ಸಿನಿಮಾ ಸುದ್ದಿ

'ವೀಕೆಂಡ್ ವಿತ್ ರಮೇಶ್' ನನ್ನ ನೆನಪು ಹಸಿರಾಗಿಸಿತು: ಸಿಎಂ ಸಿದ್ದರಾಮಯ್ಯ ಟ್ವೀಟ್

Lingaraj Badiger
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾಧಕರ ಕುರ್ಚಿಯಲ್ಲಿ ಕುಳಿತು ನಾಡಿನ ಜನತೆಯ ಮುಂದೆ ತಮ್ಮ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.
ಈ ಸಂಬಂಧ ನಿನ್ನೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿ ಸಿಎಂ, ತಾವು ಸಾಗಿ ಬಂದ ರಾಜಕೀಯ ಹಾದಿ, ತಮ್ಮ ಬಾಲ್ಯ ಮತ್ತು ಶಾಲಾ ಕಾಲೇಜ್ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ತಮ್ಮ ಹಿರಿಯ ಪುತ್ರ ರಾಕೇಶ್ ನನ್ನು ನೆನೆದು ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆಯಂತೆ.
ಇಂದು ಈ ಕುರಿತು ಟ್ವೀಟ್ ಮಾಡಿರುವ ಸಿಎಂ ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ನನ್ನ ನೆನಪನ್ನು ಹಸಿರಾಗಿಸಿತು. ಸಾಗಿ ಬಂದ ಹಾದಿಯನ್ನು ಮರಳಿ ನೋಡುವ ಅವಕಾಶವಾಯಿತು. ಧನ್ಯವಾದ ಜೀ ಕನ್ನಡ ಹಾಗೂ @Ramesh_aravind ಎಂದಿದ್ದಾರೆ.
SCROLL FOR NEXT