ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಡಿಮಾನೆಟೈಸೇಶನ್ ಬವಣೆಗಳ ಬಗ್ಗೆ ಭಾರತಿರಾಜ್ ಸಿನೆಮಾ ಚಿತ್ರೀಕರಣ ಪ್ರಾರಂಭ

ಖ್ಯಾತ ತಮಿಳು ಚಿತ್ರನಿರ್ದೇಶಕ ಭಾರತಿರಾಜ್ ಅವರ ಮುಂದಿನ ತಮಿಳು ಸಿನೆಮಾ 'ನವೆಂಬರ್ ೮ ಇರವು ಎತ್ತು ಮಣಿ' (ನವೆಂಬರ್ ೮ ರಾತ್ರಿ ಎಂಟು ಘಂಟೆ) ಮಂಗಳವಾರದಿಂದ ಚಿತ್ರೀಕರಣ ಪ್ರಾರಂಭಿಸಿದೆ.

ಚೆನ್ನೈ: ಖ್ಯಾತ ತಮಿಳು ಚಿತ್ರನಿರ್ದೇಶಕ ಭಾರತಿರಾಜ್ ಅವರ ಮುಂದಿನ ತಮಿಳು ಸಿನೆಮಾ 'ನವೆಂಬರ್ ೮ ಇರವು ಎತ್ತು ಮಣಿ' (ನವೆಂಬರ್ ೮ ರಾತ್ರಿ ಎಂಟು ಘಂಟೆ)  ಮಂಗಳವಾರದಿಂದ ಚಿತ್ರೀಕರಣ ಪ್ರಾರಂಭಿಸಿದೆ. ಇದು ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ ಉಂಟಾದ ಬವಣೆಗಳ ಬಗೆಗಿನ ಚಿತ್ರ. 
ಮುಖ್ಯ ಭೂಮಿಕೆಯಲ್ಲಿ ವಿದಾರ್ಥ್ ನಟಿಸಲಿದ್ದು, ಪ್ರಮುಖವಾಗಿ ಚೆನ್ನೈ ಮತ್ತು ಪುದುಚೆರಿಯಲ್ಲಿ ಚಿತ್ರೀಕರಣಗೊಳ್ಳಲಿದೆ. 
"ನೋಟು ಹಿಂಪಡೆತ ನಿರ್ಧಾರದ ನಂತರ ನಡೆದ ಘಟನೆಗಳು ಕಥೆಯಲ್ಲಿ ಕಾಣಿಸಿಕೊಳ್ಳಲಿವೆ. ಇದು ವಿಡಂಬನಾ ಚಿತ್ರ. ಹಿರಿಯ ವ್ಯಕ್ತಿಯ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ. ಯಾರು ಸಿಗದಿದ್ದರೆ ಭಾರತಿರಾಜ ಅವರೇ ಅದನ್ನು ಮಾಡುವ ಸಾಧ್ಯತೆ ಇದೆ" ಎಂದು ಸಿನೆಮಾ ತಂಡದ ಮೂಲಗಳು ತಿಳಿಸಿವೆ. 
ಎರಡು ತಿಂಗಳಲ್ಲಿ ಸಿನೆಮಾದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ರತ್ನಕುಮಾರ್ ಕಥೆ ಬರೆದಿದ್ದು, ಸಾಲೈ ಸಹದೇವಂ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 
"ಇಳಯರಾಜ ಅವರ ಜೊತೆಗೆ ಮಾತುಕತೆ ಜಾರಿಯಲ್ಲಿದ್ದು ಅವರು ಸಂಗೀತ ನೀಡುವ ಸಾಧ್ಯತೆಯಿದೆ" ಎನ್ನುತ್ತವೆ ಮೂಲಗಳು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT