ನಟ-ನಿರ್ದೇಶಕ ಪವನ್ ಒಡೆಯರ್ 
ಸಿನಿಮಾ ಸುದ್ದಿ

ಪವನ್ ಒಡೆಯರ್ ಗೆ 'ಶಾದಿ ಭಾಗ್ಯ'; ಶ್ರೀನರಸಿಂಹ ನಿರ್ದೇಶನ

ತೆಲುಗು ಹಿಟ್ ಸಿನೆಮಾ 'ಪೆಳ್ಳಿ ಚೊಪ್ಪುಲು' ಕನ್ನಡಕ್ಕೆ 'ಶಾದಿ ಭಾಗ್ಯ'ವಾಗಿ ಬರಲು ಸಿದ್ಧವಾಗಿದೆ. ಈ ವಾರ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳಾಗಿವೆ.

ಬೆಂಗಳೂರು: ತೆಲುಗು ಹಿಟ್ ಸಿನೆಮಾ 'ಪೆಳ್ಳಿ ಚೊಪ್ಪುಲು' ಕನ್ನಡಕ್ಕೆ 'ಶಾದಿ ಭಾಗ್ಯ'ವಾಗಿ ಬರಲು ಸಿದ್ಧವಾಗಿದೆ. ಈ ವಾರ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳಾಗಿವೆ. 
ಈ ಮೊದಲು ಘೋಷಿಸಿದ್ದಂತೆ ನೃತ್ಯನಿರ್ದೇಶನದಿಂದ ನಿರ್ದೇಶನಕ್ಕೆ ಇಳಿದಿರುವ ಮುರಳಿ ಮಾಸ್ಟರ್ ಈ ಸಿನೆಮಾವನ್ನು ನಿರ್ದೇಶಿಸಬೇಕಿತ್ತು. ಆದರೆ ಸಮಯದ ಕಲಹದಿಂದ ಅವರು ಹಿಂದೆ ಸರಿದಿದ್ದಾರಂತೆ. ಈಗ ನಿರ್ದೇಶಕರ ಖುರ್ಚಿಯನ್ನು ಅಲಂಕರಿಸಿರುವವರು ಶ್ರೀನರಸಿಂಹ. 'ಶಾದಿ ಭಾಗ್ಯ'ದ ಮೂಲಕ ಅವರು ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 
ಪವನ್ ಒಡೆಯರ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿರುವ ಈ ಚೊಚ್ಚಲ ನಿರ್ದೇಶಕ ರಮೇಶ್ ಅರವಿಂದ್ ಅವರ 'ಪುಷ್ಪಕ ವಿಮಾನ' ಸಿನೆಮಾದಲ್ಲಿ ಕೂಡ ದುಡಿದ ಅನುಭವ ಹೊಂದಿರುವವರು. ಈಗ ಸ್ವತಂತ್ರ ನಿರ್ದೇಶಕನಾಗಿ ಹೊರಮೊಮ್ಮಲು ಉತ್ಸುಕರಾಗಿದ್ದಾರೆ. 
ಈ ಸುದ್ದಿಯನ್ನು ಧೃಢೀಕರಿಸುವ ನಿರ್ಮಾಪಕ ಹರ್ಷ ಖಾಸನೀಸ್ "ಮುರಳಿ ಮಾಸ್ಟರ್ ಅವರ ಪೂರ್ವನಿಯೋಜಿತ ಕಾರ್ಯಕ್ರಮಗಳಿಂದ ಈ ಸಿನೆಮಾ ನಿರ್ದೇಶಿಸಲು ಸಾಧ್ಯವಾಗುತ್ತಿಲ್ಲ ಆದುದರಿಂದ ನಾವು ನರಸಿಂಹ ಅವರನ್ನು ಕರೆತಂದಿದ್ದೇವೆ" ಎನ್ನುತ್ತಾರೆ. 
ಶ್ರದ್ಧ ಶ್ರೀನಾಥ್ ನಾಯಕನಟಿಯಾಗಿರುವ ಈ ಸಿನೆಮಾದಲ್ಲಿ, ನಿರ್ದೇಶಕ ಪವನ್ ಒಡೆಯರ್ ಹೀರೊ ಆಗಿ ನಟಿಸುತ್ತಿರುವುದು ವಿಶೇಷ. ಪವನ್ ಈ ಹಿಂದೆ 'ಬಹುಪರಾಕ್' ನಲ್ಲಿ ಅತಿಥಿ ನಟರಾಗಿದ್ದರು. ೨೦೧೪ ರಲ್ಲಿ ಬಿಡುಗಡೆಯಾದ 'ಪ್ರೀತಿ ಗೀತಿ ಇತ್ಯಾದಿ'ಯಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ನಾನು ನಟನಾಗಲೆಂದೇ ಚಿತ್ರರಂಗಕ್ಕೆ ಬಂದವನು ಎಂದು ತಿಳಿಸುವ ಪವನ್ "ಈಗ 'ಶಾದಿ ಭಾಗ್ಯ'ದಲ್ಲಿ ಮತ್ತೆ ನಟಿಸಲಿದ್ದೇನೆ" ಎನ್ನುತ್ತಾರೆ. 
ಈ ಪಾತ್ರಕ್ಕಾಗಿ ೧೫ ಕೆಜಿ ತೂಕ ಕಳೆದುಕೊಂಡಿರುವುದಾಗಿಯೂ ತಿಳಿಸುತ್ತಾರೆ ನಟ-ನಿರ್ದೇಶಕ ಪವನ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT