ನಟಿ ಮಾನ್ವಿತಾ ಹರೀಶ್ 
ಸಿನಿಮಾ ಸುದ್ದಿ

'ತಾರಕಾಸುರ'ದಲ್ಲಿ ವೈಭವ್ ಗೆ ಮಾನ್ವಿತಾ ಹರೀಶ್ ನಾಯಕಿ

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನಕ 'ತಾರಕಾಸುರ' ಸಿನೆಮಾಗೆ ನಾಯಕನಟಿಯ ಆಯ್ಕೆ ಅಂತಿಮವಾಗಿದೆ. ಕೆಂಡಸಂಪಿಗೆ ನಟಿ ಮಾನ್ವಿತಾ ಹರೀಶ್ ನಾಯಕ ನಟ ವೈಭವ್ ಎದುರು...

ಬೆಂಗಳೂರು: ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನಕ 'ತಾರಕಾಸುರ' ಸಿನೆಮಾಗೆ ನಾಯಕನಟಿಯ ಆಯ್ಕೆ ಅಂತಿಮವಾಗಿದೆ. 'ಕೆಂಡಸಂಪಿಗೆ' ನಟಿ ಮಾನ್ವಿತಾ ಹರೀಶ್ ನಾಯಕ ನಟ ವೈಭವ್ ಎದುರು ಮೊದಲ ಬಾರಿಗೆ ನಟಿಸಲಿದ್ದಾರೆ. 
ಈಗ ನಿರ್ಮಾಣ ಸಂಸ್ಥೆ ಮತ್ತು ನಾಯಕನಟಿಯ ನಡುವೆ ಅಧಿಕೃತ ಒಪ್ಪಂದ ಆಗಿದ್ದು, ಶೀಘ್ರದಲ್ಲಿಯೇ ಘೋಷಣೆಯಾಗಲಿದೆ ಎನ್ನುತ್ತವೆ ಮೂಲಗಳು. 
ಈ ಸುದ್ದಿಯನ್ನು ಧೃಢೀಕರಿಸಿರುವ ನಿರ್ದೇಶಕ ಬಂಡಿಯಪ್ಪ "ಮಾನ್ವಿತಾ ಜೂನ್ ೨೫ ರಂದು 'ತಾರಕಾಸುರ' ಸೆಟ್ ಸೇರಲಿದ್ದಾರೆ"  ಎಂದಿದ್ದಾರೆ.
ನಟಿಗೆ ಈ ಸಿನೆಮಾದ ಪಾತ್ರದಲ್ಲಿ ಎರಡು ಛಾಯೆಗಳು ಇರಲಿವೆಯಂತೆ. "ಮಾನ್ವಿತಾ ತಂಡ ಸೇರಿದ ಮೇಲೆ ಹೆಚ್ಚಿನ ವಿವರಗಳನ್ನು ತಿಳಿಸಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ. 
ನರಸಿಂಹಲು ನಿರ್ಮಿಸುತ್ತಿರುವ ಈ ಸಿನೆಮಾಗೆ ಧರ್ಮ ವಿಶ್ ಸಂಗೀತ ನೀಡುತ್ತಿದ್ದು, ಕುಮಾರ್ ಗೌಡ ಅವರ ಛಾಯಾಗ್ರಹಣ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT