ಸಂಯುಕ್ತಾ ಹೆಗ್ಡೆ ಮತ್ತು ಪ್ರಭು ಮುಂಡ್ಕೂರ್ 
ಸಿನಿಮಾ ಸುದ್ದಿ

ಶ್ರೀನಾಗ್ ನಿರ್ದೇಶನದ ಸಿನಿಮಾದಲ್ಲಿ ಸಂಯುಕ್ತ ಹೆಗ್ಡೆ ಮೂಕಿ!

ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ ಶೀರ್ಷಿಕೆಯ ಸಿನಿಮಾಗೆ ತಮಿಳು ಸಿನಿಮರಂಗದ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಟಾಲಿವುಡ್ ನಲ್ಲಿ ಹೆಸರುವಾಸಿಯಾಗಿ ನಿತ್ಯಾ ಜೊತೆ ಸತ್ಯ ಸಿನಿಮಾ ...

ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿರುವ ಸಂಯುಕ್ತಾ ಹೆಗ್ಡೆ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಂಯುಕ್ತಾ ಮೂರನೇ ಪ್ರಾಜೆಕ್ಟ್ ಗೆ ಸಿದ್ಧರಾಗುತ್ತಿದ್ದಾರೆ.
ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ ಶೀರ್ಷಿಕೆಯ ಸಿನಿಮಾಗೆ ತಮಿಳು ಸಿನಿಮರಂಗದ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಟಾಲಿವುಡ್ ನಲ್ಲಿ ಹೆಸರುವಾಸಿಯಾಗಿ ನಿತ್ಯಾ ಜೊತೆ ಸತ್ಯ ಸಿನಿಮಾ ನಿರ್ದೇಶಿಸಿರುವ ಶ್ರೀನಾಗ್ ಒಮ್ಮೆ ನಿಶಬ್ದ ಒಮ್ಮೆ ಯುದ್ದ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ತಮ್ಮ ಮುಂದಿನ ಚಿತ್ರದ ಬಗ್ಗೆ ಸಂಯುಕ್ತ ಎಲ್ಲಿಯೂ ಮಾತನಾಡಿಲ್ಲ, ತಮ್ಮ ಪಾತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟು ಕೊಂಡಿದ್ದಾರೆ ಎನ್ನಲಾಗಿದೆ, ಇನ್ನೂ ಈ ಸಿನಿಮಾದಲ್ಲಿ ಆಕೆ ಮೂಕಿ ಪಾತ್ರದಲ್ಲಿ ನಟಿಸಲಿದ್ದಾರೆ. 
ತಾವು ಈ ಹಿಂದೆ ನಟಿಸಿರುವ ಎರಡು ಸಿನಿಮಾಗಳಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ನಟಿಸಿರುವ ಸಂಯುಕ್ತಾಗೆ ಈ ಪಾತ್ರ ಸ್ವಲ್ಪ ಕಷ್ಟಕರವೆನಿಸಬಹುದು ಎಂದು ಮೂಲಗಳು ತಿಳಿಸಿವೆ.
ಒಮ್ಮೆ ನಿಶಬ್ದ ಒಮ್ಮೆ ಯುದ್ದ ಸಿನಿಮಾ ಮತ್ತೊಂದು ಹೊಸ ಮುಖವನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲಿದೆ, ಸಂಯುಕ್ತಾ ಹಗ್ಡೆ ಜೊತೆ ಪ್ರಭು ಮುಂದ್ಕರ್ ನಟಿಸುತ್ತಿದ್ದಾರೆ. ಊರ್ವಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪ್ರಭು ತಮ್ಮ ಮುಂದಿನ ಚಿತ್ರ ಡಬಲ್ ಎಂಜಿನ್ ಬಿಡುಗಡೆಗೆ ಕಾಯುತ್ತಿದ್ದಾರೆ. 
ಸಿನಿಮಾ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ, ಆಗಸ್ಟ್ ನಲ್ಲಿ ಸಿನಿಮಾದ ಮೂಹೂರ್ಥ ನಡೆಯುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT