ಶಾರುಖ್ ಖಾನ್ 
ಸಿನಿಮಾ ಸುದ್ದಿ

25 ವರ್ಷ ಪ್ರೀತಿಯಿಂದ ನನ್ನನ್ನು ಸಹಿಸಿಕೊಂಡ ಜನಕ್ಕೆ ಧನ್ಯವಾದ: ಶಾರುಖ್ ಖಾನ್

25 ವರ್ಷಗಳ ಹಿಂದೆ ದಿವಾನಾ ಸಿನಿಮಾದ ಮೂಲಕ ಮ್ಯಾಜಿಕ್ ಮಾಡಿ,ಸೂಪರ್ ಸ್ಟಾರ್ ಪಟ್ಟ ಪಡೆದುಕೊಂಡ ಬಾಲಿವುಡ್ ಬಾದ್ ಶಾ ಶಾರುಖ್...

ಮುಂಬಯಿ: 25 ವರ್ಷಗಳ ಹಿಂದೆ ದಿವಾನಾ ಸಿನಿಮಾದ ಮೂಲಕ ಮ್ಯಾಜಿಕ್ ಮಾಡಿ,ಸೂಪರ್ ಸ್ಟಾರ್ ಪಟ್ಟ ಪಡೆದುಕೊಂಡ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮುಂಬಯಿಯ 'ಮನ್ನತ್' ನಿವಾಸದೆದುರು ಈದ್ ಅಂಗವಾಗಿ ಸೋಮವಾರ ಸಾವಿರಾರು ಅಭಿಮಾನಿಗಳು ನೆರೆದಿದ್ದರು.
ಅಭಿಮಾನಿಗಳ ಪ್ರೀತಿಯೇ ತಮಗೆ ಬಹುದೊಡ್ಡ ಪ್ರೇರೇಪಣೆ ಎಂದು ಶಾರುಖ್ ಹೇಳಿದ್ದಾರೆ. 1992ರ ಜೂನ್ 25 ರಂದು ಶಾರುಖ್  ಖಾನ್ ಅವರ ದಿವಾನ ಸಿನಿಮಾ ರಿಲೀಸ್ ಆಯಿತು, ಅದಕ್ಕೂ ಮುನ್ನ ಶಾರುಖ್ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದರು.
ನನ್ನನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಹೊರಗಡೆ ಕಾಯುತ್ತಿದ್ದಾರೆ.ಈ ಜನಗಳ ಅಪಾರ ಪ್ರೀತಿ ನನಗೆ ಪ್ರೇರಪಣೆ ಎಂದು ಹೇಳಿದ್ದಾರೆ.
ಈ ವರ್ಷದ ಈದ್ ನನಗೆ ತುಂಬಾ ವಿಶೇಷವಾಗಿದೆ, ಏಕೆಂದರೇ 25 ವರ್ಷಗಳ ಹಿಂದೆ 1992ರ ಜೂನ್ 25 ರಂದು ದಿವಾನಾ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದಿಂದ ಬಾಲಿವುಡ್ ನಲ್ಲಿ ಶಾರುಖ್ ನೆಲೆ ನಿಲ್ಲುವಂತಾಯಿತು.
25 ವರ್ಷ ಸುದೀರ್ಘ ಸಮಯ, ನನ್ನ ಜೀವನದ ಅರ್ಧಆಯಸ್ಸನ್ನು ಸಿನಿಮಾ ರಂಗದಲ್ಲೇ ಕಳೆದಿದ್ದೇನೆ. ಈ ವರ್ಶ ನನಗೆ 52 ವಯಸ್ಸಾಗುತ್ತದೆ.ಇಷ್ಟು ವರ್ಷ ನನ್ನನ್ನು ಪ್ರೀತಿಯಿಂದ ಸಹಿಸಿಕೊಂಡು ಬಂದ ಜನರಿಗೆ ನಾನು ಥ್ಯಾಂಕ್ಸ್ ಹೇಳುವುದಿಲ್ಲ ಎಂದು ಹೇಳಿ ಶಾರುಖ್ ಮಾಧ್ಯಮಗಳಿಗೆ ಕೈ ಮುಗಿದರು.
ಪುತ್ರಿ ಸುಹಾನಾ ಈಗ ಕ್ಯಾಮೆರಾವನ್ನು ಸುಲಭವಾಗಿ ಎದುರಿಸುತ್ತಿದ್ದಾಳೆ, ಮಗಳನ್ನು ನಟಿಯಾಗಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಕರೆತರುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾರುಖ್, ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುತ್ತಾರೆ ಎಂದರೇ ಅದರ ಅರ್ಥ, ಅವರು ನಟರಾಗಬೇಕು ಎಂಬುದಲ್ಲ, ನನ್ನ ಮಕ್ಕಳು ಅವರ ವಿದ್ಯಾಭ್ಯಾಸ ಮುಗಿಸಿದ ಮೇಲೆ, ಮುಂದಿನ ಯೋಚನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT