಿಕ್ಕರು ಎಂದು ಶ್ರೀನಿವಾಸ್ ರಾಜು ಕಲಾವಿದರ ಅನ್ವೇಷಣೆ ಕುರಿತಂತೆ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT